ಶರಣ ಸಮಾಜದ ಸಾಮೂಹಿಕ ಒಡೆತನದ ಬಸವ ಮೀಡಿಯಾದ ಅಳಿವು, ಉಳಿವು ಈಗ ನಿಮ್ಮ ಕೈಯಲ್ಲಿ.
ಶರಣ ಬಂಧುಗಳೇ,
ಶರಣು ಶರಣಾರ್ಥಿಗಳು,
ಬಸವ ತತ್ವಕ್ಕೆ ಮುಡಿಪಾಗಿರುವ ಬಸವ ಮೀಡಿಯಾ ಬರುವ ಆಗಸ್ಟ್ 9ಕ್ಕೆ ಒಂದು ವರ್ಷ ಪೂರೈಸಲಿದೆ.
ಸಮಾಜದ ಗಣ್ಯರು, ನಾಡಿನ ಎಲ್ಲಾ ಬಸವ ಸಂಘಟನೆಗಳ ಕಾರ್ಯಕರ್ತರು ಸೇರಿದಂತೆ ದಿನನಿತ್ಯ ಸಾವಿರಾರು ಓದುಗರಿರುವ ಪ್ರಗತಿಪರ ಪತ್ರಿಕೆಯಾಗಿ ಬಸವ ಮೀಡಿಯಾ ಬೆಳೆದಿದೆ.
ಒಂದು ಸಣ್ಣ ತಂಡ ಅಲ್ಪ ಸಮಯದಲ್ಲಿಯೇ ಒಂದು ಪ್ರಭಾವಶಾಲಿ ಪತ್ರಿಕೆಯನ್ನು ಹುಟ್ಟುಹಾಕಿರುವುದು ನಮ್ಮ ಸಮಾಜದಲ್ಲಿರುವ ಬಸವಣ್ಣನವರ ಪ್ರಭಾವಕ್ಕೆ ಸಾಕ್ಷಿ. 250ಕ್ಕೂ ಹೆಚ್ಚು ಲೇಖಕರು ಯಾವುದೇ ನಿರೀಕ್ಷೆಯಿಲ್ಲದೆ ಬಸವ ಸೇವೆಯೆಂದೇ ಪರಿಗಣಿಸಿ ಬಸವ ಮೀಡಿಯಾಕ್ಕೆ ಬರೆಯುತ್ತಿದ್ದಾರೆ.
ಯಾರೇ ಮಾಲೀಕರಿಲ್ಲ, ಹೂಡಿಕೆದಾರರಿಲ್ಲ
ಇದೆ ಭಾವನೆಯಿಂದ ಯಾರದೇ ವೈಯಕ್ತಿಕ ಮಾಲೀಕತ್ವಕ್ಕೂ ಅವಕಾಶ ನೀಡದೆ ಬಸವ ಮೀಡಿಯಾವನ್ನು ಸಾಮೂಹಿಕ ಒಡೆತನದ ಮಾಧ್ಯಮವಾಗಿ ನಾವು ರೂಪಿಸಿದ್ದೇವೆ. ಆರು ವರ್ಷ ಅವಧಿಗೆ ಮಾತ್ರ ನೇಮಕವಾಗುವ ಸಮಾಜದ ಪ್ರತಿನಿಧಿಗಳು ಬಸವ ಮೀಡಿಯಾವನ್ನು ನಿರ್ವಹಿಸುತ್ತಾರೆ. ನಾವು ಯಾವ ಸಂಘಟನೆಯ ಭಾಗವೂ ಅಲ್ಲ. ಬಸವ ಮೀಡಿಯಾ ಜನ ಸಾಮಾನ್ಯರ ಸ್ವತಂತ್ರ ಪತ್ರಿಕೆ..
ಜೊತೆಗೆ ನಮಗೆ ಯಾವ ಹೂಡಿಕೆದಾರರೂ ಇಲ್ಲ.
ಬಸವ ಮೀಡಿಯಾ ಜನ ಸಾಮಾನ್ಯರ ಸ್ವತಂತ್ರ ಪತ್ರಿಕೆ.
ಇಲ್ಲಿಯವರೆಗೆ ಬಸವ ಮೀಡಿಯಾ ಟ್ರಸ್ಟಿಗಳ ಸ್ವಂತ ಹಣದಿಂದ ನಡೆದುಕೊಂಡು ಬಂದಿದೆ. ಮುಂದಿನ ದಿನಗಳಲ್ಲಿ ನಮ್ಮ ಉಳಿವು, ಬೆಳವಣಿಗೆ ನಿಮ್ಮ ನೆರವಿನಿಂದ ಮಾತ್ರ ಸಾಧ್ಯ.
