ದೆಹಲಿ ಸಂಸತ್ತಿನಲ್ಲಿ ನಡೆಯುವ ಬಸವ ಜಯಂತಿಯಲ್ಲಿ ಪಾಲ್ಗೊಳ್ಳುವಂತೆ ಲೋಕಸಭಾ ಸಭಾಧ್ಯಕ್ಷ, ಹಲವಾರು ಸಚಿವರನ್ನು, ಸಂಸದರನ್ನು ಆಹ್ವಾನಿಸಲಾಗಿದೆ.
ನವ ದೆಹಲಿ
ವಿಶ್ವದ ಪ್ರಥಮ ಸಂಸತ್ ಸ್ಥಾಪಿಸಿದ ಬಸವಣ್ಣನವರ ಜಯಂತಿಯನ್ನು ಮೊದಲ ಬಾರಿಗೆ ನೂತನ ಸಂಸತ್ ಭವನದ ಆವರಣದಲ್ಲಿ ಆಚರಿಸಲು ನಿರ್ಧರಿಸಲಾಗಿದೆ, ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಏಪ್ರಿಲ್ 30ರಂದು ಸಂಸತ್ತಿನ ಆವರಣದಲ್ಲಿರುವ ಜಗಜ್ಯೋತಿ ಬಸವೇಶ್ವರರ ಪುತ್ಥಳಿಗೆ ಪುಷ್ಪನಮನ ಗೌರವ ಸಲ್ಲಿಸಿ ಲೋಕಸಭಾ ಸಭಾಧ್ಯಕ್ಷ ಓಂ ಬಿರ್ಲಾ ಬಸವ ಜಯಂತಿ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಕೇಂದ್ರದ ಸಚಿವರುಗಳಾದ ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಶಿ, ಹೆಚ್.ಡಿ. ಕುಮಾರಸ್ವಾಮಿ, ಅಶ್ವೀನಿ ವೈಷ್ಣವ್, ಸಿ.ಆರ್.ಪಾಟೀಲ್, ಶೋಭಾ ಕರಂದ್ಲಾಜೆ ಮತ್ತು ರಾಜ್ಯದ ಎಲ್ಲಾ ಸಂಸದರನ್ನೂ ಆಹ್ವಾನಿಸಲಾಗಿದೆ.

ಈ ಸಂಬಂಧ ಸೋಮಣ್ಣ ಸಂಸತ್ ಅಧಿಕಾರಿಗಳ ಜೊತೆ ಪೂರ್ವಭಾವಿ ಸಭೆ ನಡೆಸಿದ್ದಾರೆ.
ಸಂಸತ್ ಭವನದ ಗೋಡೆಯ ಮೇಲೆ ಹಂಪಿಯ ಕಲ್ಲಿನ ರಥದವನ್ನು ಕೆತ್ತಲಾಗಿದೆ. ಈ ಕಲ್ಲಿನ ರಥದ ಮೇಲೆ ಬಸವೇಶ್ವರರ ಚಿತ್ರ ಸೇರಿದಂತೆ ಮಹಾನ್ ದಾರ್ಶನಿಕರ ಚಿತ್ರಗಳನ್ನು ಹಾಕಲಾಗಿದೆ. ಇದರ ಪಕ್ಕದಲ್ಲೇ ಗೋಡೆಯ ಮೇಲೆ ಬಸವಣ್ಣನವರ ಕಳಬೇಡ ಕೊಲಬೇಡ ವಚನ ಬರೆಯಲಾಗಿದೆ.
ಬಸವ ಜಯಂತಿ ದಿವಸ ಕೇಂದ್ರ ಸರ್ಕಾರ ರಜಾ ಘೋಷಣೆ ಮಾಡಬೇಕು ದೇಶದ ತುಂಬ ಗುರು ಬಸವಣ್ಣನವರ ಜಯಂತಿ ಆಚರಣೆ ಮಾಡಬೇಕೆಂದು ಆದೇಶ ಮಾಡಬೇಕು ಗುರು ಬಸವಣ್ಣನವರ ತತ್ವ ಇಡಿ ಜಗತ್ತಿನ ತುಂಬ ಹರಡುವ ಕಾಲ ಬಂದಿದೆ
ಸರಕಾರಿ ರಜೆ ಕೇಳುವುದು ಕಾಯಕವೇ ಕೈಲಾಸವೆಂದು ಹೇಳಿದ ಬಸವಣ್ಣನವರಿಗೆ ಅವಮಾನಿಸಿದಂತೆ.
