ಬಸವಕಲ್ಯಾಣದಲ್ಲಿ ಜುಲೈ 27 ಶರಣತತ್ವ ಶಿಬಿರ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ

ನಗರದ ಅನುಭವ ಮಂಟಪ ಪರಿಸರದಲ್ಲಿ ಜುಲೈ 27, 2025ರ ರವಿವಾರ ಬೆಳಿಗ್ಗೆ 9:00ರಿಂದ 5:30ರವರೆಗೆ ಒಂದು ದಿನದ ಶರಣ ತತ್ವ ಶಿಬಿರ ನಡೆಯಲಿದೆ.

ಶರಣ ಚಳುವಳಿ ಮತ್ತು ಲಿಂಗಾಯತ ಧರ್ಮದ ಉದಯ ಮತ್ತು ಪ್ರಸ್ತುತ ಸ್ಥಿತಿಗತಿ ಕುರಿತಾದ ಚಿಂತನೆ ನಡೆಯಲಿದೆ. ಶರಣ ಸಂಸ್ಕೃತಿ ವಿಚಾರ ವೇದಿಕೆ‌ ಕಾರ್ಯಕ್ರಮ ಆಯೋಜಿಸಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ವಿಜಯಪುರದ ಶರಣತತ್ವ ಚಿಂತಕರಾದ ಡಾ. ಜೆ. ಎಸ್. ಪಾಟೀಲ ಪಾಠ ಮಾಡಲಿದ್ದಾರೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಶಿಬಿರ ಸಂಯೋಜಕರಾದ ಶಿವಕುಮಾರ ಶೆಟಗಾರ, ರವೀಂದ್ರ ಕೋಳಕೂರ, ಆಕಾಶ ಖಂಡಾಳೆ ವಿನಂತಿಸಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JREWkVu0WPE5tE1y0tzNQ1

Share This Article
Leave a comment

Leave a Reply

Your email address will not be published. Required fields are marked *