ಸೊಲ್ಲಾಪುರ ಜಿಲ್ಲೆಯಲ್ಲಿ ಬಸವ ಪ್ರತಿಭಾ ಪುಸರಸ್ಕಾರ ವಿತರಣೆ

ಅಕ್ಕಲಕೋಟ

ಸೊಲ್ಲಾಪುರ ಜಿಲ್ಲೆ ಜಾಗತಿಕ ಲಿಂಗಾಯತ ಮಹಾಸಭಾದ ವಾಗದರಿ ಶಾಖೆಯ ವತಿಯಿಂದ ೧೦ ನೇ ಮತ್ತು ೧೨ನೇ ವಿದ್ಯಾರ್ಥಿಗಳಿಗೆ ಬಸವ ಪ್ರತಿಭಾ ಪುರಸ್ಕಾರ ವಿತರಣೆ ಸಮಾರಂಭ ನಡೆಯುವದು ಎಂದು ಶಾಖೆಯ ಅಧ್ಯಕ್ಷ ಶರಣಪ್ಪ ಮಂಗಾಣೆ ಮತ್ತು ಕಾರ್ಯದರ್ಶಿ ಶಾಂತಕುಮಾರ ಕೊಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೂ.೧ ರಂದು ಭಾನುವಾರ ತಾಲೂಕಿನ ವಾಗದರಿಯ ಶಿವಲಿಂಗೇಶ್ವರ ಸಾಂಸ್ಕೃತಿಕ ಸಭಾಭವನದಲ್ಲಿ ಬೆಳಿಗ್ಗೆ ೯.೩೦ಕ್ಕೆ ಧುತ್ತರಗಾವ-ಉಸ್ತುರಿ ಮಠದ ಕೊರಣೇಶ್ವರ ಶ್ರೀಗಳ ಸಾನಿಧ್ಯದಲ್ಲಿ, ಶ್ರೀ ಪರಮೇಶ್ವರ ಪಲ್ಲಕ್ಕಿ ಉತ್ಸವ ಸಮಿತಿಯ ಅಧ್ಯಕ್ಷ ರಾಜಕುಮಾರ ನಿಂಬಾಳೆಯವರ ಅಧ್ಯಕ್ಷತೆಯಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಶಾಂತ ಅರಬಾಳೆಯವರು ಕಾರ್ಯಕ್ರಮ ಉದ್ಘಾಟಿಸುವರು.

ವಾಗದರಿ ಎಸ್‌ಬಿಐ ಬ್ಯಾಂಕ್‌ನ ವ್ಯವಸ್ಥಾಪಕ ಕೀರ್ತಿಸಾಗರ ಮಾನೆ, ಜಾಗತಿಕ ಲಿಂಗಾಯತ ಮಹಾಸಭಾದ ರಾಜ್ಯ ಕಾರ್ಯಾಧ್ಯಕ್ಷ ವಿಜಯಕುಮಾರ ಹತ್ತುರೆ ಜಿಲ್ಲಾಧ್ಯಕ್ಷ ಶಿವಾನಂದ ಗೋಗಾವ, ವಾಗದರಿ ಗ್ರಾಪಂ ಅಧ್ಯಕ್ಷ ಶಿವಾನಂದ ಘೊಳಸಗಾವ, ಉಪಾಧ್ಯಕ್ಷ ಪಂಕಜ ಸುತಾರ, ತಂಟೆ-ತಕರಾರುಮುಕ್ತ ಗ್ರಾಮದ ಸಮಿತಿ ಅಧ್ಯಕ್ಷ ಲಕ್ಷ್ಮಣ ಸಲಗರೆ, ಬಾಲರೋಗ ತಜ್ಞ ಡಾ. ಶಿವರಾಜ ಸಂಗಶೆಟ್ಟಿ, ಶೇಳಕೆ ಪ್ರೌಢಶಾಲೆಯ ಮಾಜಿ ಚೆರಮನ್ ಮಲ್ಲಿನಾಥ ಶೇಳಕೆ, ಮುಖ್ಯಗುರು ಅನಿಲ ದೇಶಮುಖ ಮುಖ್ಯ ಅತಿಥಿಗಳಾಗಿರುವರು.

ಗ್ರಾಮದ ಸಾಫ್ಟವೇರ್ ಎಂಜಿನಿಯರ್ ರಾಜಕುಮಾರ ಪೋಮಾಜಿ, ಯುವ ಉದ್ಯಮಿ ಸಂತೋಷ ಹರಕಾರೆ, ನೂತನ ಮ್ಯಾನೆಜರ್ ಚನ್ನಬಸವ ಪೋಮಾಜಿ ಸೇರಿದಂತೆ ನಿವೃತ್ತಿ ಹೊಂದಿದ ಎಎಸ್‌ಐ ಶಿವಶರಣ ಪೋಮಾಜಿ, ಬಸ್ ಚಾಲಕ ಚಂದ್ರಾಮ ಪೋಮಾಜಿಯವರನ್ನು ಗೌರವಿಸಲಾಗುವದು.

ಎರಡನೇ ವರ್ಷದ ಈ ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ ವಾಗದರಿ ಪರೀಕ್ಷಾಕೇಂದ್ರದ ವಿದ್ಯಾರ್ಥಿಗಳು ೮೬೦೦೨೧೭೧೮೮ ಮತ್ತು ೭೩೫೦೬೮೬೮೫೩ ಗೆ ಸಂಪರ್ಕಿಸಬಹುದು ಎಂದು ಉಪಾಧ್ಯಕ್ಷ ಘಾಳಯ್ಯ ಸ್ವಾಮಿ ಕೋರಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KW7PgYimGT7HL73bAEKzSR

Share This Article
Leave a comment

Leave a Reply

Your email address will not be published. Required fields are marked *