ಹುಬ್ಬಳ್ಳಿ
ವಚನ ಶ್ರಾವಣದಂಗವಾಗಿ ರವಿವಾರ ಮುಂಜಾನೆ ಗಂಟಿಕೇರಿ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಮಕ್ಕಳಿಗಾಗಿ ಇಷ್ಟಲಿಂಗ ಪೂಜೆ ಮತ್ತು ಸಹಜ ಶಿವಯೋಗ ಕಾರ್ಯಕ್ರಮ ನಡೆಯಿತು.

ಶಿವಯೋಗ ಪ್ರಾತ್ಯಕ್ಷಿಕೆಯನ್ನು ಶ್ರೀಗುರು ಬಸವ ಮಂಟಪದ ಶರಣೆ ನಿರ್ಮಲಾತಾಯಿ ಬುರ್ಲಬಡ್ಡಿ, ಶಾರದಾತಾಯಿ ಪಾಟೀಲ ಹಾಗೂ ಶರಣೆ ಅನಿತಾತಾಯಿ ಕುಬಸದ ನಡೆಸಿಕೊಟ್ಟರು.

ಈ ಸಂಧರ್ಭದಲ್ಲಿ ಬಸವೇಶ್ವರ ದೇವಸ್ಥಾನ ಸೇವಾ ಸಮಿತಿ, ಅಕ್ಕಮಹಾದೇವಿ ಮಹಿಳಾ ಮಂಡಳ, ಬಸವೇಶ್ವರ ಭಜನಾ ಮಂಡಳ, ಬಸವೇಶ್ವರ ಯುವಕ ಮಂಡಳದ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಂತರ ಶರಣ ಹಿರೇಮಠ ಶರಣ ದಂಪತಿ ಮಕ್ಕಳಿಗೆ ಪ್ರಸಾದ ದಾಸೋಹ ಸೇವೆ ಮಾಡಿದರು.