ಬಸವಕಲ್ಯಾಣ:
ಯೋಗವು ದೈಹಿಕ ಸದೃಢತೆಯನ್ನು ಮೀರಿದ ವ್ಯಾಯಾಮದ ಒಂದು ರೂಪವಾಗಿದೆ. ಇದು ಸಮತೋಲನ ಮತ್ತು ಸಾಮರಸ್ಯವನ್ನು ಬಯಸುವ ವ್ಯಕ್ತಿಗಳಿಗೆ ಒಂದು ಮಾರ್ಗವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಗುರುಬಸವ ಪಟ್ಟದ್ದೇವರು ಹೇಳಿದರು.
ಬಸವಕಲ್ಯಾಣದಲ್ಲಿ ನಡೆಯುವ ೪೬ನೆಯ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ-೨೦೨೫ ನಿಮಿತ್ಯ ಹಮ್ಮಿಕೊಂಡಿರುವ ಯೋಗ ಶಿಬಿರದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

ಯೋಗಾಭ್ಯಾಸವು ಸಮ್ಯತೆಯನ್ನು ಹೆಚ್ಚಿಸಲು, ಏಕಾಗ್ರತೆಯನ್ನು ಸುಧಾರಿಸಲು ಮತ್ತು ಶಾಂತತೆಯ ಭಾವನೆಯನ್ನು ಉತ್ತೇಜಿಸಲು ವಿನ್ಯಾಸಗೊಳಿಸಲಾದ ವಿವಿಧ ಆಸನಗಳು ಮತ್ತು ಭಂಗಿಗಳನ್ನು ಸಂಯೋಜಿಸುತ್ತದೆ.
ಯೋಗವು ಧ್ಯಾನ ತಂತ್ರಗಳ ಮೂಲಕ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಯೋಗ ಮಾಡುವುದರಿಂದ ಆರೋಗ್ಯದ ಸಮಸ್ಯೆಗಳನ್ನು ನಿಯಂತ್ರಿಸುವುದು, ತೂಕ ನಿರ್ವಹಣೆ ಮತ್ತು ಒತ್ತಡ ಹಾಗೂ ಆತಂಕವನ್ನು ಪರಿಹರಿಸುತ್ತದೆ.

ಆರೋಗ್ಯಕರ ಜೀವನಶೈಲಿಯನ್ನು ನಡೆಸಲು ಬಯಸುವವರಿಗೆ ಯೋಗವು ದೇಹ, ಮನಸ್ಸು ಮತ್ತು ಆತ್ಮದ ನಡುವೆ ಆಳವಾದ ಸಂಪರ್ಕವನ್ನು ಬೆಳೆಸುವ ಒಂದು ಆದರ್ಶ ಪರಿಹಾರವನ್ನು ಒದಗಿಸುತ್ತದೆ.
ಯೋಗ ಮಾಡುವುದರಿಂದ ನಾವು ರೋಗ ಮುಕ್ತರಾಗಬಹುದು. ಯೋಗ ಗುರುಗಳಾದ ಪೂಜ್ಯ ಮಹಾಲಿಂಗ ಸ್ವಾಮಿಗಳಿಂದ ನಡೆಯಲಿರುವ ಈ ಯೋಗ ಶಿಬಿರದಲ್ಲಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸ್ವಾಮೀಜಿ ಹೇಳಿದರು.
ಪೂಜ್ಯ ಬಸವದೇವರು, ಅನುಭವ ಮಂಟಪ, ಬಸವಕಲ್ಯಾಣ ಸಮ್ಮುಖ ವಹಿಸಿದ್ದರು.ಶಿಬಿರದ ಉದ್ಘಾಟನೆಯನ್ನು ಶರಣ ವಿಜಯಕುಮಾರ ಮಂಠಾಳೆ ನೆರವೇರಿಸಿದರು.
ಬಸವಗುರು ಪೂಜೆ ಡಾ.ಜಿ.ಎಸ್. ಭೂರಾಳೆ ಮಾಡಿದರು. ಮುಖ್ಯ ಅತಿಥಿಗಳಾಗಿ, ಸೂರ್ಯಕಾಂತ ಪಾಟೀಲ, ರಾಜಕುಮಾರ ಬಿರಾದಾರ, ಸಂಜುಕುಮಾರ ನಡುಕರ್, ಸೂರ್ಯಕಾಂತ ಗಾಯಕವಾಡ, ಅಮರೇಶ್ವರ ಸ್ವಾಮಿ ಆಗಮಿಸಿದರು. ವೀರಭದ್ರಪ್ಪ ಸ್ವಾಗತಿಸಿದರು. ವಿಜಯಕುಮಾರ ಪಟ್ನೆ ಅವರಿಂದ ಶರಣು ಸಮರ್ಪಣೆ ನಡೆಯಿತು. ಶಿವಕುಮಾರ ಓಕುಳಿ ನಿರೂಪಿಸಿದರು.
