KLE ಚೇರಮನ್ ಹುದ್ದೆಯಿಂದ ಪ್ರಭಾಕರ ಕೋರೆ ಹಠಾತ್ ನಿರ್ಗಮನ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಳಗಾವಿ

ಪ್ರತಿಷ್ಠಿತ ಕರ್ನಾಟಕ ಲಿಂಗಾಯತ ಎಜುಕೇಶನ್ ಸೊಸೈಟಿ (KLE)ಯನ್ನು 40 ವರ್ಷಗಳ ಕಾಲ ಆಳುವ ಮೂಲಕ ಸಂಸ್ಥೆಗೆ ಜಾಗತಿಕ ಮನ್ನಣೆ ತಂದುಕೊಟ್ಟು ಸುವರ್ಣ ಯುಗವನ್ನಾಗಿಸಿದ್ದ ಡಾ. ಪ್ರಭಾಕರ ಕೋರೆ ಚೇರಮನ್ ಹುದ್ದೆಯಿಂದ ಹಠಾತ್ ಹಿಂದಕ್ಕೆ ಸರಿದಿದ್ದಾರೆ.

ಗುರುವಾರ ನಡೆದ ಸಂಸ್ಥೆಯ ಆಡಳಿತ ಮಂಡಳಿ ಚುನಾವಣೆಯಲ್ಲಿ ಅವರನ್ನು ಬಿಟ್ಟು, ಉಳಿದ 14 ಮಂದಿಯೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೊರೆಯವರ ಪುತ್ರಿ ಡಾ.ಪ್ರೀತಿ ದೊಡವಾಡ ನೂತನ ನಿರ್ದೇಶಕ ಮಂಡಳಿಯಲ್ಲಿದ್ದು, ಪುತ್ರ ಅಮಿತ್ ಕೋರೆ ಸಹ ಮುಂದುವರಿದಿದ್ದಾರೆ.

ಫೆಬ್ರವರಿ 7 ಹುಬ್ಬಳ್ಳಿಯಲ್ಲಿ, ಫೆಬ್ರವರಿ 8ರಂದು ಬೆಳಗಾವಿಯಲ್ಲಿ ಮತದಾನ ನಿಗದಿಯಾಗಿತ್ತು. ಶುಕ್ರವಾರ (ಜನವರಿ 23) ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು. ಈ ಹಿಂದೆ ಇದ್ದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಆಡಳಿತ ಮಂಡಳಿ ಸದಸ್ಯರು ನಾಮ‍ಪತ್ರ ಸಲ್ಲಿಸಿದರೂ, ಪ್ರಭಾಕರ ಕೋರೆ ಅವರು ಮಾತ್ರ ನಾಮಪತ್ರ ಸಲ್ಲಿಸಲು ನಿರಾಕರಿಸಿದರು. ಇದರಿಂದಾಗಿ ಎಲ್ಲರೂ ಅವಿರೋಧ ಆಯ್ಕೆಯಾಗಿದ್ದು, ಮುಂದೆ ನಡೆಯಬೇಕಿದ್ದ ಮತದಾನವನ್ನು ರದ್ದು ಮಾಡಲಾಗಿದೆ ಎಂದು ಸಂಸ್ಥೆಯ ಚುನಾವಣಾಧಿಕಾರಿ ಎಸ್.ಎಸ್.ಜಲಾಲಪುರೆ ತಿಳಿಸಿದ್ದಾರೆ.

ಮಹಾಂತೇಶ ಕೌಜಲಗಿ ಅಧ್ಯಕ್ಷರಾಗಿ, ಬಸವರಾಜ ತಟವಟಿ ಉಪಾಧ್ಯಕ್ಷರಾಗಿ, ಅಮಿತ್ ಕೋರೆ, ಪ್ರವೀಣ ಬಾಗೇವಾಡಿ, ಪ್ರೀತಿ ದೊಡವಾಡ, ಮಹಾಂತೇಶ ಕವಟಗಿಮಠ, ಮಲ್ಲಿಕಾರ್ಜುನ ಕೊಳ್ಳಿ, ವಿಜಯ ಮೆಟಗುಡ್ಡ, ಜಯಾನಂದ ಮುನವಳ್ಳಿ, ಮಂಜುನಾಥ ಮುನವಳ್ಳಿ, ಬಸವರಾಜ ಪಾಟೀಲ, ವಿಶ್ವನಾಥ ಪಾಟೀಲ, ಯಲ್ಲನಗೌಡ ಪಾಟೀಲ, ಅನಿಲ ಪಟ್ಟೇದ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

36 ಅಂಗ ಸಂಸ್ಥೆಗಳಿಂದ 316 ಅಂಗಸಂಸ್ಥೆಗಳಿಗೆ ಏರಿಸುವ ಮೂಲಕ ಕೆಎಲ್ಇ ಸಂಸ್ಥೆಗೆ ಅಕ್ಷರಶಃ ಸುವರ್ಣ ಯುಗವನ್ನು ತಂದುಕೊಟ್ಟಿದ್ದ ಪ್ರಭಾಕರ ಕೋರೆ ನಿರ್ಗಮನ ಸಂಸ್ಥೆಗಷ್ಟೇ ಅಲ್ಲ, ಇಡೀ ರಾಜ್ಯಕ್ಕೆ ದೊಡ್ಡ ಶಾಕ್ ಆಗಿದೆ.

