ಶ್ರೀಗಳಿಗೆ ಪದೇ ಪದೇ ಆರೋಗ್ಯ ಸಮಸ್ಯೆ ಕಾಡುತ್ತಿದ್ದುದರಿಂದ, 2020ರಲ್ಲಿಯೇ ಉತ್ತರಾಧಿಕಾರಿಯ ನೇಮಕವಾಗಿತ್ತು.
ಮಹದೇಶ್ವರ ಬೆಟ್ಟ
ಮಲೆ ಮಹದೇಶ್ವರ ಬೆಟ್ಟದ ಇತಿಹಾಸ ಪ್ರಸಿದ್ಧ ಶ್ರೀ ಸಾಲೂರು ಬೃಹನ್ಮಠದ ಹಿರಿಯ ಶ್ರೀಗುರುಸ್ವಾಮಿ(75) ಇಂದು ಮುಂಜಾನೆ ಲಿಂಗೈಕ್ಯರಾದರು.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀಗಳು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಇದ್ದ ಕಾರಣ ಶ್ರೀಮಠಕ್ಕೆ ಮರಳಿ ಕರೆತರಲಾಗಿತ್ತು. ಇಂದು ಮುಂಜಾನೆ 5 ಗಂಟೆಗೆ ನಿಧನರಾದರು.

ಸುತ್ತೂರು ಶ್ರೀಗಳು, ಸಿದ್ದಗಂಗಾ ಶ್ರೀಗಳ ನೇತೃತ್ವದಲ್ಲಿ ಅಂತಿಮ ವಿಧಿವಿಧಾನಗಳು, ಪೂಜಾ ಕಾರ್ಯಗಳು ನಡೆಯಲಿವೆ. ಸಂಜೆ 5 ಗಂಟೆಗೆ ಶ್ರೀಮಠದ ಆವರಣದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಲಿಂಗೈಕ್ಯ ಪೂಜ್ಯ ಗುರು ಸ್ವಾಮಿಗಳವರು ನಾಡಿನಾದ್ಯಂತ ಅಪಾರ ಭಕ್ತ ವೃಂದವನ್ನು ಹೊಂದಿದ್ದರು. ಇವರ ಆಗಲುವಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಕ್ತ ವೃಂದಕ್ಕೆ ಬಸವಾದಿ ಶರಣರು ನೀಡಲಿ ಎಂದು ಚಾಮರಾಜನಗರ ಜಿಲ್ಲಾ ಬಸವಕೇಂದ್ರ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯಿತಾ ಮಹಾಸಭೆಯ ಎನ್ರಿಚ್ ಮಹದೇವಸ್ವಾಮಿ ಹೇಳಿದ್ದಾರೆ.
ಶ್ರೀಗಳಿಗೆ ಪದೇ ಪದೇ ಆರೋಗ್ಯ ಸಮಸ್ಯೆ ಕಾಡುತ್ತಿದ್ದುದರಿಂದ, ಮಠದ ಭಕ್ತರು ಉತ್ತರಾಧಿಕಾರಿ ಆಯ್ಕೆ ಮಾಡಿಕೊಡುವಂತೆ ಮನವಿ ಮಾಡಿದ್ದರು. . ಇದಕ್ಕಾಗಿ ಒಂಬತ್ತು ಪದಾಧಿಕಾರಿಗಳ ಆಯ್ಕೆ ಸಮಿತಿಯನ್ನು ರಚನೆ ಮಾಡಲಾಗಿತ್ತು.
ಈ ಸಮಿತಿಯ ಆಯ್ಕೆಯಂತೆ 2020ರಲ್ಲಿ ಪೂಜ್ಯ ಶಾಂತಮಲ್ಲಿಕಾರ್ಜುನ ಮಹಾಸ್ವಾಮಿ ಅವರ ಪಟ್ಟಾಧಿಕಾರ ಮಹೋತ್ಸವವು ನಡೆದಿತ್ತು.