ಹೀರೆಹಾಳ ಗ್ರಾಮದಲ್ಲಿ ಬಸವ ಜಯಂತಿ ಆಚರಣೆ, ಸಾಧಕರಿಗೆ ಸನ್ಮಾನ

ಬಸವ ಮೀಡಿಯಾ
ಬಸವ ಮೀಡಿಯಾ

ರೋಣ

ತಾಲ್ಲೂಕಿನ ಹೀರೆಹಾಳ ಗ್ರಾಮದಲ್ಲಿ ತೇಲಿ ಕುಟಂಬದ ಸರ್ವಸದಸ್ಯರ ವತಿಯಿಂದ ಬಸವೇಶ್ವರರ 894ನೇ ಜಯಂತಿ ಕಾರ್ಯಕ್ರಮ ರವಿವಾರ ನಡೆಯಿತು.

ಗ್ರಾಮದ ‘ಬಸವಾಮೃತ’ ನಿಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ಸನ್ಮಾನ, ಕಾಯಕನಿಷ್ಠರಿಗೆ ಸತ್ಕಾರ, ನಿವೃತ್ತ ಯೋಧರಿಗೆ ಸನ್ಮಾನವನ್ನು ನಡೆಸಲಾಯಿತು. ವಿಶಿಷ್ಟ ಸಾಧನೆಗಾಗಿ ಅವಿನಾಶ ಶರಬಣ್ಣ ತೇಲಿ ಅವರನ್ನೂ ಸತ್ಕರಿಸಲಾಯಿತು.

ಸಮಾರಂಭದ ಸಾನಿಧ್ಯವನ್ನು ಮನಗುಂಡಿಯ ಶ್ರೀ ಗುರುಬಸವ ಮಹಾಮನೆಯ ಪೂಜ್ಯ ಬಸವಾನಂದ ಸ್ವಾಮಿಗಳು ವಹಿಸಿದರು. ಅನುಭಾವ ನೀಡುತ್ತ ಮೌಢ್ಯ, ಕಂದಾಚಾರದ ವಿರುದ್ಧ ಜನರು ಅರಿವು ಮೂಡಿಸಿಕೊಳ್ಳಲು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕೊಪ್ಪಳದ ನಿವೃತ್ತ ಉಪನ್ಯಾಸಕರಾದ ಶಂಭುಲಿಂಗಪ್ಪ ಹರಗೇರಿ ವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಆಶಾ ಕುಮಾರ ತೇಲಿ ನಡೆಸಿಕೊಟ್ಟರು.

ಮನೆತನದ ಹಿರಿಯ ಶರಣೆ ಭೀಮವ್ವ ಶಂಕರಪ್ಪ ತೇಲಿ ಸೇರಿದಂತೆ ಗ್ರಾಮಸ್ಥರು, ತೇಲಿ ಬಂಧುಗಳು, ಮಿತ್ರರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FYCnBXoFfiK0GH4dAJvoia/

Share This Article
Leave a comment

Leave a Reply

Your email address will not be published. Required fields are marked *