ವಿಮಾನ ದುರಂತದಲ್ಲಿ ಮಡಿದವರ ಮುಕ್ತಿಗಾಗಿ ಪ್ರಾರ್ಥನೆ

ಬೆಳಗಾವಿ

ವಚನ ಪಿತಾಮಹ ಡಾ. ಫ ಗು ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆಯಿಂದ ವಾರದ ಸಾಮೂಹಿಕ ಪ್ರಾರ್ಥನೆ ಜರುಗಿತು.

ಅಧ್ಷಕ್ಷತೆಯನ್ನು ಈರಣ್ಣಾ ದೇಯಣ್ಣವರ ವಹಿಸಿದ್ದರು. ಸುರೇಶ ನರಗುಂದ ಸಾಮೂಹಿಕ ಪ್ರಾಥ೯ನೆ ನಡಿಸಿಕೊಟ್ಟರು. ಬಿ. ಪಿ. ಜೇವಣಿ, ಸುರೇಶ ನರಗುಂದ, ಅಕ್ಕಮಹಾದೇವಿ ತೆಗ್ಗಿ, ಬಸವರಾಜ ಬಿಜ್ಜರಗಿ, ಜಯಶ್ರೀ ಚಾವಗಿ, ಮಂಜುಳಾ ದೇಯನ್ನವರ, ಅನಸೂಯಾ ಬಶೆಟ್ಟಿ, ಸುವರ್ಣ ಗುಡಸ, ಪ್ರೇಮಾ ಚಿನಿವಾರ ವಚನಗಳನ್ನು ಪ್ರಸ್ತುತ ಪಡಿಸಿದರು. ಯೋಗ ಗುರುಗಳಾದ ಸಿದ್ದಪ್ಪ ಸಾರಾಪುರಿ ಉತ್ತಮ ಆರೋಗ್ಯಕ್ಕಾಗಿ ಯೋಗ ಮುದ್ರೆಗಳ ಮಹತ್ವವನ್ನು ತಿಳಿಸಿ ಕೊಟ್ಟರು.

ಇದೇ ಸಂದಭ೯ದಲಿೢ ಸೇವಾರತ್ನ ಪ್ರಶಸ್ತಿ ಹಾಗೂ ಕಾವ್ಯ ರಚನೆಯಲ್ಲಿ ಪ್ರಶಸ್ತಿ ಪಡೆದ ಅಕ್ಕಮಹಾದೇವಿ ತೆಗ್ಗಿಯವರನ್ನು ಗೌರವಿಸಲಾಯಿತು. ಅಹಮದಾಬಾದ್ ವಿಮಾನ ದುರಂತದಲ್ಲಿ ಮಡಿದವರ ಮುಕ್ತಿಗಾಗಿ ಪ್ರಾಥಿ೯ಸಲಾಯಿತು. ಲಿಂಗಾಯತ ಸಂಘಟನೆಯಿಂದ ದಾಸೋಹ ಸೇವೆ ನಡೆಯಿತು.

ಜಯಶ್ರೀ ನಷ್ಟೆ, ಕಾವೇರಿ ಬಸವರಾಜ, ಸೊಂಟನವರ, ಬಸವರಾಜ ಕರಡಿಮಠ, ದೊಡಗೌಡ ಪಾಟೀಲ, ಕರಲಿಂಗನ್ನವರ, ರುದ್ರಗೌಡ ಪಾಟೀಲ, ಗಂಗಪ್ಪ ಉಣಕಲ್,‌ ಶಿವಾನಂದ ನಾಯಕ, ಕೆಂಪಣ್ಣಾ ರಾಮಾಪೂರೆ, ಶೇಖರ ವಾಲಿಇಟಗಿ, ತಿಗಡಿ ದಂಪತಿಗಳು, ಶಿವಾನಂದ ನಾಯಕ, ಎಸ್ ಎಸ್ ಪೂಜೇರ, ಕುಡಚಿಮಠ, ಸಿದ್ದಪ್ಪ ಸಾರಾಪೂರೆ, ಗಂಗಾಧರ ಹಿತ್ತಲಮನಿ, ಶಿವಾನಂದ ತಲ್ಲೂರ, ಬಸವರಾಜ ಮತ್ತಿಕೂಪ್ಪ ಹಾಗೂ ಶರಣ ಶರಣೆಯರು ಉಪಸ್ಥತರಿದ್ದರು. ಸದಾಶಿವ ದೇವರಮನಿ ನಿರೂಪಿಸಿ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/DAHwtSaP5nUL2sT483TnP6

Share This Article
Leave a comment

Leave a Reply

Your email address will not be published. Required fields are marked *