ಟಿ ಆರ್ ಚಂದ್ರಶೇಖರ್ ಅವರಿಗೆ ಗೊರುಚ ಶರಣ ಸಾಹಿತ್ಯ ಗ್ರಂಥ ‍ಪ್ರಶಸ್ತಿ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ನೀಡುವ ‘ಗೊರುಚ ದತ್ತಿ ನಿಧಿ ಪ್ರಶಸ್ತಿ’ಗಳ ಪ್ರದಾನ ಕಾರ್ಯಕ್ರಮ ಮೇ 18ರಂದು ಹಾಸನದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಡೆಯಲಿದೆ.

2024ನೇ ಸಾಲಿನ ಪ್ರಶಸ್ತಿಗಳಿಗೆ ಟಿ ಆರ್ ಚಂದ್ರಶೇಖರ್ (ಗೊರುಚ ಶರಣ ಸಾಹಿತ್ಯ ಗ್ರಂಥ ‍ಪ್ರಶಸ್ತಿ), ಮೊಗಳ್ಳಿ ಗಣೇಶ (ಜನಪದ ಸಾಹಿತ್ಯ ಗ್ರಂಥ ಪ್ರಶಸ್ತಿ) ಡಾ. ಶಾಂತ ಇಮ್ರಾಪುರ (ಗೊರುಚ ಶರಣ ಪ್ರಶಸ್ತಿ), ಪ್ರೊ ಜಗನ್ನಾಥ ಹೆಬ್ಬಾಳೆ (ಗೊರುಚ ಜಾನಪದ ಪ್ರಶಸ್ತಿ) ಆಯ್ಕೆಯಾಗಿದ್ದಾರೆ.

ಟಿ ಆರ್ ಚಂದ್ರಶೇಖರ್ ಅವರ ಬಸವ ಪ್ರಣೀತ ಲಿಂಗಾಯತ ಧರ್ಮ ಕೃತಿಗೆ ಪ್ರಶಸ್ತಿ ಲಭ್ಯವಾಗಿದೆ. ಹಂಪಿ ವಿಶ್ವವಿದ್ಯಾಲಯದ ನಿವೃತ ಅರ್ಥಶಾಸ್ತ್ರ ಪ್ರಾದ್ಯಾಪಕರಾಗಿರುವ ಚಂದ್ರಶೇಖರ್ ಹಲವಾರು ಜನಪ್ರಿಯ ಕೃತಿಗಳ ಲೇಖಕರು. ಇವರು ಬಸವ ಮೀಡಿಯಾದ ಟ್ರಸ್ಟಿನ ಛೇರ್ಮನ್ ಆಗಿ ಕೂಡ ಕಾರ್ಯ ನಿರ್ವಹಿಸುತ್ತಿದ್ದಾರೆ.

ಶರಣ ಮತ್ತು ಜಾನಪದ ಪ್ರಶಸ್ತಿಗಳು ತಲಾ ₹25 ಸಾವಿರ ನಗದು ಹಾಗೂ ಗ್ರಂಥ ಪ್ರಶಸ್ತಿಗಳು ತಲಾ ₹10 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿವೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KW7PgYimGT7HL73bAEKzSR

Share This Article
1 Comment
  • ಡಾ. ಟಿ. ಆರ್. ಚಂದ್ರಶೇಖರ್ ಸರ್ ಗೆ ಅಭಿನಂದನೆಗಳು , ಬಸವ ಪ್ರಣೀತ ಲಿಂಗಾಯತ ಧರ್ಮ ಕ್ರತಿ ಹೆಚ್ಚು ಜನರಿಗೆ ತಲುಪವಂತಾಗಲಿ ಮತ್ತು ಇದು ಲಿಂಗಾಯತ ಧರ್ಮ ಸ್ವತಂತ್ರ ಅಸ್ಮಿತೆಗೆ ಬಲ ತುಂಬುತ್ತೆ. ಶರಣ ಸಾಹಿತ್ಯ ಪರಿಷತ್ತು ಕೂಡ ಲಿಂಗಾಯತ ಸ್ವತಂತ್ರ ಧರ್ಮ ಅಸ್ಮಿತೆಗೆ ಹೆಚ್ಚಿನ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುವಂತಾಗಲಿ

Leave a Reply

Your email address will not be published. Required fields are marked *