ವಿದ್ಯಾವರ್ಧಕ ಸಂಘದ ಚುನಾವಣೆಯಲ್ಲಿ ಚಂದ್ರಕಾಂತ ಬೆಲ್ಲದ ಬಣ ಗೆಲುವು

ಬಸವ ಮೀಡಿಯಾ
ಬಸವ ಮೀಡಿಯಾ

ಧಾರವಾಡ

ನಾಡಿನ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಕರ್ನಾಟಕ ವಿದ್ಯಾವರ್ಧಕ ಸಂಘದ ತ್ರೈವಾರ್ಷಿಕ ಚುನಾವಣೆಯಲ್ಲಿ ಚಂದ್ರಕಾಂತ ಬೆಲ್ಲದ – ಶಂಕರ ಹಲಗತ್ತಿ ಬಣ ಗೆಲುವು ಸಾಧಿಸಿದೆ.

ಅಧ್ಯಕ್ಷರಾಗಿ ಚಂದ್ರಕಾಂತ ಬೆಲ್ಲದ, ಉಪಾಧ್ಯಕ್ಷರಾಗಿ ಡಾ. ಸಂಜೀವ ಕುಲಕರ್ಣಿ, ಕಾರ್ಯಾಧ್ಯಕ್ಷರಾಗಿ ಬಸವಪ್ರಭು ಹೊಸಕೇರಿ, ಕೋಶಾಧ್ಯಕ್ಷರಾಗಿ ಸತೀಶ ತುರಮರಿ, ಪ್ರಧಾನ ಕಾರ್ಯದರ್ಶಿಯಾಗಿ ಶಂಕರ ಹಲಗತ್ತಿ, ಸಹಕಾರ್ಯದರ್ಶಿಯಾಗಿ ಶಂಕರ ಕುಂಬಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶೈಲಜಾ ಅಮರಶೆಟ್ಟಿ, ವೀರಣ್ಣ ಒಡ್ಡೀನ, ಗುರು ಹಿರೇಮಠ, ಮಹೇಶ ಹೊರಕೇರಿ, ಜಿನದತ್ತ ಹಡಗಲಿ, ಪ್ರೊ. ಶಶಿಧರ ತೋಡಕರ, ಶಿವಾನಂದ ಭಾವಿಕಟ್ಟಿ, ಮಹಿಳಾ ಮೀಸಲು ಸದಸ್ಯ ಸ್ಥಾನಕ್ಕೆ ವಿಶ್ವೇಶ್ವರಿ ಹಿರೇಮಠ ಹಾಗೂ ಎಸ್ಸಿಎಸ್ಟಿ ಮೀಸಲು ಸದಸ್ಯ ಸ್ಥಾನಕ್ಕೆ ಪ್ರೊ. ಧನವಂತ ಹಾಜವಗೋಳ ಆಯ್ಕೆಯಾಗಿದ್ದಾರೆ.

“ಜೂನ್ 1 ರಂದು ಸಂಘದಲ್ಲಿ ನಡೆಯುವ ಸಾಮಾನ್ಯ ಸಭೆಯಲ್ಲಿ ಫಲಿತಾಂಶವನ್ನು ಅಧಿಕೃತವಾಗಿ ಘೋಷಿಸಲಾಗುವುದು. ಇದು ಸಂಘದ ನಿಯಮ’ ಎಂದು ಚುನಾವಣಾಧಿಕಾರಿ ಸಿ.ಎನ್. ನೇಗಿನಾಳ ತಿಳಿಸಿದ್ದಾರೆ.”

ಆಡಳಿತ ಮಂಡಳಿಯ 15 ಸ್ಥಾನಗಳಿಗೆ ರವಿವಾರ ಕವಿಸಂನಲ್ಲಿ ಮತದಾನ ಜರುಗಿದ್ದು, ಶೇ.50 ರಷ್ಟು ಮತದಾನವಾಗಿತ್ತು. ಅಧ್ಯಕ್ಷ ಸ್ಥಾನದ ಪೈಪೋಟಿಗೆ ಇಳಿದಿದ್ದ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ್ ಬಣ ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ ಬಣದ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KW7PgYimGT7HL73bAEKzSR

Share This Article
Leave a comment

Leave a Reply

Your email address will not be published. Required fields are marked *