ಮುಂದಿನ ಎರಡು ವರ್ಷಕ್ಕೆ 35 ಲಕ್ಷ
ಬಸವ ಮೀಡಿಯಾಗೆ ಮುಖ್ಯವಾಗಿ ವೆಬ್ಸೈಟ್ ಮತ್ತು ಸಿಬ್ಬಂದಿ ಸಂಬಂಧಿಸಿದ ಖರ್ಚುಗಳಿರುತ್ತವೆ.
ವೆಬ್ಸೈಟ್ ವೆಚ್ಚ
ವೆಬ್ಸೈಟಿನ ಮುಂದಿನ ಬೆಳವಣಿಗೆ, ನಿರ್ವಹಣೆ, ಭದ್ರತೆ, ಸರ್ವರ್ ಮತ್ತು ಸಾಫ್ಟ್ವೇರ್ ಗೆ ಸಂಬಂಧಿಸಿದಂತೆ ಒಂದು ವರ್ಷಕ್ಕೆ ಗರಿಷ್ಟ ಐದು ಲಕ್ಷ ಖರ್ಚಾಗುವ ಅಂದಾಜಿದೆ.
ಸಿಬ್ಬಂದಿಯ ವೆಚ್ಚ
ಬಸವ ಮೀಡಿಯಾ ಸದೃಢವಾಗಿ ಬೆಳೆಯಲು ಮೂವರು ಪತ್ರಕರ್ತರು ಹಾಗೂ ಒಬ್ಬರು ವಿನ್ಯಾಸಕಾರರ ಅಗತ್ಯವಿದೆ. ಇವರ ಸಂಬಳ ಮತ್ತು ಸುದ್ದಿ ಸಂಗ್ರಹಣೆಗೆ ಸಂಬಂಧಿಸಿದ ಕೆಲವು ಇತರ ಕೆಲವು ಖರ್ಚು (ವಿಶೇಷ ವರದಿ, ಪ್ರಯಾಣ, ತರಭೇತಿ, ಇತ್ಯಾದಿ) ಸೇರಿ ವರ್ಷಕ್ಕೆ 12 ಲಕ್ಷ ಖರ್ಚಾಗುವ ಅಂದಾಜಿದೆ.
ನಮಗೆ ವರ್ಷಕ್ಕೆ 17 ಲಕ್ಷ ಅಥವಾ ಎರಡು ವರ್ಷಗಳಿಗೆ 34 ಲಕ್ಷ, ಜೊತೆಗೆ ಒಂದು ಲಕ್ಷವನ್ನು ಹೆಚ್ಚುವರಿಯಾಗಿ ಸಂಗ್ರಹಿಸುವ ಗುರಿಯನ್ನು ಇಟ್ಟುಕೊಂಡಿದ್ದೇವೆ.
ನಿಮ್ಮ ದಾಸೋಹ
ಬಸವ ಮೀಡಿಯಾದ ವೆಚ್ಚಗಳನ್ನು ನಿಭಾಯಿಸಲು ಆರು ರೀತಿಗಳಲ್ಲಿ ದಾಸೋಹ ಸಂಗ್ರಹಿಸಲು ಪ್ರಯತ್ನಿಸುತ್ತಿದ್ದೇವೆ.
ಬಸವ ಮೀಡಿಯಾ ಬಳಗ
ಪೋಷಕರು
ಮಹಾ ಪೋಷಕರು
ವಾರದ ದಾಸೋಹ
ಮಾಸಿಕ ದಾಸೋಹ
ಜಾಹಿರಾತು
1) ಬಸವ ಮೀಡಿಯಾ ಬಳಗ
ಕನಿಷ್ಠ 1,000 ರೂಪಾಯಿ
ಗರಿಷ್ಟ ಮಿತಿಯಿಲ್ಲ
ಹೆಸರು ಮತ್ತು ಊರನ್ನು ಪ್ರಕಟಿಸುತ್ತೇವೆ.
2) ಬಸವ ಮೀಡಿಯಾ ಪೋಷಕರು
ವರ್ಷಕ್ಕೆ 5,000 ರೂಪಾಯಿ
ಹೆಸರು, ಊರು, ಫೋಟೋ ಪ್ರಕಟಿಸುತ್ತೇವೆ.
3) ಬಸವ ಮೀಡಿಯಾ ಮಹಾ ಪೋಷಕರು
ವರ್ಷಕ್ಕೆ 10,000 ರೂಪಾಯಿ
ಹೆಸರು, ಊರು, ಫೋಟೋ ಪ್ರಕಟಿಸುತ್ತೇವೆ.
