ಈ ಎಲ್ಲ ಶರಣರಿಗೆ ಪ್ರಯೋಗ ಭೂಮಿಯಾದದ್ದು ಇದೆ ಬಸವಕಲ್ಯಾಣ.
(ಕಲಬುರಗಿಯಿಂದ ಹುಮನಾಬಾದಗೆ ಹೋಗುವ ರಸ್ತೆಗೆ ರೇಣುಕಾಚಾರ್ಯ ಮಾರ್ಗವೆಂದು ಹೆಸರಿಡುವ ಪ್ರಸ್ತಾವನೆಯನ್ನು ವಿರೋಧಿಸಿ ಜಾಗತಿಕ ಲಿಂಗಾಯತ ಮಹಾಸಭಾ ಕಲಬುರಗಿ ಮಹಾನಗರ ಪಾಲಿಕೆಗೆ ಬರೆದಿರುವ ಪತ್ರ)
ಇವರಿಗೆ
ವಲಯ ಆಯುಕ್ತರು
ವಲಯ ಕಚೇರಿ
ಕಲಬುರಗಿ ಮಹಾನಗರ ಪಾಲಿಕೆ, ಕಲಬುರಗಿ
ಈ ಮೇಲ್ಕಾಣಿಸಿದ ಉಲ್ಲೇಖದನ್ವಯ ಕಲಬುರಗಿಯಿಂದ ಹುಮನಾಬಾದಿಗೆ ಹೋಗುವ ಮುಖ್ಯ ರಸ್ತೆಗೆ ಜಗದ್ಗುರು ರೇಣುಕಾಚಾರ್ಯ ಮಾರ್ಗವೆಂದು ಹೆಸರಿಡದಂತೆ ಸಲ್ಲಿಸಿದ ತಕರಾರು ಅರ್ಜಿಗೆ ಸ್ಪಂದಿಸಿದ್ದಕ್ಕಾಗಿ ತಮಗೆ ಮೊದಲು ದನ್ಯವಾದಗಳು.
ಸದರಿ ವಿಷಯ ಕುರಿತು ನಡೆಸುತ್ತಿರುವ ವಿಚಾರಣೆಗೆ ನಾವು ತಾವು ಕರೆದ ದಿನಾಂಕ ಮತ್ತು ಸಮಯದಂದು ಹಾಜರಾಗುವ ಮೂಲಕ ಈ ಕೆಳಕಂಡ ಸ್ಪಷ್ಟಿಕರಣ ನೀಡಲು ಬಯಸುತ್ತೇವೆ.
ಮಾನ್ಯರೆ, ತಮಗೆ ಗೊತ್ತಿರುವಂತೆ ಬಸವಕಲ್ಯಾಣದ ಹೆಬ್ಬಾಗಿಲು ಎನಿಸಿಕೊಂಡಿರುವ ಕಲಬುರಗಿಯು ಬಸವಾದಿ ಶಿವಶರಣರ ಪ್ರಯೋಗ ಭೂಮಿಯಾಗಿದೆ. ಸುಮಾರು ಒಂಬತ್ತು ನೂರು ವರ್ಷಗಳ ಹಿಂದೆಯೇ ಈ ನಾಡಿನಲ್ಲಿ 770 ಶಿವಶರಣರು ನಾಡಿನ ಮೂಲೆ ಮೂಲೆಯಿಂದ ಆಗಮಿಸಿ ಬಹುದೊಡ್ಡ ಆಧ್ಯಾತ್ಮಿಕ ಕ್ರಾಂತಿಯನ್ನು ಮಾಡಿ ಹೋಗಿದ್ದು ಅಚ್ಚಳಿಯದ ಇತಹಾಸವಾಗಿ ದಾಖಲಾಗಿದೆ.
ಅವರು ಅಂದು ಮಾಡಿದ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಕ್ರಾಂತಿಯು “ನ ಭೂತೋ ನ ಭವಿಷ್ಯತಿ” ಎಂಬ ಹೆಗ್ಗಳಿಕೆಗೆ ಭಾಜನವಾಗಿದೆ. ವಿಶ್ವದಲ್ಲಿಯೇ ಪ್ರಥಮ ಬಾರಿಗೆ ದುಡಿಯುವ ಜನಸಮುದಾಯಗಳು ಒಗ್ಗೂಡಿ ನಿಸರ್ಗ ಧರ್ಮವನ್ನು ಕುರಿತು ತಾರ್ಕಿಕವಾಗಿ ಮಾತಾಡಿದ್ದು ಅವರೇ ಬರೆದ ವಚನಗಳಲ್ಲಿ ಉಕ್ತವಾಗಿದೆ.