ತಮ್ಮ 36ನೇ ವಯಸ್ಸಿನಲ್ಲಿ ಕೆಎಲ್ಇ ಚುಕ್ಕಾಣಿ ಹಿಡಿದು ಮಿಂಚಿನ ವೇಗದಲ್ಲಿ ಸಂಸ್ಥೆಯನ್ನು ಬೆಳೆಸಿದವರು ಕೋರೆಯವರು. ಇಷ್ಟು ಬೇಗ ಅವರು ಹಿಂದಕ್ಕೆ ಸರಿಯುತ್ತಾರೆ ಎಂದು ಯಾರೂ ಅಂದುಕೊಂಡಿರಲಿಲ್ಲ.

ಕಳೆದ 40 ವರ್ಷಗಳಲ್ಲಿ ಆಡಳಿತ ನಡೆಸಿದ ಬಹುತೇಕ ಎಲ್ಲ ಮುಖ್ಯಮಂತ್ರಿಗಳು, ಪ್ರಧಾನ ಮಂತ್ರಿಗಳು, ರಾಷ್ಟ್ರಪತಿಗಳನ್ನು ಕೆಎಲ್ಇ ಸಂಸ್ಥೆಗೆ ಕರೆಸುವ ಮೂಲಕ ಮತ್ತೊಂದು ಸಾಧನೆ ಮಾಡಿದ್ದು, ಪ್ರಭಾಕರ ಕೋರೆ. ಸಾಗರದಾಚೆಗೂ ಕೆಎಲ್ಇ ಸಂಸ್ಥೆಯನ್ನು ದಾಟಿಸಿ, ವಿಶ್ವ ಮಾನ್ಯತೆ ಕೊಡಿಸಿದವರು ಅವರು.

ನಮ್ಮ ಮನೆಯಲ್ಲೇ ಮೂವರು ಆಡಳಿತ ಮಂಡಳಿಯಲ್ಲಿ ಇರುವುದು ಸರಿಯಲ್ಲ ಎಂದು ಹೇಳಿ ತಾವು ನಾಮಪತ್ರ ಹಿಂದಕ್ಕೆ ಪಡೆದರು ಎಂದು ಸುದ್ದಿಮೂಲಗಳು ತಿಳಿಸಿವೆ. ಇನ್ನೊಂದು ಮೂಲಗಳ ಪ್ರಕಾರ ಯುವಕರಿಗೆ ಅವಕಾಶ ಮಾಡಿಕೊಡಬೇಕೆನ್ನುವ ದೃಷ್ಟಿಯಿಂದ ಹಿಂದೆ ಸರಿದಿದ್ದಾರೆ.

ಮುಂದಿನ ದಿನಗಳಲ್ಲಿ ಸಂಸ್ಥೆಯನ್ನು ಬೀಳಲು ಕೊಡದೆ ಮಾರ್ಗದರ್ಶಕರಾಗಿದ್ದು, ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

ಫೆಬ್ರವರಿ 8ರಂದು ಕೆಎಲ್ಇ ಸಂಸ್ಥೆಗೆ ನೂತನ ಚೇರಮನ್ ಆಯ್ಕೆ ನಡೆಯಲಿದ್ದು, ಕೊರೆಯವರು ನಿರ್ಮಿಸಿದ ದಾಖಲೆ ಮಾತ್ರ ಕೆಎಲ್ಇ ಇತಿಹಾಸದಲ್ಲಿ ಎಂದೂ ಅಳಿಸಲಾಗದ ದಾಖಲೆಯಾಗಿಯೇ ಇರಲಿದೆ. ಕೆಎಲ್ಇ ಸಂಸ್ಥೆಯನ್ನು ಸ್ಥಾಪಿಸಿದ ಸಪ್ತ ಋಷಿಗಳ ಸಾಲಿನಲ್ಲಿ ಸ್ಥಾನಪಡೆದು ಅಷ್ಟಮ ಋುಷಿ ಎನ್ನುವುದಕ್ಕೆ ಅವರು ಅರ್ಹರಾಗಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FoRS2gZkHkaEzqaRtWk0ZP