4) ವಾರದ ದಾಸೋಹ
ವಾರ ಪೂರ್ತಿ ನಿಮ್ಮ ದಾಸೋಹ ಪ್ರಮುಖವಾಗಿ ಪ್ರಕಟಿಸುತ್ತೇವೆ.
ಹೆಸರು, ಊರು, ಫೋಟೋ, ಸಮರ್ಪಣೆ
ವಾರಕ್ಕೆ 25,000 ರೂಪಾಯಿ.
5) ಮಾಸಿಕ ದಾಸೋಹ
ತಿಂಗಳು ಪೂರ್ತಿ ನಿಮ್ಮ ದಾಸೋಹ ಪ್ರಮುಖವಾಗಿ ಪ್ರಕಟಿಸುತ್ತೇವೆ.
ಹೆಸರು, ಊರು, ಫೋಟೋ, ಸಮರ್ಪಣೆ
ನಿಮ್ಮ ಪರಿಚಯದ ವಿಶೇಷ ಪುಟ
ತಿಂಗಳಿಗೆ ಒಂದು ಲಕ್ಷ ರೂಪಾಯಿ.
6) ಎರಡು ಆಕರ್ಷಕ ಜಾಹಿರಾತುಗಳು
ಉದ್ಯಮಿಗಳು ಇದನ್ನು ಬಳಸಿಕೊಳ್ಳಬಹುದು.
ದಾಸೋಹಿಗಳಲ್ಲಿ ವಿನಂತಿ
ಸಾಧ್ಯವಾದರೆ ಪೋಷಕ, ಮಹಾಪೋಷಕರಾಗಿ ಬಸವ ಮೀಡಿಯಾಗೆ ದಾಸೋಹ ನೀಡಿ. ನಮಗೆ ಪ್ರತಿ ತಿಂಗಳು ಮರುಕಳಿಸುವ ಖರ್ಚುಗಳಿರುತ್ತವೆ. ವರ್ಷಕ್ಕೆ ಒಮ್ಮೆ ನೆರವು ನೀಡುವ ಬಳಗವಿದ್ದರೆ ಹಣಕಾಸಿನ ಒತ್ತಡ ಕಡಿಮೆಯಾಗುತ್ತದೆ.
ಪಾರದರ್ಶಕತೆ ಮತ್ತು ಹೊಣೆಗಾರಿಕೆ
ನಮಗೆ ದಾಸೋಹ ರೂಪದಲ್ಲಿ ಬರುವ ಹಣವನ್ನು ಸಂಪೂರ್ಣ ಪಾರದರ್ಶಕತೆ ಮತ್ತು ಹೊಣೆಗಾರಿಕೆಯಿಂದ ನಿಭಾಯಿಸಲು ಬದ್ಧರಾಗಿದ್ದೇವೆ.
1) ಅಧಿಕೃತ ಬ್ಯಾಂಕ್ ಖಾತೆಗೆ ಮಾತ್ರ ಹಣ ವರ್ಗಾಯಿಸಲು ವಿನಂತಿಸಿಕೊಳ್ಳುತ್ತಿದ್ದೇವೆ.
2) 24 ಗಂಟೆ ಒಳಗೆ ರಶೀತಿ ಕೊಡುತ್ತೇವೆ ಮತ್ತು ಸಾರ್ವಜನಿಕವಾಗಿ ವೆಬ್ಸೈಟಿನಲ್ಲಿ ದಾಸೋಹದ ವಿವರ ದಾಖಲು ಮಾಡುತ್ತೇವೆ.
3) ಪ್ರತಿ ಮೂರು ತಿಂಗಳು ನಮಗೆ ಬಂದಿರುವ ದಾಸೋಹ ಮತ್ತು ಆಗಿರುವ ವೆಚ್ಚವನ್ನು ಪ್ರಕಟಿಸುತ್ತೇವೆ.
4) ವರ್ಷಕ್ಕೊಮ್ಮೆ ಲೆಕ್ಕ ಪರಿಶೋಧಕರ ವರದಿಯನ್ನು ಸಾರ್ವಜನಿಕವಾಗಿ ವೆಬ್ಸೈಟಿನಲ್ಲಿ ಪ್ರಕಟಿಸುತ್ತೇವೆ.
