ಮಾತಾಜಿ ಇಲ್ಲಾಂತ ‘ಬಚ್ಚಾ’ ಸ್ವಾಮೀಜಿಗಳು ಬಾಲ ಬಿಚ್ಚಬಾರದು: ಸತ್ಯದೇವಿ ಮಾತಾಜಿ

ಮಾತಾಜಿ ಸಂಕುಲ ಇವತ್ತಿಗೂ ಇದೆ, ಪಾಠ ಕಲಿಸುತ್ತೇವೆ ಅನ್ನುವವರಿಗೆ ಪಾಠ ಕಲಿಸಬೇಕಾಗುತ್ತದೆ, ಎಂದು ಎಚ್ಚರಿಕೆ ನೀಡಿದ್ದಾರೆ

ಬೀದರ್

ವೀರಶೈವ ಪದ ತೆಗೆಯಿರಿ ಅನ್ನುವವರಿಗೆ ಪಾಠ ಕಲಿಸಿ ಅಂತ ಹೇಳಿ ಕಾಶಿ ಶಾಖಾಮಠದ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ದೊಡ್ಡ ವಿವಾದ ಹುಟ್ಟಿಸಿದ್ದಾರೆ.

ಇದಕ್ಕೆ ವಿಡಿಯೋ ಪ್ರತಿಕ್ರಿಯೆ ನೀಡಿರುವ ಬೀದರಿನ ಬಸವ ಮಂಟಪದ ಪೂಜ್ಯ ಸತ್ಯದೇವಿ ಮಾತಾಜಿ ನೀವು ವೀರಶೈವರು ಅಂತ ಹೋಗ್ರಿ, ನಮ್ಮದೇನು ತಕರಾರಿಲ್ಲ, ಆದರೆ ಲಿಂಗಾಯತರ ಜೊತೆ ಜೋತು ಬಿದ್ದುಕೊಳ್ಳಬೇಡಿ. ಲಿಂಗಾಯತರು ವೀರಶೈವರು ಬೇರೆ ಬೇರೆ ಅನ್ನೋರು ದಾರಿ ತಪ್ಪಿಸುತ್ತಿಲ್ಲ, ನೀವು ತಪ್ಪಿಸುತ್ತಿದೀರ ಎಂದು ಹೇಳಿದ್ದಾರೆ.

ರಾಜಶೇಖರ ಶ್ರೀ ಲಿಂಗಾಯತರಿಗೆ ದಾರಿ ತಪ್ಪಿಸಿದ ಮಾತೆ ಮಹಾದೇವಿ ಅವರಿಗೆ ತಕ್ಕ ಶಿಕ್ಷೆ ಆಯಿತು ಎಂದು ಹೇಳಿದ್ದರು. ಅದಕ್ಕೆ ಮಾತಾಜಿಗೆ ಯಾರು ಏನು ಶಿಕ್ಷೆ ಕೊಟ್ಟರು, ಎಂದು ಸತ್ಯದೇವಿ ಮಾತಾಜಿ ಕೇಳಿದ್ದಾರೆ.

ನೀವು ದಾರಿ ತಪ್ಪಿಸಿದ್ದ ಸಮಾಜದಲ್ಲಿ ಅವರು ಜಾಗೃತಿ ಮೂಡಿಸಿದ್ದಾರೆ. ಮಾತಾಜಿ ಇಲ್ಲಾಂತ ಬಚ್ಚಾ ಸ್ವಾಮೀಜಿಗಳು ಬಾಲ ಬಿಚ್ಚಬಾರದು, ಅವರ ಸಂಕುಲ ಇವತ್ತಿಗೂ ಇದೆ, ಎಂದು ಎಚ್ಚರಿಸದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/EeBeeIO5TisIVCASg0Dpbn

Share This Article
Leave a comment

Leave a Reply

Your email address will not be published. Required fields are marked *

ಪೂಜ್ಯ ಸದ್ಗುರು ಸತ್ಯದೇವಿ ಮಾತಾಜಿ, ಬಸವ ಮಂಟಪ, ಬೀದರ್