ಬೆಂಗಳೂರು
ಸಮಸಮಾನತೆಯ ಆಶಯದ ಬಸವತತ್ವದಂತೆ ಕಲ್ಯಾಣ ಮಹೋತ್ಸವಕ್ಕೆ ಕೇರಳದ ನಾಯನಾರ್ ಮತ್ತು ಕರ್ನಾಟಕದ ವಲ್ಲೆಪೂರೆ ಲಿಂಗಾಯತ ಕುಟುಂಬಗಳು ಸಾಕ್ಷಿಯಾದವು.
ಬೀದರಿನ ಬೆಳಕುಣಿ ಗ್ರಾಮದ ಚೌದರಿ ಸುರೇಖಾ – ಶಿವಶರಣಪ್ಪ ವಲ್ಲೆಪೂರೆ ಶರಣ ದಂಪತಿಯ ಮಗನಾದ “ಡಾ. ಆಕಾಶ” ಜೊತೆಗೆ “ವಿಷ್ಣುಪ್ರಿಯಾ” (ವಚನಪ್ರಿಯಾ) ಅವರ ಕಲ್ಯಾಣವು ಬೆಂಗಳೂರಿನ ಬಯ್ಯಪ್ಪನಹಳ್ಳಿ ಜಿ. ಕೆ. ಸೆಲೆಸ್ಟಾ ಕಲ್ಯಾಣ ಮಂಟಪದಲ್ಲಿ ಡಿಸೆಂಬರ್ 25ರಂದು ನಡೆಯಿತು.