ಅನುಭವ ಮಂಟಪ ಎಂಬ ನವೀನ ಕಲ್ಪನೆ ಕೊಟ್ಟ ಶಿವಶರಣರು ಜಗತ್ತಿಗೆ ಸಮಾನತೆಯ ಸಂದೇಶ ಕೊಟ್ಟಿದ್ದಾರೆ. ಪರಂಪರೆಯ ಉದ್ದಕ್ಕೂ ಮುಕ್ತ ವೇದಿಕೆ ಎನಿಸಿಕೊಂಡಿದ್ದ ಅನುಭವ ಮಂಟಪದ ಪರಿಕಲ್ಪನೆ ಅನುರಣಿಸುತ್ತಲೆ ಇದೆ. ಹೀಗೆಂದೇ ನೂತನವಾಗಿ ನಿರ್ಮಿಸಿದ ಸಂಸತ್ತ ಭವನಕ್ಕೆ ಅನುಭವ ಮಂಟಪ ಎಂದು ಹೆಸರಿಸಬೇಕಾದ ಚಾಲಿತ್ರಿಕ ಒತ್ತಡ ಬಂದಿತು.
ಇಂದು ಜಗತ್ತಿನಾದ್ಯಂತ ಶರಣರ ವಿಚಾರಗಳ ಕುರಿತು ವ್ಯಾಪಕವಾದ ಚಿಂತನ-ಮಂಥನಗಳು ನಡೆಯುತ್ತಿವೆ. ಜಗತ್ತಿನ ಮೂಲೆ ಮೂಲೆಯಿಂದ ವಿದ್ವಾಂಸರು ಕಲ್ಯಾಣ-ಕಲಬುರಗಿಯನ್ನು ಅರಸಿಕೊಂಡು ಬರುತ್ತಿದ್ದಾರೆ. ಸಕಲ ಜೀವಾತ್ಮರ ಲೇಸು ಬಯಸಿದ ಮಹಾನ್ ದರ್ಶನವೊಂದು ಈ ನಾಡಿನಲ್ಲಿ ಅದ್ದೇಗೆ ಸೃಷ್ಟಿಯಾಗಿ ಅಸ್ತಿತ್ವಗೊಂಡಿತ್ತು? ಇಡೀ ವಿಶ್ವಕ್ಕೆ ಮಾದರಿಯಾಗಬಲ್ಲ ವಿಚಾರ ಧಾರೆಯನ್ನು ನೀಡಿದ ಶರಣರ ಪ್ರಯೋಗ ಭೂಮಿಯನ್ನು ಅಧ್ಯಯನ ಮಾಡಲೆಂದು ಅಂತರಾಷ್ಟ್ರೀಯ ವಿದ್ವಾಂಸರು ಕುತೂಹಲ ಭರಿತರಾಗಿದ್ದಾರೆ. ಈ ಹಿನ್ನೆಲೆಯನ್ನು ಮನಗಂಡಿದ್ದರಿಂದಲೆ ಕರ್ನಾಟಕ ಸರಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ.
ಬಸವಣ್ಣನವರ ನೇತೃತ್ವದಲ್ಲಿ ಅಂದು ಎಲ್ಲ ಜಾತಿ, ಮತ, ಪಂಥಗಳಿಂದ ಬಂದ ಕಾಯಕ ಜೀವಿಗಳು ಕಲ್ಯಾಣದಲ್ಲಿ ಅಣಿ ನೆರೆದು ಸಮಸ್ತ ಜನ ಕಲ್ಯಾಣದ ಬಗೆಗೆ ಚಿಂತನೆ ಮಾಡಿದ್ದರು. ಅದರ ಫಲಶೃತಿಯಾಗಿ ಮೂಡಿದ ಅಸಂಖ್ಯಾತ ವಚನಗಳು ಅವರ ನಡೆ-ನುಡಿಯ ಏಕತೆಯನ್ನು ಸಾಕ್ಷೀಕರಿಸುತ್ತಿವೆ. ಅವರು ಬರೆದ ಲೆಕ್ಕವಿಲ್ಲದಷ್ಟು ವಚನಗಳು ಜನ ವಿರೋಧಿ ಮತಾಂಧರ ಕೆಂಗೆಣ್ಣಿಗೆ ಗುರಿಯಾಗಿ ಕಳೆದು ಹೋಗಿವೆ. ಉಳಿದದ್ದು ಕಡಿಮೆ ಕಳೆದದ್ದೆ ಜಾಸ್ತಿ. ಆದಾಗ್ಯೂ ಇಂದು ಹುತಾತ್ಮ ಎಂ.ಎಂ. ಕಲಬುರಗಿಯವರ ನೇತೃತ್ವದಲ್ಲಿ ಇಪ್ಪತ್ತು ಸಾವಿರ ವಚನಗಳು ಕರ್ನಾಟಕ ಸರಕಾರದಿಂದ ಬೆಳಕು ಕಂಡಿವೆ.
