‘ಒತ್ತಡದ ಜೀವನಶೈಲಿಗೆ ಯೋಗವು ಅತ್ಯಂತ ಅವಶ್ಯ’

ಬೆಳಗಾವಿ

ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ವಾರದ ಸತ್ಸಂಗ ಕಾರ್ಯಕ್ರಮ ಯೋಗದ ಕುರಿತಾಗಿ ನಡೆಯಿತು.

ಈಗಿನ ಒತ್ತಡದ ಜೀವನಶೈಲಿಗೆ ಯೋಗವು ಅತ್ಯಂತ ಅವಶ್ಯವಾಗಿದ್ದು, ಅನುಲೋಮ ವಿಲೋಮ ಓಂಕಾರ ಭ್ರಮರಿ ಧ್ಯಾನ ಮಾಡಬೇಕು ಇದರಿಂದ ನಾಡಿಗಳ ಶುದ್ದತೆ ಮತ್ತು ಉತ್ತಮ ಆರೋಗ್ಯ ಹೊಂದುವುದರ ಜೊತೆಗೆ ನೆಮ್ಮದಿಯ ಜೀವನ ನಡೆಸಲು ಅನುಕೂಲವಾಗುತ್ತದೆ ಎಂದು ಲಲಿತಾ ರುದ್ರೇಗೌಡರ ಯೋಗದ ಬಗ್ಗೆ ಮಾತನಾಡಿದರು.

ಇಳೆ ಮಳೆ ಬೆಳೆ ದಾನವಾಗಿ ಕೊಟ್ಟಂತಹ ದೇವರು ಮನುಷ್ಯರಿಂದ ಏನನ್ನು ಬಯಿಸುವುದಿಲ್ಲ, ನಿರ್ಮಲವಾದ ಮನಸ್ಸಿನ ಭಕ್ತಿಯಿಂದ ಪೂಜಿಸಿದರೆ ಸಾಕು. ಅಜ್ಞಾನಿಗಳು ದೇವರಿಗೆಂದು ಹರಕೆ ಹೊತ್ತು ಪ್ರಾಣಿಗಳನ್ನು ಬಲಿಕೊಡುವುದು ತಪ್ಪು, ಬೇಡುವಾತ ದೇವರಲ್ಲ. ಕುರಿ ಬೇಡ ಮರಿ ಬೇಡ ಮರೆಯದೆ ಪೂಜಿಸು ಕೂಡಲಸಂಗಮದೇವನ ಎಂದು ವಸಂತಕ್ಕಾ ಗಡ್ಕರಿಯವರು ವಚನ ವಿಶ್ಲೇಷಣೆಯಲ್ಲಿ ಹೇಳಿದರು.

ಸುನಿತಾ ನಂದೆಣ್ಣವರ ಸರ್ವಜ್ಞನ ವಚನವನ್ನು ವಿವರಿಸುತ್ತ ಮನಸ್ಸೆಂಬುದು ಮರ್ಕಟವಿದ್ದಂತೆ ಅದು ರೆಂಬೆ ಕೊಂಬೆಗಳನ್ನು ಜೀಗಿಯುತ್ತಾ ಹೋಗುತ್ತದೆ ಅದನ್ನು ನಿಯಂತ್ರಿಸಿ ದೇವರಲ್ಲಿ ನಿಲ್ಲುವಂತೆ ಮಾಡಬೇಕು ಆಗ ನಮಗೆ ನಿಜವಾದ ಆನಂದ ಸಿಗುವುದು ಎಂದು ಹೇಳಿದರು.

ಅರಿವು ಎಂದರೆ ಪ್ರಜ್ಞೆ, ಜಾಗೃತಿ, ಎಚ್ಚರ, ಜ್ಞಾನ. ಜ್ಞಾನಕ್ಕೆ ಸಮಾನವಾದುದು ಯಾವುದು ಇಲ್ಲ ಲೌಕಿಕ ಅರಿವು ಮಾನಸಿಕ ಅರಿವು ಕನಸ್ಸಿನ ಅರಿವು ಬೌತಿಕ ಅರಿವು ಮರೆವು, ಅರಿವು ಹೀಗೆ ಅರಿವಿನ ಹರವು ವಿಶಾಲವಾಗಿದ್ದು ಅಖಂಡವಾದ ಅನಂತವಾದ ಜ್ಞಾನವನ್ನು ಅರಿಯುವುದೆ ಬ್ರಹ್ಮ ಜ್ಞಾನವಾಗಿದೆ ಎಂದು ಪ್ರೊ. ಘೀವಾರಿಯವರು ತಮ್ಮ ಅನುಭಾವವನ್ನು ಹೇಳಿದರು.

ಏಣಗಿಮಠ ಅವರು ಮೊದಲು ನಮ್ಮನ್ನು ನಾವು ಅರಿಯಬೇಕು. ನಮ್ಮ ತಪ್ಪುಗಳನ್ನು ನಾವು ಒಪ್ಪಿಕೊಳ್ಳಬೇಕು. ನಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಶಂಕರ ಶೆಟ್ಟಿ ಅವರು ಮತ್ತು ಪ್ರೇಮಾ ಪುರಾಣಿಕ ಮಠ ಅವರು ವಚನ ವಾಚನ ಮಾಡಿದರು. ನಾಗರತ್ನಾ ಪಾಟಿಲರು ವಚನ ಗಾಯನ ಮಾಡಿದರು. ನಿರೂಪಣೆ ಶರಣ ಕಟ್ಟಿಮನಿ, ಪ್ರಾರ್ಥನೆಯನ್ನು ಸುನಿತಾ ನಂದೆಣ್ಣವರ, ಶೋಭಾ ಶಿವಳ್ಳಿ, ಲಲಿತಾ ರುದ್ರೇಗೌಡರ, ರೇಖಾ ಮುದ್ದಾಪುರ ನಡೆಸಿಕೊಟ್ಟರು. ಅನೇಕ ಶರಣ, ಶರಣೆಯರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FgE69G06eauFQg8Bv3ecgq

Share This Article
Leave a comment

Leave a Reply

Your email address will not be published. Required fields are marked *