Share This Article
14 Comments
  • ಲಿಂಗಾಯತ ಸಂಸ್ಥೆ ಅವರ ಸೇವೆ ಚನ್ನಾಗಿ ಮಾಡಿ ಯುವಕರು ತಮ್ಮ ಮಾದರಿ ಅನುಸಸರಿಸಿ ನಡೆಸುವ ಪಡೆ ಕಟ್ಟಿದ್ದಾರೆ ಅವರ ಕಾರ್ಯ ಕ್ಕೆ ವಿರಾಮ ಹೇಳಿದ್ದು ಮೆಚ್ಚುಗೆ ವಿಷಯ ಅವ್ರಿಗೆ ಧನ್ಯವಾದಗಳು ಜೈ ಲಿಂಗಾಯತ ಜಯ್ ಬಸವ 💐👏🏻

  • ಬಿಡದೆ ಮಾರ್ಗದರ್ಶಕರಾಗಿ ಇರಬೇಕು. ಅನ್ನುವುದು ನನ್ನ ಅನಿಸಿಕೆ. ಇವರೊಬ್ಬ ಸಮಾಜದ ಚಲದಂಕ ಮಲ್ಲ

    • KLE has become family business
      The name of KLE Hospital has changed in His Name
      His daughter son are managing committee members son in law is secretatary
      There is heavy amount of corruption
      Lingayats are neglected
      Non eligible Malaysian students took admission for medical
      Kore has forgotten Founder members and their family members

  • The organisation that was once formed to promote education by the Lingayat elders is being treated as a personally run family business. No new directors or new members are elected. better late than never. Hopefully someone credible to take forward the legacy of KLES.

  • It is true that KLE society could do well in last 40 years .
    However later it became family business
    No Lingayat students were given any seats or freeship
    Same with HKE BLDE BVVS
    They became rich with the help of Lingayat society
    Our ancestors and founder members were not selfish unlike now
    Hope to find the bright future ahead with new leader

    • This is what they do
      See three members from Same family
      What is the pont of society then if it is a family run business

  • ಲಿಂಗಾಯತ ಧರ್ಮದ ಬಗ್ಗೆ ಮಾತನಾಡುವ ಇವರು ವೀರಶೈವರ ಪರವೂ ನಿಲ್ಲುತ್ತಾರೆ
    ಇದು ಖಾಸಗಿ ಕುಟುಂಬ ವ್ಯವಹಾರ ಮಾಡಿ
    ಸಾಕಷ್ಟು ಆಸ್ತಿ ಮಾಡಿ.ಕೊಂಡಿದ್ದಾರೆ
    ಮಲೇಷ್ಯಾ ಮತ್ತು ಹೊರ ರಾಷ್ಟ್ರದವರಿಗೆ ಮಣೆ ಹಾಕುವ ಕೆ ಎಲ್ ಈ ಬೀ ಎಲ್ ಡಿ ಈ ಬಾಪೂಜಿ ವೀರಶೈವ ವಿದ್ಯಾವರ್ಧಕ HKE JSS academy ಹೀಗೆ ಎಲ್ಲಾ ಸಂಸ್ಥೆಗಳು ತಮ್ಮ ಸ್ವಾರ್ಥ ಬೆಳೆಸಿಕೊಂಡಿವೆ

  • Should not be a family business
    why more than one member from same family.
    Each time members should get replace by someone new from the society rather from the same family

  • your achievements are can’t measure sir, Off the record whole Veerashaiv Lingayat comunity need your valuable guidance,Real lingayat leader you are sir,

  • ಪ್ರಭಾಕರ್ ಕೋರೆ ಒಳ್ಳೆಯ ಕೆಲಸವನ್ನೇ ಮಾಡಿದ್ದಾರೆ. ಅವರಿಗೆ ಈಗ 78 ವರ್ಷ. ಇನ್ನೆಷ್ಟು ವರ್ಷ ಇರಬೇಕಿತ್ತು ಅಧ್ಯಕ್ಷರಾಗಿ. ಮಗ ಮತ್ತು ಮಗಳು ಇಬ್ಬರನ್ನು ನಿರ್ದೇಶಕರನ್ನಾಗಿ ಮಾಡಿ ಕುಟುಂಬದ ಹಿತವನ್ನೂ ಮುಂದುವರಿಸಿದ್ದಾರೆ.

  • ದಯವಿಟ್ಟು, ಕೇಳಿ ಅನುಭವದಲ್ಲಿ ಅಮೃತವಿದೆ ಪ್ರಭಾಕರ ಕೊರೆಯವರನ್ನ ನಿರ್ಲಕ್ಷಿಸಬೇಡಿ ಆವರನ್ನು ಅಜೀವ ಗೌರವ ಅಧ್ಯಕ್ಷರಾಗಿ ಮಾಡಿ.

Leave a Reply

Your email address will not be published. Required fields are marked *