ಇದರ ಮುಂದುವರೆದ ಭಾಗವಾಗಿ ಕಲಬುರಗಿ ಹುಮನಾಬಾದ ಮುಖ್ಯ ರಸ್ತೆಗೆ “ಬಸವಾದಿ ಶಿವಶರಣ ಮಾರ್ಗ” ಎಂದು ಹೆಸರಿಡುವುದು ಸೂಕ್ತ. ಇದರಲ್ಲಿ ಬ್ರಾಹ್ಮಣ ಮಧುವರಸನಿಂದ ಹಿಡಿದು ಸಮಗಾರ ಹರಳಯ್ಯ, ಮಾದಾರ ಚೆನ್ನಯ್ಯ ಮುಂತಾಗಿ ಜನಸಮುದಾಯಗಳ ಮಹಾಪುರುಷರು ಸಮಾವೇಶಗೊಳ್ಳುತ್ತಾರೆ.
ರೇಣುಕಾಚಾರ್ಯರು ಎಂಬ ಹೆಸರು ಕೆಲವು ಜನರ ನಂಬಿಕೆಯ ಭಾಗವಾಗಿರಬಹುದು.
ಆದರೆ ಅವರು ಪೌರಾಣಿಕ ವ್ಯಕ್ತಿಗಳೇ ಹೊರತು ಐತಿಹಾಸಿಕ ವ್ಯಕ್ತಿಗಳಲ್ಲ. ಇತಿಹಾಸದಲ್ಲಿ ಈವರೆಗೂ ಯಾವ ಪುರಾವೆಗಳು ಇಲ್ಲ ಎಂಬುದನ್ನು ಈಗಾಗಲೇ ಹಲವಾರು ವಿದ್ವಾಂಸರು ಖಚಿತ ಪಡಿಸಿದ್ದಾರೆ. ಆದ್ದರಿಂದ ಕಾಲ್ಪನಿಕ ವ್ಯಕ್ತಿಗಳಿಗಿಂತ ಇತಿಹಾಸದಲ್ಲಿ ಗತಿಸಿಹೋಗಿರುವ ನೂರಾರು ವ್ಯಕ್ತಿಗಳು ಇರಲಿಕ್ಕಾಗಿ ಪುರಾಣಕ್ಕೆ ಮೊರೆ ಹೋಗಬೇಕಿಲ್ಲ ಎಂಬುದು ನಮ್ಮ ಸ್ಪಷ್ಟ ನಿಲುವು.
ಬಸವಾದಿ ಶಿವಶರಣ ಮಾರ್ಗವೆಂದು ಹೆಸರಿಸಬೇಕು ಎಂಬುದಕ್ಕೆ ಸ್ಪಷ್ಟಿಕರಣ ಹೀಗಿದೆ.
1) ಬಸವಾದಿ ಶರಣರು ಕಾಲ್ಪನಿಕ ವ್ಯಕ್ತಿಗಳಲ್ಲ. ಅವರೆಲ್ಲರೂ ಇತಿಹಾಸದಲ್ಲಿ ಬದುಕಿ ಅದ್ಭುತ ಕ್ರಾಂತಿ ಎಸಗಿ ಹೊಸದೊಂದು ದರ್ಶನ ನಿರ್ಮಿಸಿ ಹೋಗಿದ್ದಾರೆ.
2) ಈ ಎಲ್ಲ ಶರಣರಿಗೆ ಪ್ರಯೋಗ ಭೂಮಿಯಾದದ್ದು ಇದೆ ಬಸವಕಲ್ಯಾಣ.
