“ಬಸವಣ್ಣನವರ ಪ್ರತಿಮೆಗೆ ಯಾವ ಆಚರಣೆಯೂ ನಡೆಯಲಿಲ್ಲ, ವಚನ ಸಾಹಿತ್ಯದಲ್ಲಿ ಇವುಗಳಿಗೆ ಅವಕಾಶವಿಲ್ಲ.”
ಸುತ್ತೂರು
ಇಲ್ಲಿನ ತುಮ್ಮನೇರಳೆ ಗ್ರಾಮದಲ್ಲಿ ಬುಧವಾರ ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಅವರು ಬಸವೇಶ್ವರ ಪುತ್ಥಳಿಯನ್ನು ಅನಾವರಣಗೊಳಿಸಿದರು.
ಪ್ರತಿಮೆ ಅನಾವರಣ ಮಾಡಿದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಮಾತನಾಡುತ್ತಾ, ಕಲ್ಯಾಣಕ್ಕೆ ಎಲ್ಲ ಕಡೆಯಿಂದ ಶರಣರು ಬಂದರು. ಆ ಶರಣರಿಂದ ನಾಡು ಬೆಳಗಿತು, ಪಾವನವಾಯಿತು ಎಂದರು.
ಕಾರ್ಯಕ್ರಮದ ಅಹ್ವಾನ ಪತ್ರಿಕೆಯಲ್ಲಿ ಗಣಪತಿ ಪೂಜೆ, ವಾಸ್ತು ಶಾಂತಿ, ಸ್ಥಳ ಶುದ್ಧಿಕರಣ, ನವಗ್ರಹ ಹೋಮ ಮುಂತಾದ ಆಚರಣೆಗಳ ಮೂಲಕ ‘ಶ್ರೀ ಬಸವೇಶ್ವರ ಶಿಲಾ ವಿಗ್ರಹ ಶುದ್ದೀಕರಣ’ ನಡೆಯಲಿದೆ ಎಂದು ತಿಳಿಸಿದ್ದು ಚರ್ಚೆಗೆ ಕಾರಣವಾಗಿತ್ತು.

ಪೂಜೆ ಕಾರ್ಯವನ್ನು ನಿರ್ವಹಿಸಿದ ಗ್ರಾಮದ ತಮ್ಮಡಿಯೊಬ್ಬರು ಅಹ್ವಾನ ಪತ್ರಿಕೆಯಲ್ಲಿ ನಮೂದಿಸಿದ್ದ ಎಲ್ಲಾ ಆಚರಣೆಗಳು ಮಂಗಳವಾರ ಸಂಜೆ ಮತ್ತು ಬುಧವಾರ ಬೆಳಗ್ಗೆ ಸ್ವಾಮೀಜಿಗಳು ಬರುವ ಮುಂಚೆ ನಡೆದವು. ಆದರೆ ಅವೆಲ್ಲ ನಡೆದದ್ದು ಬಸವಣ್ಣನವರ ಪ್ರತಿಮೆ ಇರುವ ವೇದಿಕೆಯ ಕೆಳಗೆ ಕಟ್ಟಿರುವ ಹೊಸ ಕೊಠಡಿಯಲ್ಲಿ ಎಂದು ತಿಳಿಸಿದರು. “ಬಸವಣ್ಣನವರ ಪ್ರತಿಮೆಗೆ ಯಾವ ಆಚರಣೆಯೂ ನಡೆಯಲಿಲ್ಲ, ವಚನ ಸಾಹಿತ್ಯದಲ್ಲಿ ಇವುಗಳಿಗೆ ಅವಕಾಶವಿಲ್ಲ,” ಎಂದು ಹೇಳಿದರು.
ಅನಾವರಣದ ನಂತರ ಗ್ರಾಮದಲ್ಲಿ ನಡೆದ ಧಾರ್ಮಿಕ ಸಭೆಯ ದಿವ್ಯ ಸಾನಿಧ್ಯ ವಹಿಸಿದ್ದ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅವರು ಮಾತನಾಡಿ, ಬಸವಣ್ಣ ಸಮಾಜದಲ್ಲಿ ಸಮಾನತೆ ನೀಡಿದರು. ತಮ್ಮ ವಚನಗಳ ಮೂಲಕ ಸಮಾಜ ಉದ್ಧಾರ ಮಾಡಿದರು ಎಂದರು.
