ಶರಣ ಸಮಾಜದ ಸಾಮೂಹಿಕ ಆಸ್ತಿಯಾಗಿ ‘ಬಸವ ಮೀಡಿಯಾ’ ನೋಂದಣಿ

ಎಂ. ಎ. ಅರುಣ್
ಎಂ. ಎ. ಅರುಣ್

ಬಸವ ಮೀಡಿಯಾ ಯಾರದೇ ಖಾಸಗಿ ಸ್ವತ್ತಲ್ಲ. ಆರು ವರ್ಷ ಅವಧಿಯ ಟ್ರಸ್ಟ್ ಮತ್ತು ಸಲಹಾ ಮಂಡಳಿ ಮೂಲಕ ನಿರ್ವಹಣೆ.

ಬೆಂಗಳೂರು

ಕಳೆದ ಕೆಲವು ತಿಂಗಳಿಂದ ಬಸವ ಮೀಡಿಯಾದ ಬಗ್ಗೆ ಬಹಳ ಪ್ರಶ್ನೆಗಳು ಬಂದಿವೆ. ಈ ಪ್ರಶ್ನೆಗಳಿಗೆಲ್ಲಾ ಇಂದು ದಾಖಲೆ ಸಹಿತ ಸ್ಪಷ್ಟನೆ ನೀಡುತ್ತಿದ್ದೇವೆ. ಈ ಸಂವಾದ ಪವಿತ್ರವಾದ ಬಸವ ಜಯಂತಿಯ ಸಂದರ್ಭದಲ್ಲಿ ನಡೆಯುತ್ತಿರುವುದು ಹರ್ಷದ ವಿಚಾರ.

ಬಸವ ಮೀಡಿಯಾ ಯಾರದು, ಯಾರ ಹೆಸರಿನಲ್ಲಿದೆ – ಇದು ಸಾಮಾನ್ಯವಾಗಿ ನಮ್ಮ ಬಹಳ ಓದುಗರು ಕೇಳುತ್ತಿರುವ ಪ್ರಶ್ನೆ.

ಇದಕ್ಕೆ ಉತ್ತರ: ಬಸವ ಮೀಡಿಯಾ ಯಾರೊಬ್ಬರ ಖಾಸಗಿ, ವೈಯಕ್ತಿಕ ಸ್ವತ್ತಲ್ಲ. ಇದು ಇಡೀ ಶರಣ ಸಮಾಜದ ಆಸ್ತಿ. ಸಮಾಜದ ಒಟ್ಟಾರೆ ಒಡೆತನದಲ್ಲಿ, ನಿರ್ದೇಶನದಲ್ಲಿ ನಡೆಯಲಿರುವ ಮಾಧ್ಯಮ.

ಈ ವ್ಯವಸ್ಥೆಯನ್ನು ರೂಪಿಸಲು ಎರಡು ಮಹತ್ವದ ಬೆಳವಣಿಗೆಗಳು ನಡೆದಿವೆ.

ಏಪ್ರಿಲ್ 8ರಂದು ಐದು ಸದಸ್ಯರಿರುವ ಬಸವ ಮೀಡಿಯಾ ಟ್ರಸ್ಟ್ ಬೆಂಗಳೂರಿನಲ್ಲಿ ನೋಂದಣಿಯಾಗಿದೆ.

ಇದರ ಜತೆಗೆ 10 ಜನರಿರುವ ಸಲಹಾ ಮಂಡಳಿಯೂ ಅಸ್ತಿತ್ವಕ್ಕೆ ಬಂದಿದೆ. ಏಪ್ರಿಲ್ 13 ಬಸವ ಮೀಡಿಯಾದ ಟ್ರಸ್ಟಿಗಳ ಮತ್ತು ಸಲಹಾ ಮಂಡಳಿಯ ಮೊದಲ ಸಭೆ ನಡೆಯಿತು.

ಈ ಹದಿನೈದು ಜನ ಸಮಾಜದ ಪ್ರತಿನಿಧಿಗಳಾಗಿ ಬಸವ ಮೀಡಿಯಾದ ನಿರ್ದೇಶಿಸುವ, ನಿಯಂತ್ರಿಸುವ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.

ಈ ಹದಿನೈದು ಜನ ಸಮಾಜದ ಪ್ರತಿನಿಧಿಗಳಾಗಿ ಬಸವ ಮೀಡಿಯಾವನ್ನು ನಿರ್ದೇಶಿಸುವ, ನಿಯಂತ್ರಿಸುವ
ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.

ಇಲ್ಲಿ ಗಮನಿಸಬೇಕಾದ ಬಹಳ ಮುಖ್ಯವಾದ ವಿಷಯ: ಟ್ರಸ್ಟಿನ ಮತ್ತು ಸಲಹಾ ಮಂಡಳಿಯ ಸದಸ್ಯರ ಅವಧಿ ಆರು ವರ್ಷ ಮಾತ್ರ. ಅವಧಿ ಮುಗಿದ ನಂತರ ತಮ್ಮ ಪಾತ್ರದಿಂದ ನಿರ್ಗಮಿಸುವುದು ಕಡ್ಡಾಯ.