3) ಪ್ರಥಮ ವಚನಕಾರ ಎಂಬ ಹೆಗ್ಗಳಿಕೆ ಪಡೆದಿರುವ ಜೇಡರ ದಾಸಿಮಯ್ಯ ಅವಿಭಜಿತ ಕಲಬುರಗಿ ಜಿಲ್ಲೆಗೆ ಸೇರಿದವನು.
4) ಗಜೇಶ ಮಸಣಯ್ಯ, ಗೊಟ್ಟೂರಿನ ದುಗ್ಗಟ್ಟೆ, ಕೆಂಭಾವಿ ಭೋಗಣ್ಣ, ಏಕಾಂತದ ರಾಮಯ್ಯ, ಹರಳಯ್ಯನವರ ಪಾದುಕೆಗಳಿರುವ ಬಿಜನಳ್ಳಿ ಇತ್ಯಾದಿಗಳು ಕಲಬುರಗಿ
ಜಿಲ್ಲೆಯಲ್ಲಿವೆ.
5) ಎಲ್ಲ ಶಿವಶರಣರ ಕಲ್ಯಾಣಕ್ಕೆ ಹೋಗುವ ಮಾರ್ಗವಾದದ್ದು ಇದೇ ಕಲಬುರಗಿ.
6) ಈ ಶೀರ್ಷಿಕೆಯಲ್ಲಿ ಎಲ್ಲ ಜನಸಮುದಾಯಗಳು ಪ್ರತಿನಿಧಿಸಲ್ಪಡುತ್ತವೆ.
ರೇಣುಕಾಚಾರ್ಯರ ಹೆಸರು ಸೂಕ್ತವಲ್ಲ ಏಕೆ?
1) ಅವರು ಕಾಲ್ಪನಿಕ ಮತ್ತು ಪೌರಾಣಿಕ ವ್ಯಕ್ತಿ. ಇದಕ್ಕೆ ಅನೇಕ ದಾಖಲೆಗಳು ಇವೆ.
2) ಪುರಾಣದ ಪ್ರಕಾರ ಅವರು ಜನಿಸಿದ್ದು ಕೊಲ್ಲಿಪಾಕಿ. ಅದು ಈಗ ತೆಲಂಗಾಣಕ್ಕೆ ಸೇರಿದೆ.
3) ಅಷ್ಟಕ್ಕೂ ಆ ಹೆಸರು ಒಂದು ಸಣ್ಣ ಸಮುದಾಯವನ್ನು ಮಾತ್ರ ಪ್ರತಿನಿಧಿಸುತ್ತದೆ.
ವಿಶ್ವಾಸದೊಂದಿಗೆ,
ಪ್ರಭುಲಿಂಗ ಮಹಾಗಾಂವಕರ
ಅಧ್ಯಕ್ಷರು, ಜಾಗತಿಕ ಲಿಂಗಾಯತ ಮಹಾಸಭಾ ಕಲಬುರಗಿ
ಆರ್.ಜಿ. ಶೆಟಗಾರ
ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ ಕಲಬುರಗಿ
ಆಕರ ಕೃತಿಗಳು
1) ಸಂಪುಟ ವಚನ ಸಂಪುಟಗಳು- 15
2) ಡಾ ಎಂ. ಎಂ. ಕಲಬುರಗಿಯವರ ಮಾರ್ಗ ಸಂಪುಟಗಳು- 5, 6, 7
3) ಎಂ ಚಿದಾನಂದಮೂರ್ತಿ ಸಮಗ್ರ ಸಂಪುಟಗಳು.
ನಿಮ್ಮ ಪ್ರಯತ್ನಕ್ಕೆ ಯಶಸ್ಸು ದೊರಕಲಿ 🌹🙏
ಆರ್. ಜಿ. ಶೇಠ ಗರ್ ಅವರ ಅಭಿಪ್ರಾಯ ಶತಪ್ರತೀಶತ ಸೂಕ್ತವಾಗಿದೆ. ಸರಕಾರದ ಅಧಿಕಾರಿಗಳು ಸ್ವೀಕರಿಸಿ ಸೂಕ್ತ ಮಾರ್ಗ ಸೂಚಿ ಕೊಡಲಿಯೆಂದು ಆಶಿಸುತ್ತೇವೆ.
मानवतेचा आधार 🔯 बसवण्णाचा जय जय कार |||•
महात्मा बसवण्णाजी का नाम उस रोड को सही रहेगा ।
शरण संस्क्रती को बढावा देना उचीत होगा ।
👏 🔯 •||| शरणु शरणार्थी |||• 🔯🙏