ಸೊಲ್ಲಾಪುರದಲ್ಲಿ ವಿದ್ಯಾರ್ಥಿಗಳಿಗೆ ‘ಬಸವ ಪ್ರತಿಭಾ ಪ್ರಶಸ್ತಿ’ ವಿತರಣೆ

ಸೊಲ್ಲಾಪುರ

ವಿದ್ಯಾರ್ಥಿಗಳ ಶಿಕ್ಷಣ ಮತ್ತು ಸಂಸ್ಕಾರದ ಮೇಲೆಯೇ ಭಾರತದ ಭವಿಷ್ಯ ನಿಂತಿದೆ. ಅದಕ್ಕಾಗಿಯೇ ೧೨ ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪದ ಮೂಲಕ ತಾರತಮ್ಯ ಇಲ್ಲದೇ ಎಲ್ಲರಿಗೂ ಶಿಕ್ಷಣ ಪಡೆಯುವ ವ್ಯವಸ್ಥೆ ಮಾಡಿದ್ದರು ಎಂದು ಧುತ್ತರಗಾವ- ಉಸ್ತುರಿ ಮಠದ ಕೋರಣೇಶ್ವರ ಮಹಾಸ್ವಾಮಿಗಳು ಅಭಿಪ್ರಾಯ ಪಟ್ಟರು.

ಶನಿವಾರ ಸೊಲ್ಲಾಪುರದ ಹತ್ತುರೆ ವಸ್ತಿಯಲ್ಲಿಯ ಸಿದ್ಧವ್ವಬಾಯಿ ಹತ್ತುರೆ ಸಾಂಸ್ಕೃತಿಕ ಸಭಾಭವನದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಸೊಲ್ಲಾಪುರ ಜಿಲ್ಲಾ ಘಟಕ ಆಯೋಜಿಸಿದ್ದ, ಜಿಲ್ಲೆಯ ಲಿಂಗಾಯತ ಧರ್ಮದ ಎಲ್ಲ ಒಳಪಂಗಡಗಳ ೧೦ನೇ ಮತ್ತು ೧೨ನೇ ಇಯತ್ತೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ‘ಬಸವ ಪ್ರತಿಭಾ ಪ್ರಶಸ್ತಿ’ ವಿತರಣೆ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

ಜಾಗತಿಕ ಲಿಂಗಾಯತ ಮಹಾಸಭಾ ಸಂವಿಧಾನಿಕವಾಗಿ ಕಾನೂನು ರೀತಿಯಲ್ಲಿ ಹೋರಾಟ ಮಾಡುತ್ತಿರುವ ಬೃಹತ್ ಸಂಘಟನೆಯಾಗಿದ್ದು, ನಿವೃತ್ತ ಅಧಿಕಾರಿಗಳು, ಕಾನೂನು ತಜ್ಞರು, ಸಾಹಿತಿಗಳು, ವಿಚಾರವಂತರು ಈ ಸಂಘಟನೆಯಲ್ಲಿದ್ದಾರೆ. ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಧರ್ಮ ಮಾನ್ಯತೆಗೆ ಹೋರಾಟ ಮಾಡುತ್ತಿರುವುದರ ಜೊತೆಗೆ ಇಂತಹ ಸಮಾಜೋಪಯೋಗಿ ಕಾರ್ಯಕ್ರಮಗಳು ಆಯೋಜಿಸುತ್ತಿರುವದು ಶ್ಲಾಘನೀಯ. ಯಾವ ಸಮಾಜದಲ್ಲಿ ಹೆಚ್ಚು ಅಧಿಕಾರಿಗಳು, ವಿಚಾರವಂತರು ನಿರ್ಮಾಣವಾಗುತ್ತಾರೆಯೋ ಆ ಸಮಾಜ ಶ್ರೀಮಂತವಾಗುತ್ತದೆ ಎಂದರು.

