ತುಮಕೂರು
‘ಪದ್ಮಭೂಷಣ ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು’ ಗ್ರಂಥ ಲೋಕಾರ್ಪಣೆ ಸಮಾರಂಭ ಜೂನ್ 28, 2025 ಶನಿವಾರ ಬೆಳಿಗ್ಗೆ 11ಕ್ಕೆ ತುಮಕೂರು ಸಿದ್ದಗಂಗಾ ಮಠದ, ಶ್ರೀ ಉದ್ದಾನೇಶ್ವರ ಸಮುದಾಯ ಭವನದಲ್ಲಿ ನಡೆಯಲಿದೆ.

ಸಾನಿಧ್ಯವನ್ನು ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಅಧ್ಯಕ್ಷರು, ಶ್ರೀ ಸಿದ್ದಗಂಗಾ ಮಠ ವಹಿಸಲಿದ್ದಾರೆ. ಉಪಸ್ಥಿತಿ ಪೂಜ್ಯ ಶ್ರೀ ಶಿವಸಿದ್ದೇಶ್ವರ ಸ್ವಾಮಿಗಳು, ಗ್ರಂಥ ಲೋಕಾರ್ಪಣೆಯನ್ನು ನಾಡೋಜ ಡಾ. ಗೊ.ರು. ಚೆನ್ನಬಸಪ್ಪ ಹಿರಿಯ ಜಾನಪದ ವಿದ್ವಾಂಸರು ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಶ್ರೀ ಜಯವಿಭವ ಸ್ವಾಮಿ ಕಾರ್ಯನಿರ್ವಾಹಕ ನಿರ್ದೇಶಕರು ಸಿದ್ದಗಂಗಾ ವಿದ್ಯಾ ಸಂಸ್ಥೆ ವಹಿಸುವರು. ಗ್ರಂಥಕರ್ತ ಶ್ರೀ ಎಚ್.ಎಸ್. ಸಿದ್ದಗಂಗಪ್ಪ ಸಂಪಾದಕರು, ಸಿದ್ದಗಂಗಾ ಮಾಸಪತ್ರಿಕೆ ಶ್ರೀ ಸಿದ್ದಗಂಗಾ ಮಠ ಉಪಸ್ಥಿತರಿರುವರು.
ಮಠದ ಹಳೆಯ ವಿದ್ಯಾರ್ಥಿಗಳು ಹಾಗೂ ಹಿತೈಷಿಗಳ ಸಂಘ ಸರ್ವರಿಗೂ ಸ್ವಾಗತ ಕೋರಿದ್ದಾರೆ.