ಮುಂಡರಗಿ
ಪಟ್ಟಣದ ಜ. ತೋಂಟದಾರ್ಯ ಶಾಖಾ ಮಠದಲ್ಲಿ ಆಷಾಢ ಮಾಸದ ನಿಮಿತ್ತ ಜುಲೈ ೮ ರಿಂದ ೨೩ರವರೆಗೆ ಪ್ರವಚನ ಜರುಗಲಿದೆ, ಮುಂಡರಗಿ ತೋಂಟದಾರ್ಯ ಮಠದ ಪೀಠಾಧಿಕಾರಿ ಪೂಜ್ಯ ನಿಜಗುಣಪ್ರಭು ತೋಂಟದಾರ್ಯ ಸ್ವಾಮಿಜಿ ಹೇಳಿದರು.
ಅವರು ಗುರುವಾರ ಪಟ್ಟಣದ ತೋಂಟದಾರ್ಯ ಮಠದಲ್ಲಿ ಪ್ರಾರಂಭವಾದ ಆಷಾಢ ಮಾಷದ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮತ್ತು ಕರ್ತೃ ಗದ್ದುಗೆಗೆ ವಚನಾಭಿಷೇಕ ಸಲ್ಲಿಸಿ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಪ್ರತಿ ವರ್ಷದಂತೆ ನಿತ್ಯ ಸಂಜೆ ೭ ಗಂಟೆಯಿಂದ ೮.೩೦ರವರೆಗೆ ಪ್ರವಚನ ಜರುಗಲಿದ್ದು, ಅತ್ತಿವೇರಿ ಬಸವಧಾಮದ ಬಸವೇಶ್ವರಿ ಮಾತಾಜಿಯವರು ಶರಣ ಚರಿತಾಮೃತ ಪ್ರವಚನ ನೀಡಿಲಿದ್ದಾರೆ. ಪ್ರತಿದಿನ ಪ್ರವಚನದ ನಂತರ ಸರ್ವರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.
ಜುಲೈ ೮ ರಂದು ಪ್ರವಚನದ ಉದ್ಘಾಟನೆಯ ದಿವಸ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದ ಹಡಪದ ಅಪ್ಪಣ್ಣನವರ ಜಯಂತಿ ಆಚರಿಸಲಾಗುವುದು. ಪ್ರವಚನದ ಅಂಗವಾಗಿ ಜುಲೈ ೨೦, ೨೧ ಹಾಗೂ ೨೨ ಮೂರು ದಿನಗಳ ಕಾಲ ವಿಶೇಷ ಕಾರ್ಯಕ್ರಮಗಳು ಜರುಗಲಿದೆ.
ಪ್ರವಚನ ಉದ್ದೇಶವೆಂದರೆ, ವಿಶ್ವದಲ್ಲಿ ಎಲ್ಲರೂ ಶಾಂತಿಯುತ ಜೀವನ ನಡೆಸಬೇಕು, ಯುದ್ದ ಭೀತಿಯಿಂದ ಮುಕ್ತರಾಗಿರಬೇಕು ಎಂಬುದಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತನು, ಮನ, ಧನದಿಂದ ಸಹಾಯ ಸಹಕಾರ ನೀಡುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರವಚನ ಸಮಿತಿ ಅಧ್ಯಕ್ಷ ಬಸಯ್ಯ ಗಿಂಡಿಮಠ, ಕಾರ್ಯದರ್ಶಿ ಈರಣ್ಣ ಮಡಿವಾಳ, ಎಸ್.ಎಸ್. ಗಡ್ಡದ, ಕೊಟ್ರೇಶ ಅಂಗಡಿ, ಪಾಲಾಕ್ಷಿ ಗಣದಿನ್ನಿ, ದೇವು ಹಡಪದ, ಪವನ್ ಚೋಪ್ರಾ, ಗಿರೀಶಗೌಡ ಪಾಟೀಲ, ಮುತ್ತು ಹಾಳಕೇರಿ, ಶರಣಪ್ಪ ಕುಬಸದ, ಸದಾಶಿವಯ್ಯ ಕಬ್ಬೂರಮಠ, ಡಿ.ಜಿ. ಪೂಜಾರ, ಶಿವಯೋಗಿ ಕೊಪ್ಪಳ, ಮುಕ್ತಾಯಕ್ಕ ಬಳಗದ ಸುಕನ್ಯಾ ಕಬ್ಬೂರಮಠ, ಮಂಗಳಾ ಕರ್ಜಗಿ ಸೇರಿದಂತೆ ಅನೇಕ ಶರಣ ಶರಣೆಯರು ಉಪಸ್ಥಿತರಿದ್ದರು.