ಸಾನಿಧ್ಯ ವಹಿಸಿದ್ದ ಅಕ್ಕಲಕೋಟ ವಿರಕ್ತಮಠದ ಬಸವಲಿಂಗ ಶ್ರೀಗಳು ಸಮಾಜದ ವಿದ್ಯಾರ್ಥಿಗಳಿಗೆ ಪ್ರೊತ್ಸಾಹ ನೀಡುವ ಈ ಕಾರ್ಯ ಮಾಡುತ್ತಿರುವದು ತುಂಬ ಸಂತೋಷ, ವಿದ್ಯಾರ್ಥಿಗಳ ಹೆಚ್ಚಿನ ಸಾಧನೆಗೆ ಇದು ಪ್ರೇರಣೆ ನೀಡುತ್ತದೆ ಎಂದರು.

ಡ್ರಿಮ್ ಫೌಂಡೇಶನ್‌ದ ಕಾಶಿನಾಥ ಭತಕುಣಕಿ, ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಯಶಸ್ವಿಯಾಗುವದು ಹೇಗೆ? ಕುರಿತು ಮಾರ್ಗದರ್ಶನ ಮಾಡಿದರು.

ಸಾಂಸ್ಕೃತಿಕ ನಾಯಕ ಮಹಾತ್ಮ ಬಸವಣ್ಣ, ಶಿವಯೋಗಿ ಸಿದ್ಧರಾಮರ ಭಾವಚಿತ್ರಕ್ಕೆ ಗಣ್ಯರು ಪೂಜೆ ಸಲ್ಲಿಸಿ, ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಜಿಲ್ಲೆಯ ಪ್ರಥಮ ದರ್ಜೆ ಸರಕಾರಿ ಗುತ್ತಿಗೆದಾರ ಪರಮಾನಂದ ಅಲಗೊಂಡ ಪಾಟೀಲರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಎಪಿಎಮ್‌ಸಿಯ ನೂತನ ಸಂಚಾಲಕಿ ಇಂದುಮತಿ ಅಲಗೊಂಡ ಪಾಟೀಲ, ಜಾ.ಲಿಂ.ಮ. ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ, ಮಹಾರಾಷ್ಟ್ರ ರಾಜ್ಯ ಕಾರ್ಯಾಧ್ಯಕ್ಷ ವಿಜಯಕುಮಾರ ಹತ್ತುರೆ, ಕಲಬುರಗಿಯ ಆರ್.ಜಿ. ಶೆಟಗಾರ, ಹಣಮಂತರಾವ ಪಾಟೀಲ, ಶಿವಶರಣಪ್ಪ ಚಿಗುಣೆ, ಜಿಲ್ಲಾಧ್ಯಕ್ಷ ಶಿವಾನಂದ ಗೋಗಾವ, ಶಿಕ್ಷಕ ನೇತಾರ ವೀರಭದ್ರ ಯಾದವಾಡ, ಗಂಗಾಧರ ಥಳಂಗೆ, ಸರಕಾರಿ ಗುತ್ತಿಗೆದಾರ ರೇವಣಸಿದ್ಧ ಬಿಜ್ಜರಗಿ, ವಿರೇಂದ್ರ ಹಿಂಗಮಿರೆ, ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಮುಲಗೆ, ನಾಗೇಂದ್ರ ಕೋಗನೂರೆ, ಮಹಿಳಾಧ್ಯಕ್ಷೆ ರಾಜಶ್ರೀ ಥಳಂಗೆ ವೇದಿಕೆಯಲ್ಲಿದ್ದರು.

ಜಿಲ್ಲೆಯ ೧೦ ನೇ ಮತ್ತು ೧೨ ನೇ ಒಟ್ಟು ೯೭ ವಿದ್ಯಾರ್ಥಿಗಳಿಗೆ ಪರಮಾನಂದ ಅಲಗೊಂಡ-ಪಾಟೀಲರಿಂದ ನೆನಪಿನ ಕಾಣಿಕೆ, ಪ್ರಮಾಣಪತ್ರ, ಶುದ್ಧ ವಿಭೂತಿ, ಬಸವಣ್ಣವರ ಪುಸ್ತಕ ನೀಡಿ ಗೌರವಿಸಲಾಯಿತು.

