ನವದೆಹಲಿ
ಇತ್ತೀಚೆಗೆ ದೆಹಲಿ ಸಂಸತ್ ಆವರಣದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ
“ಗುರು ಬಸವೇಶ್ವರ ವಚನಾಮೃತಂ” ಪುಸ್ತಕವನ್ನು ವಿತರಿಸಲಾಯ್ತು.
ಈ ಕಿರು ಪುಸ್ತಕದಲ್ಲಿ ಆಯ್ದ ಕನ್ನಡ ವಚನಗಳನ್ನು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಿಗೆ ಅನುವಾದಿಸಲಾಗಿದೆ. ಉತ್ತರ ಭಾರತದ ಜನತೆಗೂ ಗುರು ಬಸವೇಶ್ವರರ ವಚನ ಸಾಹಿತ್ಯವನ್ನು ಅಧ್ಯಯನ ಮಾಡುವ ಪ್ರೇರಣೆಯಾಗಿ ಈ ಪುಸ್ತಕ ಬರೆಯಲಾಗಿದೆ.
ಪುಸ್ತಕದ ಅನುವಾದಕರಾಗಿರುವ ಜಹೀರಾಬಾದಿನ ಮಡಪತಿ ವಿ.ವಿ. ಮತ್ತು ಪರಮೇಶ್ವರ ಬಿರಾದಾರ್ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ತೆಲಂಗಾಣ ಬಿಜೆಪಿ ಒಬಿಸಿ ಮೋರ್ಚಾದ ಡಾ. ವೆನ್ನ ಈಶ್ವರಪ್ಪ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅವರು “ಗುರು ಬಸವೇಶ್ವರ ವಚನಾಮೃತಂ” ಪುಸ್ತಕದ ಪ್ರಮುಖ ದಾನಿಗಳಾಗಿದ್ದರು.
ಕಾರ್ಯಕ್ರಮದಲ್ಲಿ ವಿ. ಸೋಮಣ್ಣ ಸೇರಿದಂತೆ ಸೇರಿದಂತೆ ಹಲವಾರು ಕೇಂದ್ರ ಸಚಿವರು ಮತ್ತು ಸಂಸದರು ಭಾಗವಹಿಸಿದ್ದರು.