ಲಿಂಗಸುಗೂರು
ತಾಲ್ಲೂಕಿನ ಕರಡಕಲ್ಲ ಗ್ರಾಮದ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಬಸವ ಮಂಟಪದಲ್ಲಿ ಮೇ 16 ರಿಂದ 19 ರವರೆಗೆ ಡಾ. ಮಹಾಂತ ಶಿವಯೋಗಿಗಳ 74ನೆಯ ಶರಣೋತ್ಸವ ನಡೆಯಲಿದೆ.
ಶರಣೋತ್ಸವ ಅಂಗವಾಗಿ ಶರಣ ಸಿದ್ದಾಂತ ವಿದ್ಯಾಪೀಠದ 54ನೇ ಶಿವಾನುಭವ ತರಬೇತಿ ಶಿಬಿರ ಮತ್ತು ವಚನ ಕಟ್ಟಿನ ಅಡ್ಡ ಪಲ್ಲಕ್ಕಿ ಉತ್ಸವ ವಿಜಯಮಹಾಂತೇಶ್ವರ ಮಠದ ಪೂಜ್ಯ ಗುರುಮಹಾಂತ ಮಹಾಸ್ವಾಮಿಗಳ ನೇತೃತ್ವದಲ್ಲಿ, ಲಿಂಗಸುಗೂರು ಮಠದ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳ ಸಮ್ಮುಖದಲ್ಲಿ ನಡೆಯಲಿದೆ.
ವಿಜಯ ಮಹಾಂತೇಶ್ವರ ಮಠದ ಸಮಸ್ತ ಸದ್ಭಕ್ತರು ಶಿವಾನುಭವ ತರಬೇತಿ ಶಿಬಿರಕ್ಕೆ ಸರ್ವರಿಗೂ ಸ್ವಾಗತ ಕೋರಿದ್ದಾರೆ.