ತುಮಕೂರು
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಸಿದ್ಧಗಂಗಾ ಶ್ರೀಗಳು ಸಂತಾಪ ವ್ಯಕ್ತ ಪಡಿಸಿದ್ದಾರೆ.
ಕೋಟಿ ಕೊಟ್ಟರೂ ಮಕ್ಕಳನ್ನ ತಂದು ಕೊಡೋದಕ್ಕೆ ಆಗಲ್ಲ, ಇಂತಹ ದುರಂತ ಆಗಬಾರದು. ಇದು ಯಾರ ವೈಫಲ್ಯ ಅಂತಾ ನಾನು ಹೇಳೋದಕ್ಕೆ ಹೋಗಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡುತ್ತ ಸ್ಟೇಡಿಯಂನ ಎಲ್ಲಾ ಗೇಟ್ಗಳನ್ನ ತೆರೆದಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ. ಆದ್ರೆ, ನಡೆದು ಹೋಗಿದೆ. ಯಾವುದೇ ಕಾರ್ಯಕ್ರಮ ಆದರೂ ವ್ಯವಸ್ಥಿತವಾಗಿ ಆಗಲಿ ಅಂತಾ ಹಾರೈಸುತ್ತೇನೆ. ಈ ಪ್ರಕರಣ ಸಂಬಂಧ ನ್ಯಾಯಾಂಗ ತನಿಖೆ ನಡೆಯುತ್ತಿದೆ. ಈ ವಿಚಾರ ಮಾತನಾಡುವಂತದ್ದು ಅಲ್ಲ ಎಂದು ಹೇಳಿದರು
ಸೋಶಿಯಲ್ ಮೀಡಿಯಾಗೆ ಮಕ್ಕಳು ಒಗ್ಗಿಕೊಳ್ಳುವುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಮಕ್ಕಳಿಗೆ ಕ್ರಿಕೆಟ್, ಸಿನಿಮಾ ಅನ್ನುವುದು ಮುಖ್ಯವಲ್ಲ. ಅವರಿಗೆ ಶಿಕ್ಷಣ ಅನ್ನುವಂತಹದ್ದು ಮುಖ್ಯ ಎಂದು ಹೇಳಿದರು.
ಶಿಕ್ಷಣ ಮಕ್ಕಳ ಭವಿಷ್ಯವನ್ನು ರೂಪಿಸಿಕೊಡುವಂತದ್ದು, ಇರ್ಲಿ, ಕ್ರಿಕೆಟ್ – ಸಿನಿಮಾ ನೋಡಲಿ. ಬೇಡ ಅಂತಾ ಹೇಳಲ್ಲ. ಆದ್ರೆ, ಅದಕ್ಕೊಂದು ಮಿತಿ ಇರಬೇಕು. ಇಂತಹ ಜನಸಂದಣಿ ಇರುವಂತಹ ಸಂದರ್ಭದಲ್ಲಿ ಮಕ್ಕಳು ಹೋಗಬಾರದು. ಭವಿಷ್ಯ ರೂಪಿಸಿಕೊಳ್ಳಬೇಕಾಗಿರುವ ಮಕ್ಕಳು. ತಂದೆ-ತಾಯಿಗಳಿಗೆ ಒಬ್ಬರೇ ಮಕ್ಕಳು ಇರ್ತಾರೆ.