‘ನಮ್ಮೂರ ಮಸೀದಿ ನೋಡ ಬನ್ನಿ’ ಕಾರ್ಯಕ್ರಮದಲ್ಲಿ ಮರುಳಸಿದ್ಧ ಶ್ರೀ

ಶಿವಮೊಗ್ಗ

ಮೇ 26 ಶಿವಮೊಗ್ಗದ ಜಮಾಅತೆ ಇಸ್ಲಾಮಿ ಹಿಂದ್ ಆಯೋಜಿಸಿದ್ದ ನಮ್ಮೂರ ಮಸೀದಿ ನೋಡಬನ್ನಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆವು. ಪ್ರವಾಸಿಗರ ಆಕರ್ಷಣೆಯಾಗಿರುವ ಅಬುಧಾಬಿಯ ಗ್ರಾಂಡ್ ಮಾಸ್ಕ್ ಬಿಟ್ಟರೆ ಸ್ಥಳೀಯ ಯಾವುದೇ ಮಸೀದಿಗಳನ್ನು ನೋಡಿರದ ನಮಗೆ, ಈ ಕಾರ್ಯಕ್ರಮ ಸ್ಥಳೀಯ ಮಸೀದಿಗಳ ಬಗೆಗೆ ನಮಗಿದ್ದ ಕುತೂಹಲವನ್ನು ತಣಿಸಿತು.

ಅಲ್ಲಿ ನಾವು ಹಂಚಿಕೊಂಡ ವಿಚಾರಗಳ ಸಾರ:

‘ಧರ್ಮದ ಒಳಗಿನ ದುಷ್ಟರು, ಭಯೋತ್ಪಾದಕರು ನಡೆಸುವ ದುಷ್ಕೃತ್ಯಗಳು, ತಳಮಟ್ಟದ ಸಾಮಾನ್ಯ ಅನುಯಾಯಿಗಳನ್ನು ಇತರರು ಅನುಮಾನದಿಂದ ನೋಡುವಂತೆ ಮಾಡಿವೆ. ಮಸೀದಿ ದರ್ಶನ ಕಾರ್ಯಕ್ರಮವು ಈ ರೀತಿಯ ಅನುಮಾನಗಳಿಂದ ಮುಕ್ತವಾಗಬೇಕೆಂಬ ಆ ಸಮುದಾಯದ ಸಾಮಾನ್ಯರ ಹಂಬಲದ ದ್ಯೋತಕವಾಗಿದೆ. ಹೀಗೆ ಇತರೆ ಸಮುದಾಯಗಳ ಎದುರಿಗೆ ತನ್ನ ಪ್ರಾಮಾಣಿಕತೆಯನ್ನು ಪ್ರದರ್ಶಿಸಿಕೊಳ್ಳುವಂತಹ ದುಸ್ಥಿತಿ ಯಾವುದೇ ಧರ್ಮದ ಅನುಯಾಯಿಗಳಿಗೆ ಬಾರದಿರಲಿ.

ಯಾವುದೇ ಧರ್ಮದ ಅನುಯಾಯಿ ದುರ್ಮಾರ್ಗದಲ್ಲಿ ಹೋಗುವ ಆಲೋಚನೆ, ಧರ್ಮದ ದುರಭಿಮಾನದಿಂದ ಹಿಂಸಾಮಾರ್ಗದೆಡೆಗೆ ಹೋಗುವ ನಡೆ ಕಂಡುಬಂದ ತಕ್ಷಣ ಅಂತಹವನನ್ನು ಸರಿದಾರಿಗೆ ತರುವ ನೈತಿಕ, ಪ್ರಾಮಾಣಿಕ ಜವಾಬ್ದಾರಿಯನ್ನು ಆಯಾ ಸಮುದಾಯಗಳು ನಿರ್ವಹಿಸುತ್ತಲೇ ಇರಬೇಕು. ಈ ನಿಟ್ಟಿನಲ್ಲಿ ಜಾಗೃತಿ ನಿರಂತರವಾಗಿರಬೇಕು. ನಾವು ಧರ್ಮಗಳ ಅನುಯಾಯಿಗಳು ಎನ್ನುವುದಕ್ಕಿಂತ ಮೊದಲು ಮಾನವರು ಎಂಬುದನ್ನು ಮರೆಯದಿರೋಣ’.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KW7PgYimGT7HL73bAEKzSR

Share This Article
1 Comment
  • ಜಗತ್ತು ಹುಟ್ಟಿದಾಗಿನಿಂದ ಸಜ್ಜನರ ಗುಂಪು, ದುರ್ಜನರ ಗುಂಪುಗಳಿವೆ. ಸಾತ್ವಿಕರು, ದುಷ್ಟರು ಇದ್ದಾರೆ. ಮೌಸ ಆಹಾರಿಗಳು, ಸಸ್ಯ ಆಹಾರುಗಳು ಇದ್ದಾರೆ. ಅವರನ್ನು ಸರಿದಾರಿಗೆ ತರುವಲ್ಲಿ ಎಲ್ಲ ಮಠ ಮಾನ್ಯಗಳು, ಅವತಾರಿ ಪುರುಷರು ಮತ್ತು ಮಹಿಳೆಯರು ಪ್ರಯತ್ನ ಮಾಡಬೇಕು ಜನರಿಗೆ ನಿತ್ಯ ಜೀವನದಲ್ಲಿ ಸದಾ ಸಕಾರಾತ್ಮಕವಾಗಿರಲು, ಯಾವ ಭಯವಿಲ್ಲದೆ ಆಚರಣೆಗಳನ್ನು , ಮೂಢ ನಂಬಿಕೆಯನ್ನು ಕಿತ್ತೊಗೆಯಬೇಕು. ಪ್ರೈಮರಿ ಡ್ಯೂಟಿ, ಸೆಕೆಂಡರಿ ಡ್ಯೂಟಿ, ಆಪ್ಷನಲ್ ಡ್ಯೂಟಿ, ಅದರ್ಸ್ ದುಟಿಗಳನ್ನು ಕಲಿಸಿ ಸುಖ, ಸಾಮರಷ್ಯದಿನ್ದಿದರಲು ಕಲಿಸಬೇಕು. ಅರಮನೆ, ಗುರೂ ಮನೆಯಾವರು ಬಹಳ ಆಚರಣೆಗಳನ್ನು ಹೇರಿದ್ದಾರೆ. ಅಯಕಾಲಕ್ಕೆ ತಕ್ಕಂತೆ ಸಂಗ್ಚಿಪತ ಆಚರಣೆ ಇದ್ದಾರೆ ಉತ್ತಮ.

Leave a Reply

Your email address will not be published. Required fields are marked *

-ಶ್ರೀ ಮ. ನಿ. ಪ್ರ. ಡಾ. ಬಸವ ಮರುಳಸಿದ್ಧ ಸ್ವಾಮೀಜಿ, ಬಸವಕೇಂದ್ರ, ಶಿವಮೊಗ್ಗ