ಗದಗ
ವೀರಗಣಾಚಾರಿ ಶರಣ ಮಡಿವಾಳ ಮಾಚಿದೇವರ ಜಯಂತಿ ನಿಮಿತ್ಯ, ಮಾಚಿದೇವರ ಕುರಿತು ಉಪನ್ಯಾಸ ಕಾರ್ಯಕ್ರಮ ಬೆಟಗೇರಿಯ ಮಾಚಿದೇವರ ಗುಡಿಯಲ್ಲಿ ನಡೆಯಿತು.
ಶರಣೆ ಸುಜಾತ ಮಡಿವಾಳರ ಹಾಗೂ ಶರಣೆ ಗಿರಿಜಾ ಹಸಬಿ ಮಾಚಿದೇವರ ಕಾಯಕನಿಷ್ಠೆ , ಅನ್ಯಾಯದ ವಿರುದ್ಧ ಅವರು ನಡೆಸಿದ ಹೋರಾಟ, ವಚನ ಸಾಹಿತ್ಯ ಸಂರಕ್ಷಣೆಯಲ್ಲಿ ಅವರು ವಹಿಸಿದ ಪ್ರಮುಖ ಪಾತ್ರವನ್ನು ಸ್ಮರಿಸಿಕೊಂಡರು.

ಅಧ್ಯಕ್ಷತೆಯನ್ನು ಜಾ.ಲಿಂ. ಮಹಾಸಭಾ ಜಿಲ್ಲಾಧ್ಯಕ್ಷ ಕೆ.ಎಸ್. ಚಟ್ಟಿ ವಹಿಸಿ ಮಾತನಾಡಿದರು.
ಮುಖ್ಯಅತಿಥಿಗಳಾಗಿ ಮಡಿವಾಳ ಸಮಾಜದ ಮುಖಂಡರಾದ ಫಕೀರಪ್ಪ ಮಡಿವಾಳರ, ಶಿವಪ್ಪ ಮಡಿವಾಳರ, ಬಸವರಾಜ ಮಡಿವಾಳರ, ಪರಸಪ್ಪ ಮಡಿವಾಳರ ವೇದಿಕೆ ಮೇಲಿದ್ದರು.

ಜಾಗತಿಕ ಲಿಂಗಾಯತ ಮಹಾಸಭಾ, ಶರಣ ಸಾಹಿತ್ಯ ಪರಿಷತ್, ಬಸವದಳ, ಬಸವಕೇಂದ್ರ ಮತ್ತು ಕದಳಿ ವೇದಿಕೆ ಸಂಘಟನೆಗಳು ಕಾರ್ಯಕ್ರಮ ಆಯೋಜಿಸಿದ್ದವು.

ಸಂಘಟನೆಗಳ ಪದಾಧಿಕಾರಿಗಳಾದ ಸುಧಾ ಹುಚ್ಚಣ್ಣವರ, ಅಕ್ಕಮಹಾದೇವಿ ಚಟ್ಟಿ, ಶಿವಲೀಲಾ ಅಕ್ಕಿ, ಗೌರಕ್ಕ ಬಡಿಗಣ್ಣವರ, ಶೇಖಣ್ಣ ಕವಳಿಕಾಯಿ, ವೀರಣ್ಣ ಲಿಂಗದಾಳ, ಬೂದಪ್ಪ ಅಂಗಡಿ ಸೇರಿದಂತೆ ಮಡಿವಾಳ ಸಮಾಜದ ಶರಣ ಶರಣಿಯರು ಭಾಗಿಗಳಾಗಿದ್ದರು.