ಮಣ್ಣಲ್ಲಿ ಮಣ್ಣಾದ ಮಾನ್ಯ..ನೋಡಿಲ್ಲಿ ನಿನ್ನ ಮಗನ ಪ್ರಲಾಪ

ಬೆಂಗಳೂರು

ಅಮ್ಮಾ …

ಅಜ್ಜ ನಡೆದನೆಂದು
ಅಪ್ಪನೂ ನಡೆದಿದ್ದಾನಂತೆ;
ನಾನೂ ನಡೆಯಬೇಕಂತೆ!
ಏಕೆಂದರೆ ಅಪ್ಪನ ಮಗನಲ್ಲವೆ ನಾನು?!

ಛೆ..!… ಕುಟ್ಟೆ ಹಿಡಿದ ಆಚಾರಕ್ಕೆಲ್ಲಾ
ಗೋಣು ಹಾಕುವ ದನವಾಗಿ …
ಹುಟ್ಟಿ … ಹುಟ್ಟಿಸಿ …
ಅರ್ಥವಿಲ್ಲದ ಸಂಪ್ರದಾಯದ
ಗೊಡ್ಡು ಕಷಾಯ ಕುಡಿದು
ರೋಗಿಯಾಗಿ ಸಾಯಬೇಕೇಕೆ?

ಅಮ್ಮಾ ….

ನನಗನಿಸುತ್ತಿದೆ…
ಅಜ್ಜ ಹಿಡಿದ ಸಂಪ್ರದಾಯದ ಬೆಲೂನಿಗೆ
ಅಪ್ಪನ ಆಚಾರ ವಿಚಾರಗಳ ಗಾಳಿ ತುಂಬಿ
ಪಟ್ಟಾಗಿ ಶಿವದಾರದ ಕಟ್ಹಾಕಿ…
ವಿಭೂತಿ ಬಳಿದು …
ಮೇಲೇರಬಿಟ್ಟರೆ…
ಅದೋ …ನೋಡಲ್ಲಿ …… ಬಸವನ ಕಂಡಂತೆ ..!!
ಮೈಮನವೆಲ್ಲಾ ಎಷ್ಟೋ …ಹಗುರಗೊ೦ಡಂತೆ !!

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HxAWJ403uVgK5HFZlxTVut

Share This Article
Leave a comment

Leave a Reply

Your email address will not be published. Required fields are marked *