ವಚನ ಚಳುವಳಿ, ಸಂವಿಧಾನಕ್ಕೆ ಸನಾತನಿಗಳ ವಿರೋಧ: ಕೆ. ನೀಲಾ

ಕೂಡಲಸಂಗಮ

ಸಂವಿಧಾನಕ್ಕೆ ಇಂದು ದೊಡ್ಡ ಮಟ್ಟದ ಅಪಾಯ ಬಂದಿದೆ ಎಂದು ಚಿಂತಕಿ ಕೆ. ನೀಲಾ ಹೇಳಿದರು.

ಮಂಗಳವಾರ ಕೂಡಲಸಂಗಮ ಸಭಾ ಭವನದ ಬಸವ ವೇದಿಕೆಯಲ್ಲಿ ಬಸವ ಜಯಂತಿ ನಿಮಿತ್ಯ ನಡೆದ ಅನುಭವ ಮಂಟಪ ಬಸವಾದಿ ಶರಣರ ವೈಭವ ಕಾರ್ಯಕ್ರಮದ ಮೊದಲ ದಿನದ ಎರಡನೇ ಚಿಂತನಾ ಗೋಷ್ಠಿಯಲ್ಲಿ ಮಾತನಾಡಿದರು.

ವಚನ ಚಳುವಳಿ ಮತ್ತು ಸಂವಿಧಾನಕ್ಕೆ ವಿರುದ್ದವಾಗಿ ಸನಾತನಿಗಳು ನಡೆದುಕೊಂಡು ಬಂದಿದ್ದಾರೆ. ಸಂವಿಧಾನ ಮತ್ತು ವಚನಗಳು ಪೂರಕ ಅಂಶಗಳನ್ನು ಒಳಗೊಂಡಿದೆ. ಕಾಯ, ಕಾಯಕದಿಂದ ಸೃಷ್ಠಿಯಾದ ಶ್ರಮಿಕ ಸಂಸ್ಕೃತಿಯ ಬಗ್ಗೆ ವಚನಕಾರರು ಬೆಳಕು ಚೆಲ್ಲಿದ್ದಾರೆ. ಚಿಂತನೆ ಮತ್ತು ಚಳುವಳಿಯಿಂದ ವಚನ ಸಾಹಿತ್ಯವನ್ನು ಉಳಿಸುವ ಕಾರ್ಯವನ್ನು ಮಾಡಬೇಕಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ವಚನ ಸಾಹಿತ್ಯ ಮತ್ತು ಭಾರತ ಸಂವಿಧಾನ ವಿಷಯ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಮಾತನಾಡಿದರು.

ದೇಶವು ಪ್ರಸ್ತುತ ದಿನಗಳಲ್ಲಿ ಸುಳ್ಳುಗಳು, ಕಲ್ಪನೆಗಳ ಮೇಲೆ ವಿಜೃಂಬಿಸುತ್ತಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಯುದ್ದ ಬೇಡ ಎಂಬ ಮಾತು ಚರ್ಚೆಗೆ ಒಳಪಟ್ಟಿದೆ. ಆದರೆ ಬಿಹಾರದ ಚುಣಾವಣೆ ಪ್ರಚಾರದಲ್ಲಿ ಯುದ್ದದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಾತು ಚರ್ಚೆಗೆ ಒಳಪಟ್ಟಿಲ್ಲ, ಎಂದರು.

ಎಂ.ಎಸ್. ಶೇಖರ ಮಾತನಾಡಿ ರಾಜ್ಯದಲ್ಲಿರುವ ಮಠಾಧೀಶರು ಮರ್ಯಾದಾ ಹತ್ಯೆ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸಬೇಕು ಎಂದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KrUBaygNRHP7UH6E1mcSRN

Share This Article
Leave a comment

Leave a Reply

Your email address will not be published. Required fields are marked *