ಪಂಚಾಚಾರ್ಯರು ಬಸವಣ್ಣನವರ ಪುರಾತನರು ಎನ್ನುವ ಕಟ್ಟುಕತೆ
ಪಂಚಾಚಾರ್ಯರ ನಿಜ ಸ್ವರೂಪ 7/12
ಪಂಚಾಚಾರ್ಯರು ತಾವು ಬಸವಣ್ಣನವರಿಗಿಂತ ಪ್ರಾಚೀನರು ಹಾಗೂ ಶ್ರೇಷ್ಠರು ಎಂದು ಹೇಳಿಕೊಳ್ಳುತ್ತಾರೆ. ಇವರ ಪ್ರಕಾರ ಬಸವಣ್ಣ ವೀರಶೈವ ಧರ್ಮದ ಒಬ್ಬ ಪ್ರಸಾರಕ ಮಾತ್ರ.
ಆದರೆ 16ನೇ ಶತಮಾನವರೆಗೆ ಎಲ್ಲೂ ಇವರ ಉಲ್ಲೇಖವಿಲ್ಲ. ಈಗಿರುವ ಐವರಲ್ಲಿ ನಾಲ್ಕು ಆಚಾರ್ಯರು ವೀರಶೈವಾಮೃತ ಮಹಾಪುರಾಣದಲ್ಲಿ (ಕ್ರಿ. ಶ. 1530) ಮೊದಲ ಬಾರಿ ಕಾಣಿಸಿಕೊಳ್ಳುತ್ತಾರೆ.
ಇವರು ಸ್ಥಾವರ ಲಿಂಗದಿಂದ ಉದ್ಭವಿಸುವುದು ಚತುರಾಚಾರ್ಯ ಪುರಾಣದಲ್ಲಿ (ಕ್ರಿ ಶ 1698). 17ನೇ ಶತಮಾನದಲ್ಲಿ ಕಾಶಿ ಪೀಠವನ್ನು ಸೇರಿಸಿಕೊಂಡು ಚತುರಾಚಾರ್ಯರು ಪಂಚಾಚಾರ್ಯರಾಗುತ್ತಾರೆ.
ಈ ಪರಂಪರೆ ಪುರಾಣದ ಅಗಸ್ತ್ಯನಷ್ಟು ಪ್ರಾಚೀನದು ಎನ್ನುವ ಸಿದ್ಧಾಂತ ಶಿಖಾಮಣಿ ರಚನೆಯಾಗಿದ್ದು 16ನೇ ಶತಮಾನದಲ್ಲಿ. ಅದರ ಕರ್ತೃ ಶಿವಯೋಗಿ ಶಿವಾಚಾರ್ಯ ಒಬ್ಬ ಕಾಲ್ಪನಿಕ ವ್ಯಕ್ತಿ.
ಶರಣರ ವಚನಗಳು ಸೇರಿದಂತೆ 16ನೇ ಶತಮಾನದವರೆಗೆ ಬರುವ ಯಾವ ಕೃತಿಯಲ್ಲೂ ಸಿದ್ಧಾಂತ ಶಿಖಾಮಣಿ ಅಥವಾ ಶಿವಯೋಗಿ ಶಿವಾಚಾರ್ಯನ ಪ್ರಸ್ತಾಪವೇ ಕಾಣಿಸುವುದಿಲ್ಲ.
12ನೇ ಶತಮಾನದ ಕೆಲ ವಚನಗಳು ಆಚಾರ್ಯರನ್ನು ಉಲ್ಲೇಖಿಸುತ್ತವೆ ಎನ್ನುವ ವಾದವಿದೆ. ಆದರೆ ಇವೆಲ್ಲ ನಂತರ ರಚನೆಯಾಗಿ, ಇವರಿಗೆ ಪ್ರಾಚೀನತೆ ಸೃಷ್ಟಿಸಲು ನಡೆದ ಕೃತಕ ಪ್ರಯತ್ನಗಳು.
(‘ಪಂಚಾಚಾರ್ಯರ ನಿಜಸ್ವರೂಪ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೭)