5) ಟ್ರಸ್ಟಿಗಳ ನಿಯಂತ್ರಣದಲ್ಲಿ ನಡೆಯುವ ಹಣಕಾಸಿನ ವ್ಯವಹಾರವನ್ನು ಸಲಹಾ ಮಂಡಳಿಯ 10 ಸದಸ್ಯರು ಯಾವಾಗ ಬೇಕಾದರೂ ಪರಿಶೀಲಿಸುವ ಅವಕಾಶವಿರುತ್ತದೆ.
6) ಬಹಳ ಮುಖ್ಯವಾಗಿ ನಿಮ್ಮ ದಾಸೋಹವನ್ನು ನಾವು ಮೇಲೆ ಕೊಟ್ಟಿರುವ ಕಾರಣಗಳಿಗೆ ಮಾತ್ರ ಬಳಸಿಕೊಳ್ಳುತ್ತೇವೆ.
ಮುಂದಿನ ದಿನಗಳಲ್ಲಿ ಬಸವ ಮೀಡಿಯಾ ಬೇರೆ ಬೇರೆ ಮಾಧ್ಯಮ ಪ್ರಕಾರಗಳನ್ನು, ತಂತ್ರಜ್ಞಾನಗಳನ್ನು ಬಳಸಿಕೊಂಡು ಬಸವ ತತ್ವವನ್ನು ಜನರಿಗೆ ಮುಟ್ಟಿಸುತ್ತದೆ. ಈ ಪ್ರಯತ್ನಗಳಿಗೆ ಬೇಕಾದ ಹಣವನ್ನು ಪ್ರತ್ಯೇಕವಾಗಿ ಸಂಗ್ರಹಿಸುತ್ತೇವೆ.
ಬ್ಯಾಂಕ್ ವಿವರ:
State Bank of India
Branch
R K Layout, BSK II Stage, Bengaluru
Account name
Basava Media Trust
Account number
00000044131474781
IFSC code
SBIN0040584
UPI
basavamediatrust@sbi
(ದಾಸೋಹ ನೀಡಿದ ನಂತರ ನಿಮ್ಮ, ಹೆಸರು, ಊರು, ದಾಸೋಹದ ಮೊತ್ತ ಹಾಗು ಪ್ರಕಾರವನ್ನು +91 8217246878 ಗೆ ವಾಟ್ಸ್ ಆಪ್ ಮಾಡಿ.)
ಬಂಧುಗಳೇ, ಇಂದು ಲಿಂಗಾಯತ ಧರ್ಮ ಜನಾಂದೋಲನದ ರೂಪದಲ್ಲಿ ಬೆಳೆಯುತ್ತಿದೆ. ಯಾವುದೇ ಚಳುವಳಿ ಸಫಲವಾಗಬೇಕಾದರೆ ಮಾಧ್ಯಮಗಳು ಅವಶ್ಯ ಎನ್ನುವುದು ಇತಿಹಾಸದ ಪಾಠ. ಈ ನಿಟ್ಟಿನಲ್ಲಿ ಬಸವ ಮೀಡಿಯಾ ನಿರಂತರವಾಗಿ ಬಸವ ತತ್ವಕ್ಕೆ ದುಡಿಯಲು ಬಂದಿರುವ ಪತ್ರಿಕೆ.
ನಮ್ಮ ಅಳಿವು, ಉಳಿವು ನಿಮ್ಮ ಕೈಯಲ್ಲಿದೆ. ಬಸವ ಮೀಡಿಯಾ ಈಗ ನಿಮ್ಮ ಜವಾಬ್ದಾರಿ.
ಧನ್ಯವಾದ
ಬಸವ ಮೀಡಿಯಾ ಟ್ರಸ್ಟಿಗಳ ಪರವಾಗಿ

ಬಸವ ಮೀಡಿಯಾಗೆ ಶುಭವಾಗಲಿ. ನಮ್ಮೆಲ್ಲರ ಹಾರೈಕೆಯಿದೆ
ಬಸವ ಮಿಡಿಯಾ, ಇದರ ಒಂದು ವರ್ಷ ಸಂಬ್ರಮ ಕೇಳಿ ಸಂತೋಷವಾಯಿತು.
ಟ್ರಸ್ಟ್ ಪಾರದರ್ಶಕತೆ ವಿಷಯವನ್ನು ಪ್ರಕಟಿಸಿದ್ದು ನೋಡಿ ಸಂತೋಷವಾಯಿತು ಹೀಗೆ ಉತ್ತರೋತ್ತರ ಬೆಳಗಲಿ ಎಂದು ಬಸವಾದಿ ಶರಣರಲ್ಲಿ ಪ್ರಾರ್ಥಿಸುವೆ.🙏🙏