ಮೈಸೂರು
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕ ನಗರದ ಜೆಎಸ್ಎಸ್ ಬಡಾವಣೆಯಲ್ಲಿ ನಿರ್ಮಿಸಲಿರುವ ಸಮುದಾಯ ಭವನಕ್ಕೆ ಕೇಂದ್ರ ಘಟಕದಿಂದ ನೆರವು ನೀಡಲಾಯಿತು.
ಮಹಾಸಭಾದ ಹಿರಿಯ ಉಪಾಧ್ಯಕ್ಷ ಸಚಿವ ಈಶ್ವರ ಖಂಡ್ರೆ ಜಿಲ್ಲಾ ಘಟಕದಿಂದ ಸಂಗ್ರಹವಾಗಿರುವ ಸದಸ್ಯತ್ವದ ಶೇಕಡ ತೊಂಬತ್ತರಷ್ಟನ್ನು ಅಂದರೆ 50,22,000 ರೂಪಾಯಿಗಳನ್ನು ಚೆಕ್ಕನ್ನು ನೀಡಿದರು. ಜೊತೆಗೆ ಬಡ್ಡಿ ರಹಿತ 50 ಲಕ್ಷ ರೂ.ಚೆಕ್ ಅನ್ನು ಕೂಡ ನಗರದಲ್ಲಿ ಜಿಲ್ಲಾ ಘಟಕದ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.
ಜಿಲ್ಲಾ, ತಾಲೂಕು ಘಟಕಗಳಿಂದ ಬರುವ ಹಣವನ್ನು ವೀರಶೈವ ಮಹಾಸಭಾ ಸ್ಥಳೀಯ ಸಮುದಾಯದ ಅಭಿವೃದ್ಧಿಗೆ ನೇರವಾಗಿ ನೀಡುತ್ತದೆ. ಉದಾಹರಣೆ ನಂಜನಗೂಡು, ಹೆಗ್ಗಡದೇವನ ಕೋಟೆಗಳಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಲು ಇದೇ ರೀತಿ ನೆರವಾಗಿದ್ದೇವೆ, ಎಂದು ಮಹಾಸಭಾದ ಕಾರ್ಯದರ್ಶಿ ರೇಣುಕಾಪ್ರಸನ್ನ ಹೇಳಿದರು.
ಜಿಲ್ಲಾ ಘಟಕದ ಅಧ್ಯಕ್ಷ ಹಿನಕಲ್ ಬಸವರಾಜು, ಪ್ರಧಾನ ಕಾರ್ಯದರ್ಶಿ ದೂರ ಶಿವಕುಮಾರ್, ಕೇಂದ್ರ ಸಮಿತಿ ಸದಸ್ಯ ಖಂಡೇಶ್, ಉಪಾಧ್ಯಕ್ಷರಾದ ಕೆ.ನಾಗರಾಜು, ಬಸವರಾಜು, ನಟರಾಜು, ಕಾರ್ಯದರ್ಶಿ ಗಿರೀಶ್, ಅನುಸೂಯ ಗಣೇಶ್, ಸಂಘಟನಾ ಕಾರ್ಯದರ್ಶಿ ಪರಮೇಶ್, ಮುಖಂಡರಾದ ಗೆಜ್ಜಗಳ್ಳಿ ಮಹೇಶ್, ಮಂಜು ಇತರರು ಇದ್ದರು.