ಕುದೇರುಮಠದ ಗುರುಮಹಾಂತ ಸ್ವಾಮೀಜಿ ಮಾತನಾಡುತ್ತಾ, ಲಿಂಗಪೂಜೆ ಮಾಡಿ ದೇವರ ನಿಜ ಸ್ವರೂಪ ಕಾಣಿರಿ. ಲಿಂಗೈಕ ಸಿದ್ದಗಂಗಾ ಶಿವಕುಮಾರ ಶ್ರೀಗಳು ಬಸವತತ್ವವನ್ನು ತಾವು ಪಾಲಿಸಿ, ನಮಗೆಲ್ಲರಿಗೂ ತಿಳಿಸಿ ಹೋದರು ಎಂದರು.

ಮಹಾಂತಸ್ವಾಮಿಗಳು ಗುರುಮಲ್ಲೇಶ್ವರ ದಾಸೋಹ ಮಠ ದೇವನೂರು, ಚನ್ನಬಸವ ಸ್ವಾಮಿಗಳು ಗುರುಕಂಬಳೀಶ್ವರ ಮಠ ಮಲ್ಲನಮೂಲೆ, ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ಮದ್ವಾಟಾಳು ಸೂರ್ಯ ಸಿಂಹಾಸನಮಠ ವಾಟಾಳು, ಬಸವಲಿಂಗಸ್ವಾಮಿಗಳು ಮಹಾಂತಸ್ವಾಮಿಮಠ ದಂಡಿಕೆರೆ, ಗುರುಸ್ವಾಮಿಗಳು ಗುರು ಮಲ್ಲೇಶ್ವರ ಭಿಕ್ಷದಮಠ ಹೊಸಕೋಟೆ ಇವರುಗಳೆಲ್ಲ ಸಭೆಯ ಸಮ್ಮುಖ ವಹಿಸಿದ್ದರು.
ಗ್ರಾಮದ ಚಂದ್ರು ಜಿ ಅವರು ತುಮ್ಮನೇರಳೆ ಹಾಗೂ ಹೊಸಕೋಟೆ ಗ್ರಾಮದ ಮುಖಂಡರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಸುಮಾರು 4,000 ಜನರಿಗೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಅನ್ನ ದಾಸೋಹ ನಡೆಯಿತು ಎಂದರು.
ಬಸವಣ್ಣನವರ ಪ್ರತಿಮೆಯ ಶಿಲ್ಪಿ ಕೆ. ರಾಜಾಚಾರ್ ಹಾಗೂ ದಾಸೋಹಿಗಳನ್ನು ಈ ಸಂದರ್ಭದಲ್ಲಿ ಸತ್ಕರಿಸಲಾಯಿತು.



ಬಸವಣ್ಬಣನವರ?ಹೆಸರನ್ನೆ ಅಳಿಸಿ ಉಳುಮೆ ಮಾಡುವ ಎತ್ತನ್ನು ಬಸವ ಎಂದು ಬಿಂಬಿಸಲಾಗಿತ್ತು .ಆದ್ದರಿಂದ ಬಸವೇಶ್ವರ ಪುತ್ಥಳಿಯ ನಿರ್ಮಾಣದಿಂದ ಬಸವಣ್ಣನವರ ವಿಚಾರಗಳ ಜೀವಂತಿಕೆಯ ಜೊತೆಗೆ ಬಸವನೆಂದರೆ ಎತ್ತಲ್ಲ (ನಂದಿಯಲ್ಲ)ಲಿಂಗಾಯತ ಧರ್ಮದ ಧರ್ಮ ಗುರು ಎಂಬುದನ್ನು ತಿಳಿಯಲು ಸಹಾಯವಾಗಬಹುದು…..ಆದರೆ ಬಸವೇಶ್ವರ ಪುತ್ಥಳಿಯ ನಿರ್ಮಾಣದ ಸಂದರ್ಭದಲ್ಲಿ ಹೋಮ ,ಹವನ,ಅಭೇಷಕ ಹಾಗು ಎಲ್ಲಕ್ಕಿಂತ ಮುಖ್ಯವಾಗಿ ಬಸವೇಶ್ವರ ಪುತ್ಥಳಿಗೆ ಶುಧ್ಧಿಕರಣ ಮಾಡುತ್ತಾರೆಂಬುದು ಅವೈಜ್ಞಾನಿಕ ಮತ್ತು ಜ್ಞಾನಶೂನ್ಯವಾಗಿದೆ.
