ಬೆಂಗಳೂರು
ವೀರಶೈವ ಮಹಾಸಭಾ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪನವರ ನಗರದ ನಿವಾಸಕ್ಕೆ ರಂಭಾಪುರಿ ಶ್ರೀ, ಕೇದಾರ ಮತ್ತು ಕಾಶಿ ಶ್ರೀ ರವಿವಾರ ಭೇಟಿ ನೀಡಿ ಪ್ರಚಲಿತ ಸಮಸ್ಯೆಗಳ ಪರಸ್ಪರ ಸಮಾಲೋಚಿಸಿದರು.
ಕಳೆದ ತಿಂಗಳು ಲಕ್ಷ್ಮೇಶ್ವರದ ಮುಕ್ತಿಮಂದಿರದಲ್ಲಿ ಪಂಚಪೀಠದ ಶ್ರೀಗಳು ವೀರಶೈವ ಮಹಾಸಭಾದ ಪದಾಧಿಕಾರಿಗಳ ಜೊತೆ ಜಂಟಿ ಸಭೆ ನಡೆಸಿದ್ದರು.
ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಸಭೆಯಲ್ಲಿ ಭಾಗವಹಿಸಿದ ಶ್ರೀಗಳು ಜೂನ್ ತಿಂಗಳಲ್ಲಿ ದಾವಣಗೆರೆಯಲ್ಲಿ ವೀರಶೈವರನ್ನು ಮತ್ತು ಲಿಂಗಾಯತರನ್ನು ಒಗ್ಗೊಡಿಸಲು ದೊಡ್ಡ ಸಮಾವೇಶ ನಿರ್ಧರಿಸಿದ್ದರು.
ಕೇದಾರ ಶ್ರೀಗಳು ಲಕ್ಷ್ಮೇಶ್ವರ ಮತ್ತು ಬೆಂಗಳೂರಿನ ಎರಡೂ ಸಭೆಗಳಿಗೆ ಗೈರಾಗಿದ್ದರು.