ಶಿವಮೊಗ್ಗ
‘ಶಿವಾನುಭವ ಸಪ್ತಾಹ-2025’ ಅಂಗವಾಗಿ, ‘ವಚನ ದರ್ಶನ ಪ್ರವಚನ’ ಆಗಸ್ಟ್ 14 ರಿಂದ 20ರವರೆಗೆ, ಪ್ರತಿದಿನ ಸಂಜೆ 6.30ರಿಂದ ಬಸವ ಕೇಂದ್ರದಲ್ಲಿ ನಡೆಯಲಿದೆ.
ಚಿಕ್ಕಮಗಳೂರು ಬಸವತತ್ವ ಪೀಠ, ಶಿವಮೊಗ್ಗ ಬಸವ ಕೇಂದ್ರದ ಪೂಜ್ಯರಾದ ಡಾ. ಬಸವ ಮರುಳಸಿದ್ಧ ಸ್ವಾಮಿಗಳವರು ವಾರಪೂರ್ತಿ ಧರ್ಮ, ಸಂಸ್ಕೃತಿ, ನೀತಿ, ಸಂಸ್ಕಾರ, ದೇವ-ಜೀವ-ಜಗತ್ತು ವಿಷಯವಾಗಿ ಪ್ರವಚನ ಮಾಡಲಿದ್ದಾರೆ.
ಅಕ್ಕನ ಬಳಗದಿಂದ ಪ್ರತಿದಿನ ಗುರು ಕರುಣ ತ್ರಿವಿಧಿ ಪಾರಾಯಣ ನಡೆಯಲಿದೆ. ಶರಣರ ಬರುವೆಮಗೆ ಪ್ರಾಣ ಜೀವಾಳವೆಂದು ಬಸವ ಕೇಂದ್ರ ಹೇಳಿದೆ.