ಆದರೆ ಗ್ರಾಮೀಣ ಭಾಗದ ಜನರು ಬಸವಣ್ಣನವರನ್ನ ಬಬಸವೇಶ್ವರರು ದೇವರು ಎಂಬ ಭಕ್ತಿಯ ನೆಲೆಗಟ್ಟಿನಲ್ಲಿ ಪೂಜೆಗಳನ್ನ ಮಾಡಲು ನಿರ್ಧರಿಸಿರಬಹುದು ಆದರೆ ಜ್ಞಾನವನ್ನ ಬಿತ್ತರಿಸುವ ಕೆಲಸದಲ್ಲಿರಬೇಕಾದ ಪ್ರಬಲ ಮಠಾಧೀಶರು ಆಹ್ವಾನ ಪತ್ರಿಕೆಯನ್ನ ನೋಡಿದಾಗಲೇ ಪುತ್ಥಳಿಗೆ ಹೋಮ ಹವನ ಶುಧ್ಧಿಕರಣ ಬೇಕಿಲ್ಲವೆಂದು ಎಚ್ಚರಿಸಬೇಕಿತ್ತು. ಯಾಕಂದರೆ ಸ್ವಾಮೀಜಿಗಳು ಹೇಳಿದ್ರೆ ಜನ ಕೇಳುತ್ತಾರೆ…ಅಥವಾ ಕೆಲವು ಸ್ವಾಮೀಜಿಗಳಿಗೂ ಈ ರೀತಿಯ ವೈಧಿಕತೆಯ ವೈಭವಿಕರಣದ ಅವಶ್ಯಕತೆಯಿತ್ತೇನೋ ಎನಿಸುತ್ತದೆ
ಈ ಕಾರ್ಯಕ್ರಮ ದಿಂದ ಲಿಂಗಾಯತರಲ್ಲಿ ಧರ್ಮ ಜಾಗೃತಿ ಮೂಡುತ್ತಿರವುದು ಕರ್ನಾಟಕದ ಮೂಲೆ ಮೂಲೆಗೆ ಮನವರಿಕೆ ಆದಂತಿದೆ. ಮಠಾಧೀಶರು ಸಹ ಮುಂದೆ ಬಸವ ತತ್ವಾನುಸಾರ ಮುಂದುವರೆಯುವುದು ಅನಿವಾರ್ಯ ಎಂಬ ಹೆಚ್ಚರಿಕೆಯನ್ನು ಭಕ್ತರು ಕೊಟ್ಟಂತಿದೆ. ಬಸವ ಪ್ರಜ್ಞೆ ಶರವೇಗದಲ್ಲಿ ಹರಡುತ್ತಿರುವ ಶುಭ ಸೂಚನೆ ಕಾಣುತ್ತಿದೆ.
ಬಸವಣ್ಣನವರ ಪುತ್ಥಳಿ ಪ್ರತಿಷ್ಟಿತ ಮೊದಲು ಮಠಗಳ ಆವರಣದಲ್ಲಿ ನಡೆಯಬೇಕು. ಜೈ ಕಾಯಕಯೋಗಿ
ಹೌದು .ನೀವು ಹೇಳಿರುವುದು ಸತ್ಯ
ಶರಣು ಶರಣಾರ್ಥಿಗಳು ಸ್ನೇಹಿತರೆ ಈ ಮೀಡಿಯಾದ ಫಲದಿಂದಾಗಿ ಬಸವಣ್ಣನವರ ಸುದ್ದಿಕರಣ ಆಗಿಲ್ಲ ಅನಿಸುತ್ತದೆ ಆದರೆ ಬೇರೆ ಆವರಣದಲ್ಲಿ ಹೋಮ ಯಜ್ಞ ಅವನ ಎಲ್ಲ ಮಾಡಿ ಮುಗಿಸಿರುತ್ತಾರೆ