ಸುತ್ತೂರು ಜಾತ್ರಾ ಮಹೋತ್ಸವ : 155 ಜೋಡಿಗಳ ಸಾಮೂಹಿಕ ವಿವಾಹ

ಬಸವ ಮೀಡಿಯಾ
ಬಸವ ಮೀಡಿಯಾ

ಮೈಸೂರು

ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಜರುಗಿದ ಸಾಮೂಹಿಕ ವಿವಾಹದಲ್ಲಿ 155 ಜೋಡಿಗಳು ನವಜೀವನಕ್ಕೆ ಸೋಮವಾರ ಕಾಲಿಟ್ಟರು.

ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಜರುಗಿದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಚಾಲನೆ ನೀಡಿದರು.

3 ಲಿಂಗಾಯತ, 84 ಪರಿಶಿಷ್ಟ ಜಾತಿ, 22 ಪರಿಶಿಷ್ಟ ಪಂಗಡ, 22 ಹಿಂದುಳಿದ ವರ್ಗ, 23 ಅಂತರ್ಜಾತಿ, 3 ಅಂಗವಿಕಲ‌, 17 ತಮಿಳುನಾಡಿನ ಜೋಡಿಗಳು ವಿವಾಹವಾದರು.

2000 ರಿಂದ 2024ರ ವರೆಗೆ ಶ್ರೀ ಕ್ಷೇತ್ರದ ಸಾಮೂಹಿಕ ವಿವಾಹದಲ್ಲಿ 3,194 ಜೋಡಿಗಳು ಸತಿಪತಿಗಳಾಗಿದ್ದಾರೆ.

Share This Article
Leave a comment

Leave a Reply

Your email address will not be published. Required fields are marked *