ಬೆಂಗಳೂರು
ಬೀದರನಲ್ಲಿ ನಡೆದ ವಕ್ಫ್ ಸಭೆಯಲ್ಲಿ ತಾವೊಬ್ಬ ಜವಾಬ್ದಾರಿಯುತ ಚುನಾಯಿತ ಶಾಸಕ ಎಂಬುದನ್ನು ಮರೆತು ಬಸನಗೌಡ ಪಾಟೀಲ ಯತ್ನಾಳ ಅವರು ಎಂದಿನಂತೆ ತಮ್ಮ ಹರಕಲು ಬಾಯಿಯ ಮೂಲಕ ಕನ್ನಡ ನಾಡಿನ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ ಬಗ್ಗೆ ಅಪಮಾನಕರ ಮಾತು ಆಡಿರುವುದಕ್ಕೆ ನಾಡಿನ ಜನತೆಯ ಕ್ಷಮೆಯಾಚಿಸಬೇಕೆಂದು ಲಿಂಗಾಯತ ಧರ್ಮ ಅಧ್ಯಯನ ಕೇಂದ್ರ ಸಂಸ್ಥಾಪಕ,
ಶರಣ ಶ್ರೀಶೈಲ ಜಿ. ಮಸೂತೆ ಒತ್ತಾಯಿಸಿದ್ದಾರೆ.

ಯತ್ನಾಳ್ ಅವರ ಹೇಳಿಕೆ ತಪ್ಪು, ಅದನ್ನು ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಮತ್ತು ಅವರ ಕ್ಷಮೆಯಾಚನೆಗೆ ಒತ್ತಾಯಿಸುತ್ತದೆ. ತಾವು ಹುಟ್ಟಿದ ಧರ್ಮವನ್ನೇ ಮರೆತು, ವಿವೇಕ, ವಿವೇಚನೆ ಮಾಡದೇ ಯಾರನ್ನೋ ಮೆಚ್ಚಿಸಲು ಅನಾಗರಿಕ ಮಾತುಗಳನ್ನು ಆಡಿ ಹರಕೆಯ ಕುರಿಯಾಗಿದ್ದಾರೆ. ತಮ್ಮ ವ್ಯಕ್ತಿತ್ವ ಮತ್ತು ಅಸ್ಮಿತೆ ಕಳೆದುಕೊಂಡ ಮಾನಸಿಕ ಅಸ್ವಸ್ಥ ರಾಜಕಾರಣಿ ಯತ್ನಾಳ್ ಅವರಾಗಿರುವರು.
ಇನ್ನು ಕಾಲ ಮಿಂಚಿಲ್ಲ, ವಿದೂಷಕನಂತೆ ಆಟವಾಡಿಸುವ ಮನುವಾದಿಗಳ ವಿಷ ವರ್ತುಲದಿಂದ ಹೊರಬಂದು,
ಧರ್ಮಗುರು ಬಸವಣ್ಣರಲ್ಲಿ ಕ್ಷಮೆಯಾಚಿಸಿದರೆ, “ಬೈದವರೆನ್ನ ಬಂಧುಗಳು, ನಿಂದಿಸದವರೆನ್ನ ತಂದೆ -ತಾಯಿಗಳು” ಎಂದ ಕರುಣಾಮೂರ್ತಿ ಬಸವಣ್ಣನವರ ಮಾರ್ಗದಲ್ಲಿ ನಡೆದಿದ್ದಾದರೆ, ಈ ನಾಡಿನ ಜನಾನುರಾಗಿ ಉತ್ತಮ ರಾಜಕಾರಣಿಯಾಗುತ್ತಿರಿ. ಇಲ್ಲದಿದ್ದರೆ ಶರಣರ ನೋವಿಗೆ ಕಾರಣವಾಗಿ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರಿ. ಯೋಚಿಸಿ ಪಶ್ಚಾತ್ತಾಪ ಹೊಂದಿರಿ, ಕ್ಷಮೆಯಾಚಿಸಿರಿ.
ಮನುವಾದಿಗಳ ಕಪಿಮುಷ್ಠಿಯಿಂದ ಹೊರಬನ್ನಿ, ನಿಮ್ಮನ್ನು ನೀವು ಬದಲಾಯಿಸಿಕೊಳ್ಳಿ ಎಂದು ಮಸೂತೆ ಯತ್ನಾಳ್ ಅವರಿಗೆ ಒತ್ತಾಯಿಸಿದ್ದಾರೆ.
ಕ್ಷಮೆ ಕೇಳಲೆ ಬೇಕು
ಬರೀ ಕ್ಷಮೆ ಕೇಳಿ ಎಂದು ಒತ್ತಾಯಿಸಬೇಡಿ. ರಾಜಕೀಯವಾಗಿ ಬಹಿಷ್ಕರಿಸಲು ಕರೆಕೊಡಿ . ಎಲ್ಲಾ ಲಿಂಗಾಯತ ಸಮೂಹಗಳು, ಬಸವಾಪರ ಸಂಘಟನೆಗಳು, ಬಸವತತ್ವ ಅನುಯಾಯಿ ಮಠಗಳು ಮತ್ತು ಮಠಾಧೀಷರುಗಳು ತಮ್ಮ ತಮ್ಮ ಸಮಾಜಕ್ಕೆ, ಅನುಯಾಯಿಗಳಿಗೆ ರಾಜಕೀಯವಾಗಿ ಬಹಿಷ್ಕರಿಸಲು ಕರೆಕೊಡಿ.
ಬಸನ ಗೌಡ ಯತ್ನಾಳ್ ಯಾವ ಕಾರ್ಯಕ್ರಮಕ್ಕೂ ಬಂದರು ಪ್ರತಿಭಟನೆ ಮುಖಂತರ ಉತ್ತರ ಕೊಡ ಬೇಕು