ಪೇಜಾವರ ಶ್ರೀಗಳೇ ಬಹಿರಂಗ ಚರ್ಚೆಗೆ ಬನ್ನಿ

ಬೆಂಗಳೂರು

ವೈದಿಕ ಧರ್ಮದ ಶಾಸ್ತ್ರಗಳಲ್ಲಿ ಇರುವ ವಿಚಾರಗಳನ್ನು ವಚನಗಳು ಕನ್ನಡದಲ್ಲಿ ಮನ ಮನೆಗಳಿಗೆ ತಲುಪಿಸಿದರು ಎಂದು ಪೇಜಾವರ ಶ್ರೀಗಳು ಹೇಳಿರುವುದು ಸುಳ್ಳು.

ಸತ್ಯವೇನೆಂದರೆ ವಚನಕಾರರು ಸಂಸ್ಕೃತ ಶಾಸ್ತ್ರಗಳಲ್ಲಿ, ಪುರಾಣಗಳಲ್ಲಿ, ಆಗಮಗಳಲ್ಲಿ, ಉಪನಿಷತ್ತುಗಳಲ್ಲಿ ಇರುವ ಮನುಷ್ಯ ವಿರೋಧಿಯಾಗಿರುವ, ಮೌಢ್ಯಗಳ ವಿರೋಧಿ ವಿಚಾರಗಳನ್ನು ಸರಳ ಕನ್ನಡದಲ್ಲಿ ಮನ ಮನೆಗೆ ತಲಪಿಸಿದರು.

ಕರ್ಮಣ್ಯೇ ವಾಧಿಕಾರಸ್ತೇ
ಮಾ ಫಲೇಷು ಕದಾಚನ
ಮಾ ಕರ್ಮಫಲ ಹೇತುರ್ಭೂ
ಮಾ ತೇ ಸಂಗೋಸ್ತೂವ ಕರ್ಮಣೆ.

ಈ ಭಗವದ್ಗೀತೆಯ ಶ್ಲೋಕವನ್ನು ಉಲ್ಲೇಖ ಮಾಡುತ್ತಾ, ಉಡುಪಿಯ ಪೇಜಾವರ ಶ್ರೀಗಳು ಈ ಸಂಸ್ಕೃತ ನುಡಿಯನ್ನು ಬಸವಣ್ಣನವರು ಕನ್ನಡದಲ್ಲಿ ” ಕಾಯಕವೇ ಕೈಲಾಸ” ಎಂದು ಹೇಳಿದ್ದಾರೆ ಎಂದಿದ್ದಾರೆ. ಕರ್ಮ ಸಿದ್ಧಾಂತ ಹೇಳುವ ಗೀತೆಯ ನುಡಿಗೂ ಕಾಯಕವೇ ಸಿದ್ದಾಂತ ಹೇಳುವ “ಕಾಯಕವೇ ಕೈಲಾಸ” ನುಡಿಗೆ ಅಜಗಜಾಂತರ ವ್ಯತ್ಯಾಸ ಇದೆ.

ವೇದಗಳಲ್ಲಿ ಇರುವುದೆಲ್ಲ ವಚನಗಳಲ್ಲಿ ಇದೆ ಎಂಬ ಮನೋವ್ಯಾಧಿ ಬಿಟ್ಟು ಬಹಿರಂಗವಾಗಿ ಚರ್ಚೆಗೆ ಬನ್ನಿ.

77
ವಚನಗಳು ಶಾಸ್ತ್ರಗಳು ಒಂದೇ

ಶಾಸ್ತ್ರಗಳಲ್ಲಿ ಇರುವುದನ್ನೇ ವಚನಗಳು ಸರಳ ಕನ್ನಡದಲ್ಲಿ ಹೇಳಿದವು ಎಂದು ಪೇಜಾವರ ಶ್ರೀ ಹೇಳಿದ್ದಾರೆ.