ಸಮಾಜದ ರಾಜಶೇಖರ ಕಾಪಸೆ, ಎಪಿಎಮ್‌ಸಿಯ ನೂತನ ಸಂಚಾಲಕಿ ಇಂದುಮತಿ ಅಲಗೊಂಡ-ಪಾಟೀಲ, ಯುವ ಎಂಜಿನಿಯರರಾದ ಋಗ್ವೇದಿ ಪಾಟೀಲ, ರಿತೇಶ ಪಾಟೀಲ, ಸಂಕೇತ ಹೌದೆ, ಪ್ರಜ್ವಲ ಚಳಗೇರಿಯವರನ್ನು ಗೌರವಿಸಲಾಯಿತು.

ಜಾಗತಿಕ ಲಿಂಗಾಯತ ಮಹಾಸಭಾದ ಸೊಲ್ಲಾಪುರ ನಗರ ಅಧ್ಯಕ್ಷರೆಂದು ರಾಜೇಂದ್ರ ಖಸಗಿ, ಮಹಿಳಾ ಅಧ್ಯಕ್ಷರೆಂದು ಅಂಜಲಿ ಶಿರಸಿಯವರನ್ನು, ಚನ್ನಬಸಪ್ಪ ಗುರುಭೇಟಿಯವರನ್ನು ಜುಳೆ ಸೊಲ್ಲಾಪುರದ ಅಧ್ಯಕ್ಷರೆಂದು ಉಮೇಶ ಕಲ್ಯಾಣಿಯವರನ್ನು ಉತ್ತರ ಸೊಲ್ಲಾಪುರ ತಾಲೂಕಿನ ಅಧ್ಯಕ್ಷರೆಂದು, ರವೀಂದ್ರ ಶೆಠೆಯವರನ್ನು ಸಾಂಗೊಲಾ ತಾಲೂಕಿನ ಅಧ್ಯಕ್ಷರೆಂದು ನೇಮಿಸಿ ನೇಮಕಾತಿ ಪತ್ರ ನೀಡಲಾಯಿತು.

ಜಿಲ್ಲಾ ಘಟಕದ ಶಿವರಾಜ ಕೊಟಗೆ, ರಾಜೇಂದ್ರ ಹೌದೆ, ಸಚಿನ ಕಾಲಿಬತ್ತಿ, ಡಾ. ಬಸವರಾಜ ನಂದರ್ಗಿ, ಕವಿತಾ ಹಾಲಕುಡೆ, ಚನ್ನಬಸಪ್ಪ ಗುರುಭೇಟ್ಟಿ, ಲಕ್ಷ್ಮಣ ಚಳಗೇರಿ, ಶಿವಕುಮಾರ ಶಿರೂರ, ವಿಜಯಕುಮಾರ ಭಾವೆ, ಅಪ್ಪಾಸಾಹೇಬ ಪಾಟೀಲ, ಮೀನಾಕ್ಷಿ ಬಾಗಲಕೋಟೆ, ಮಲ್ಲಿನಾಥ ಥಳಂಗೆ, ಧರ್ಮರಾಜ ಬಿರಾಜದಾರ, ಓಂಕಾರ ಹತ್ತುರೆ ಸೇರಿದಂತೆ ಹಲವರು ಕಾರ್ಯಕ್ರಮ ಯಶಸ್ಸಿಗೆ ಶಮಿಸಿದರು.

ರಾಜ್ಯ ಕಾರ್ಯಧ್ಯಕ್ಷ ವಿಜಯಕುಮಾರ ಹತ್ತುರೆ ಸ್ವಾಗತಿಸಿದರು. ಜಿಲ್ಲಾಧ್ಯಕ್ಷ ಶಿವಾನಂದ ಗೋಗಾವ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಶ ಪೀರಗೊಂಡೆ, ರಮೇಶ ಯೆಣೆಗುರೆ ಕಾರ್ಯಕ್ರಮ ನಿರೂಪಿಸಿದರೆ, ಗಣಪತಿ ಪಾಟೀಲ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/DAHwtSaP5nUL2sT483TnP6

Share This Article
Leave a comment

Leave a Reply

Your email address will not be published. Required fields are marked *