ಏಪ್ರಿಲ್ ತಿಂಗಳಲ್ಲಿ ಬಸವಣ್ಣ ದೇವರ ಮಠದ ವಚನ ಕಂಠಪಾಠ ಸ್ಪರ್ಧೆ

ಬಸವ ಮೀಡಿಯಾ
ಬಸವ ಮೀಡಿಯಾ

ನೆಲಮಂಗಲ

ರಾಜ್ಯಮಟ್ಟದಲ್ಲಿ ವ್ಯಕ್ತಿತ್ವ ವಿಕಸನಕ್ಕಾಗಿ 12ನೇ ಶತಮಾನದ ಬಸವಾದಿ ಶರಣರ ವಚನ ಕಂಠಪಾಠ ಸ್ಪರ್ಧೆಯನ್ನು ಎಪ್ರೀಲ್ 19 ಪವಾಡ ಶ್ರೀ ಬಸವಣ್ಣ ದೇವರ ಮಠದ ವತಿಯಿಂದ ಏರ್ಪಡಿಸಲಾಗಿದೆ. ಆಸಕ್ತಿಯುಳ್ಳವರಿಗೆ ಈ ಮಾಹಿತಿಯನ್ನು ತಿಳಿಸಬೇಕಾಗಿ ಎಂದು ಶ್ರೀಮಠದಿಂದ ಬಂದಿರುವ ಪ್ರಕಟಣೆ ಕೋರಿದೆ.

ಸ್ಪರ್ಧೆಯ ಬಹುಮಾನಗಳು:

ಪ್ರಥಮ ಬಹುಮಾನ 1000 ವಚನಗಳು ಹೇಳಿದವರಿಗೆ 1 ಲಕ್ಷ ರೂ.ಗಳು.
ದ್ವಿತೀಯ ಬಹುಮಾನ 75 ಸಾವಿರ ರೂ.ಗಳು.
ಹಾಗೂ ತೃತೀಯ 50ಸಾವಿರ ರೂಂ.ಗಳು.

ಸಮಾಧಾನಕರ ಬಹುಮಾನವನ್ನು ಸ್ಪರ್ಧಾ ಆಯೋಜಕರು ನಿಗದಿಪಡಿಸುತ್ತಾರೆ.

ಸ್ಪರ್ಧಾ ಪ್ರಾಯೋಜಕರು:
ಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಅಧ್ಯಕ್ಷರು,
ಪವಾಡ ಶ್ರೀ ಬಸವಣ್ಣ ದೇವರ ಮಠ, ನೆಲಮಂಗಲ ಟೌನ್, ನೆಲಮಂಗಲ, ಬೆಂಗಳೂರು ಗ್ರಾಮಾಂತರ ಜಿಲ್ಲೆ-562123.

ಸ್ಪರ್ಧೆಯ ನಿಯಮಗಳು :

  1. ಸ್ಪರ್ಧಾರ್ಥಿಗಳು ಸರಿಯಾಗಿ 8 ಗಂಟೆಗೆ ಕಡ್ಡಾಯವಾಗಿ ಹಾಜರಿರುವುದು.
  2. ವಚನ ಹೇಳುವಾಗ ನಿರರ್ಗಳವಾಗಿ, ಸ್ಪಷ್ಟವಾಗಿ, ವ್ಯಾಕರಣ ದೋಷವಿಲ್ಲದೆ ಹೇಳಬೇಕು.
  3. ನೀವು ಹೇಳುವ ವಚನಗಳು ಸ್ಪಷ್ಟವಾಗಿರುವ ಮುದ್ರಿತ/ ಲಿಖಿತವಾಗಿ ಬರೆದಿರುವ ಒಂದು ಪ್ರತಿಯನ್ನು ಕಡ್ಡಾಯವಾಗಿ ತೀರ್ಪುಗಾರರಿಗೆ ವಚನ ಹೇಳುವ ಮುನ್ನವೇ ಸಲ್ಲಿಸುವುದು. ವಚನ ಹೇಳುವ ಪ್ರತಿಯನ್ನು ಸಲ್ಲಿಸದಿದ್ದಲ್ಲಿ ಅಂಥವರನ್ನು ಸ್ಪರ್ಧೆಯಿಂದ ತಿರಸ್ಕರಿಸಲಾಗುವುದು.
  4. ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಯಾವುದೇ ರೀತಿಯ ವಯೋಮಿತಿ ಇರುವುದಿಲ್ಲ.
  5. ದಿನಾಂಕ : 18.04.2026 ರಾತ್ರಿ ಉಳಿಯಲು ಬರುವವರಿಗೆ ಅವಕಾಶ ಮಾಡಲಾಗಿದೆ.
  6. ಸ್ಪರ್ಧಾರ್ಥಿಗಳು ಹೇಳುವ ವಚನಗಳು ಬಸವಾದಿ ಶರಣರ ವಚನಗಳೇ ಆಗಿರಬೇಕು. ಅಂದರೆ 12ನೇ ಶತಮಾನದ ವಚನಕಾರರ ವಚನಗಳು ಮಾತ್ರ ಹೇಳಬೇಕು.

ದಿನಾಂಕ: 19.04.2026 ಸಮಯ ಬೆಳಗ್ಗೆ : 8ಕ್ಕೆ.

ಸ್ಪರ್ಧೆ ನಡೆಯುವ ಸ್ಥಳ:
ಪವಾಡ ಶ್ರೀ ಬಸವಣ್ಣ ದೇವರ ಮಠ, ನೆಲಮಂಗಲ ಟೌನ್,
ಬೆಂಗಳೂರು ಗ್ರಾಮಾಂತರ ಜಿಲ್ಲೆ -562123.

ಸಂಪರ್ಕಿಸಬೇಕಾದ ಪ್ರತಿನಿಧಿಗಳ ವಿವರ :

  1. ಅಭಿಲಾಷ್ ಎಂ. ಆರ್, 8147395591,
  2. ಜ್ಞಾನೇಶ ಟಿ. 9845454536,
  3. ಷಣ್ಮುಖಪ್ಪ 9980496763.
Share This Article
Leave a comment

Leave a Reply

Your email address will not be published. Required fields are marked *