ಪೇಜಾವರ ಶ್ರೀಗಳು ವೇದಿಕೆಯಲ್ಲಿ ಈ ಮಾತು ಹೇಳುವಾಗ ಸ್ವಾಮೀಜಿಯವರ ಪಕ್ಕದಲ್ಲಿ ಬಸವ ಸಮಿತಿಯ ಮುಖ್ಯಸ್ಥರಾದ ಅರವಿಂದ ಜತ್ತಿಯವರು ಸುಮ್ಮನೆ ಕುಳಿತ್ತಿದ್ದರು. ಬಸವ ಬಸವ ಎಂದು ಜಪಿಸುವ ನೀವುಗಳು ಇದಕ್ಕೆ ಪ್ರತಿಕ್ರಿಯೆ ನೀಡಿದೆ ಮೂಕ ಪ್ರೇಕ್ಷಕನಂತೆ ಕುಳಿತಿದ್ದು ಎಷ್ಟರಮಟ್ಟಿಗೆ ಸರಿ.

ಹೌದಪ್ಪನ ಜಾಗದಲ್ಲಿ ಹೌದಪ್ಪಾ ಎನ್ನುವುದು, ಅಲ್ಲಪ್ಪ ಎನ್ನುವ ಜಾಗದಲ್ಲಿ ಅಲ್ಲಪ್ಪಾ ಎಂದು ಹೇಳುವ ನೀವು ಬಸವ ಸಮಿತಿಯ ಮುಖ್ಯಸ್ಥರಾಗಿ ನೀವು ಸಮಾಜಕ್ಕೆ ಏನು ಸಂದೇಶ ನೀಡುತ್ತಿದ್ದೀರಿ ಎಂದು ಆತ್ಮಾವಲೋಕನ ಮಾಡಿಕೊಳ್ಳಿ.

ಶರಣರು ಸತ್ಯವನ್ನು ಲೋಕ ವಿರೋಧಿ ಆದರೂ ಗಟ್ಟಿಯಾಗಿ ಹೇಳು ಎಂದು ಹೇಳಿದ್ದಾರೆ. ದಾಕ್ಷಿಣ್ಯ ಪರ ನಿಲ್ಲಬೇಡ ಎಂದು ಹೇಳಿದ್ದಾರೆ.

ಕೊನೆಯದಾಗಿ ವೈದಿಕ ಧರ್ಮದ ಪೇಜಾವರ ಶ್ರೀಗಳೇ ವೈದಿಕದಲ್ಲಿ ಇರುವ ವಿಚಾರಗಳನ್ನು ಶರಣರ ವಚನಗಳಿಗೆ ಸಮೀಕರಿಸುವ ಉದ್ದೇಶವೇನು? ಎಂಬುದು ಸ್ಪಷ್ಟಪಡಿಸಿ.

ಶರಣರ ವಚನಗಳನ್ನು ಸುಟ್ಟು, ಶರಣರನ್ನು ಹತ್ಯೆ ಮಾಡಿದವರು ನೀವು ದೃತರಾಷ್ಟ್ರನ ಕುತಂತ್ರ ಅನುಸರಿಸುವ ನಿಮ್ಮ ದುರುದ್ದೇಶ ಲಿಂಗಾಯತರಿಗೆ ತಿಳಿಯುತ್ತಿದೆ ಎಚ್ಚರವಿರಲಿ.

Share This Article
6 Comments
  • ಈ ಆಹ್ವಾನವನ್ನು ಪೇಜಾವರ ಶ್ರೀಗಳು ಸ್ವೀಕರಿಸಲಿ.

  • ವೈದಿಕರ ಅಸತ್ಯದ ಹೇಳಿಕೆಯನ್ನ ವೇದಿಕೆಯಲ್ಲಿದ ನಮ್ಮ ಪೂಜ್ಯರು ಹಾಗು ಹಿರಿಯರು ಖಂಡಿಸದೆ ಮೌನವಾಗಿರುವ ಕಾರಣವೇನು? ದಾಕ್ಷಿಣ್ಯವೋ, ಕರುಣಿಯೋ ತಿಳಿಸಲಿ ಮತ್ತು ವೈದಿಕರು ನಿಮ್ಮ ಬಹಿರಂಗ ಚರ್ಚೆ ಆಹ್ವಾನ ಸ್ವೀಕಾರ ಮಾಡಲಿ