ಹೌದು ನಿಮ್ಮ ಅಭಿಪ್ರಾಯ ಸತ್ಯ ಆದ್ರೆ
ಅಣ್ಣ ಬಸವಣ್ಣ ನವರ ಬಗ್ಗೆ ಅವರ ತತ್ವ ವಿಚಾರಗಳ ಬಗ್ಗೆ ಚಿಂತನೆ ಮಾಡಲು ಬಸವ ಜಯಂತಿ ಆಚರಿಸಲು ಒಂದು ದಿನ ರಜೆ ನೀಡುವದರಲ್ಲಿ
ತಪ್ಪೇನಿದೆ. ಅಣ್ಣನವರು ಕಾಯಕದ ಜೊತೆಗೆ ದಾಸೋಹ ಇನ್ನು ಹತ್ತು ಹಲವು ತತ್ವ ನೀಡಿದ್ದಾರೆ. ಒಂದು ದಿನ ಕೈಲಾದಷ್ಟು ದಾಸೋಹ ಸೇವೆ ಮಾಡೋಣ ಅಣ್ಣನವರೇ…,
ಬಸವಾದಿ ಶಿವರಣರು ಮಾಡಿದ ತ್ಯಾಗ ಬಲಿದಾನದ ಮುಂದೆ ಕೇಂದ್ರ ಸರ್ಕಾರ ಒಂದು ದಿನ ರಜೆ ನೀಡಿದರೆ ತಪ್ಪೇನು ನಾವೊಂದು ದಿನ ನಮಗಾಗಿ, ನಮ್ಮತನ ಉಳಿಸಿಕ್ಕೊಳ್ಳಲು ಬಸವಾದಿ ಶರಣರ ತತ್ವ ಇಡಿ ಭಾರತಕ್ಕೆ ಮತ್ತು ವಿಶ್ವಕ್ಕೆ ಪಸರಿಸಲು ನಾವು ಇನ್ನು ಬಹಳ ದೊಡ್ಡ ದೊಡ್ಡ ತ್ಯಾಗ ಮಾಡಲೇಬೇಕು… ಅಂದಾಗಲೇ ಏನಾದರೂ ಆಗೋದು ಅನಿಸುತ್ತೆ.
ಶರಣು ಶರಣಾರ್ಥಿ. ನಮ್ಮ ಕರ್ನಾಟಕದ ಆಡಳಿತ ಸೌಧ ವಾಗಿರುವ ವಿಧಾನ ಸೌಧದ ಮೇಲೆ ಕಾಯಕವೇ ಕೈಲಾಸ ಎಂದು ಹಾಕಿಸುವುದು ಹೆಚ್ಚು ಸೂಕ್ತ.
ಅಣ್ಬ ಬಸವಣ್ಣನವರ ಜಯಂತಿಗೆ ರಜೆ ಘೋಷಿಸಿದರೆ ಅದು ಅವರ ತತ್ವಗಳನ್ನ ಪ್ರಪಂಚಕ್ಕೆ ಸಾರುವ ಕೆಲಸ ಅಗಬೇಕು.ಆ ಮೂಲಕ ಕಾಯಕದಿಂದಲೇ ಬದುಕು/ಜೀವನ ಎನ್ನುವಂತಾಗಬೇಕು ಮತ್ತು ಸಮಸಮಾಜ ನಿರ್ಮಾಣ ಅಗಬೇಕು. ಬಸವ ಜಯಂತಿ ರಜೆ ಕಾಟಚಾರದ ಕಾರ್ಯಕ್ರಮಗಳಿಗೆ ಸೀಮಿತವಾಗದೆ ಸ್ವಾಸ್ಥ ಬದುಕಿನತ್ತ ಮನಗಳನ್ನ ಬದಲಿಸುವ, ಶ್ರಮದಿಂದ ಬದುಕುವ ದಿಕ್ಕಿನತ್ತ ಸಾಗುವ ದಿನಾಚಾರಣೆಯಾಗಲಿ.