    • ಪೇಜಾವರ ಶ್ರೀಗಳು ಶರಣರ ವಿಚಾರ ವೇದಿಕೆಯಲ್ಲಿ ಮಾತನಾಡುತ್ತಾ ವೈಧಿಕ.ಧರ್ಮದ ಶಾಸ್ತ್ರಗಳಲ್ಲಿ ಇರುವುದನ್ನೇ ಶರಣರು ವಚನಗಳ ಮೂಲಕ ಕನ್ನಡದಲ್ಲಿ ಹೇಳಿದ್ದಾರೆ ಎಂದು ಸುಳ್ಳು ಹೇಳುತ್ತಿರುವಾಗ ಸಮಾರಂಭದ ಮುಖ್ಯ ವ್ಯವಸ್ಥಾಪಕರು ಮತ್ತು ಬಸವತತ್ವ ಪ್ರಚಾರದಲ್ಲಿ ತಂದೆಯ ಕಾಲದಿಂದಲೂ ಮುಂದೆ ಇರುವ ಅರವಿಂದ ಜತ್ತಿ ಅಣ್ಣನವರು ಏಕೆ ಮೌನವಾಗಿದ್ದರು ಎಂಬುದಕ್ಕೆ ಅವರೇ ಸಮಂಜಸ ಉತ್ತರ ಕೊಡುವ ಅವಶ್ಯಕತೆ ಇದೆ. ಈ ವಿಚಾರವನ್ನು ಇದೆ ತಿಂಗಳ 17 ರಂದು ಧಾರವಾಡ ದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಲಿಂಗಾಯತ ಮಠಾಧೀಶರ ಒಕ್ಕೂಟ ಹಮ್ಮಿಕೊಂಡಿರುವ ಸಭೆಯಲ್ಲಿ ಚರ್ಚಿಸಿ ಸೂಕ್ತ ಉತ್ತರ ನೀಡಲಾಗುತ್ತೆ.

  • ಲಿಂಗ ಸಾಕ್ಷಿ ಎಲ್ಲಿ ಮರೆಯಾಯಿತೊ ಎಲ್ಲಾ ಅಯೋಮಯ
    ಬಸವ ಗುರುವೆ ಕರುಣಿಸು ತಂದೆ ಕರುಣಿಸು.
    ವೈದಿಕರ ಅಟ್ಟಹಾಸ ಮೆರೆಯುತ್ತಿದೆ.

    • ಪೇಜಾವರರ ಈ ಹೆಳಿಕೆಯಿಂದ ಆಶ್ಚಯ೯ಪಡಬೆಕಾದ್ದೆನೂಯಿಲ್ಲಾ ಯಾಕೆಂದರೆ ಅವರು ಅವರ ಮನೂವಾದದ ಸಿದ್ದಾಂತಕ್ಕೆ ಬದ್ಧರಾಗಿದ್ದಾರೆ.
      ನಾವು ಆಶ್ಚಯ೯ಪಡಬೆಕಾದ್ದು ಜತ್ತಿ ಅಣ್ಣ ತಮ್ಮ ಪ್ರತಿ ಮಾತಿಗೂ ಮುಂಚೆ ,ಲಿಂಗ ಸಾಕ್ಷಿಯಾಗಿ & ಬಸವ ಸಾಕ್ಷಿಯಾಗಿ ಆಡುವ ಮಾತುಗಳಿಂದ ಅತಿಯಾದ ವಿನಯವಂತಿಕೆ ಯು ಕೆಲವರಿಗೆ ಸಂಶಯಕ್ಕೆ ಆಸ್ಪದ ವಾಗಿತ್ತು ,ಈಗ ಇವರೊಳಗಿನ ಲಿಂಗ ಸಾಕ್ಷಿಗಳು ಯತ್ತಹೊಯಿತು.?

Leave a Reply

Your email address will not be published. Required fields are marked *

ಸಂಸ್ಥಾಪಕ ಅಧ್ಯಕ್ಷ ಹಾಗೂ ಪದಾಧಿಕಾರಿಗಳು, ಲಿಂಗಾಯತ ಧರ್ಮ ಅಧ್ಯಯನ ಕೇಂದ್ರ ಬೆಂಗಳೂರು.