ಪ್ರಸಿದ್ಧ ಶರಣ ಸಾಹಿತಿ ಟಿ ಆರ್ ಚಂದ್ರಶೇಖರ್ ಬಸವ ಮೀಡಿಯಾದ ಮೊದಲನೇ ಛೇರ್ಮನ್. ಅವರ ಛೇರ್ಮನ್ ಅವಧಿಯೂ ಎರಡು ವರ್ಷ ಮಾತ್ರ. ನಂತರ ಎರಡು ವರ್ಷಕ್ಕೆ ಈ ಸ್ಥಾನಕ್ಕೆ ಮತ್ತೊಬ್ಬರು ಸರದಿಯ ಪ್ರಕಾರ ಬರುತ್ತಾರೆ.

ಇದರಿಂದ ನಾವು ಹಲವಾರು ಟ್ರಸ್ಟುಗಳಲ್ಲಿ ನೋಡುವಂತೆ ಯಾವುದೇ ಒಬ್ಬ ವ್ಯಕ್ತಿಯ, ಕುಟುಂಬದ ಪ್ರಾಬಲ್ಯ ಬೆಳೆಯಲು ಸಾಧ್ಯವಾಗುವುದಿಲ್ಲ ಎನ್ನುವುದು ನಮ್ಮ ಆಶಯ. ಜೊತೆಗೆ ನಿರಂತರವಾಗಿ ಹೊಸ ರಕ್ತ, ಆಲೋಚನೆಗಳು ಒಳ ಬರುವುದರಿಂದ ಬಸವ ಮೀಡಿಯಾ ಎಂದೂ ಉತ್ಸಾಹ ಕಳೆದುಕೊಳ್ಳದೆ ಪರಿಣಾಮಕಾರಿಯಾಗಿ ನಡೆಯುವುದು ಎನ್ನುವುದೂ ನಮ್ಮ ಆಶಯ.

ಯಾವುದೇ ಒಬ್ಬ ವ್ಯಕ್ತಿಯ, ಕುಟುಂಬದ ಪ್ರಾಬಲ್ಯ ಬಸವ ಮೀಡಿಯಾದಲ್ಲಿ ಬೆಳೆಯಬಾರದು ಎನ್ನುವುದು ನಮ್ಮ ಆಶಯ.

ನಮ್ಮನು ಕೇಳುತ್ತಿರುವ ಇತರ ಪ್ರಶ್ನೆಗಳಿಗೆ ಉತ್ತರ:

1) ಬಸವ ಮೀಡಿಯಾದ ಟ್ರಸ್ಟಿಗಳು ಯಾರು?

ಟಿ.ಆರ್. ಚಂದ್ರಶೇಖರ್
(ಸಾಹಿತಿ, ಚಿಂತಕ, ನಿವೃತ ಪ್ರಾಧ್ಯಾಪಕ. ಬಸವ ಮೀಡಿಯಾ ಟ್ರಸ್ಟಿನ ಮೊದಲನೇ ಛೇರ್ಮನ್.)

ಎಚ್. ಎಂ. ಸೋಮಶೇಖರಪ್ಪ
(ಶಿಕ್ಷಣ ತಜ್ಞ, ನಿವೃತ ಪ್ರಾಧ್ಯಾಪಕ)

ಎಂ. ಎ. ಅರುಣ್
(ಪತ್ರಕರ್ತ)

ಕೃಪಾ ಶಂಕರ
(ನಿವೃತ ಪ್ರಾಧ್ಯಾಪಕ, ಉದ್ಯಮಿ, ಸಾಮಾಜಿಕ ಕಾರ್ಯಕರ್ತ)

ಶಾಂತಕುಮಾರ್ ಹರ್ಲಾಪುರ
(ಉದ್ಯಮಿ, ಸಾಮಾಜಿಕ ಕಾರ್ಯಕರ್ತ)

2) ಬಸವ ಮೀಡಿಯಾದ ಸಲಹಾ ಮಂಡಳಿಯ ಸದಸ್ಯರು ಯಾರು?

ಮೀನಾಕ್ಷಿ ಬಾಳಿ, ಆಶಾದೇವಿ, ಅಶೋಕ ಬರಗುಂಡಿ, ಶಶಿಧರ್ ತೋಡ್ಕರ್, ಜೆ.ಎಸ್. ಪಾಟೀಲ, ರಾಜಶೇಖರ ನಾರನಾಳ, ಕಿರಣ್ ಬೆಲ್ಲದ, ಬಸವರಾಜ ಹಂಡಿ, ಪ್ರಕಾಶ ಉಳ್ಳೇಗಡ್ಡಿ, ವಿಜಯಕುಮಾರ್ ಬೋರಟ್ಟಿ.

ಬಸವ ಮೀಡಿಯಾ ಸಹ ಸಂಪಾದಕ ರವೀಂದ್ರ ಹೊನವಾಡ ಸಲಹಾ ಮಂಡಳಿಯ ಸಭೆಗಳಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ.

3) ಬಸವ ಮೀಡಿಯಾದ ಉದ್ಧೇಶವೇನು?

ಇಡೀ ವಿಶ್ವದಲ್ಲಿಯೇ ಬಹಳ ಉದಾತ್ತವಾದ, ವಿಶಿಷ್ಟವಾದ ಚಳುವಳಿ 12ನೇ ಶತಮಾನದ ಶರಣ ಚಳುವಳಿ. ಆದರೆ ಇಂದು ಶರಣ ಸಮಾಜದಲ್ಲಿ ನಮ್ಮ ಪರಂಪರೆಯ ಬಗ್ಗೆ ಸಾಕಷ್ಟು ಅರಿವು, ಜಾಗ್ರತಿ ಇಲ್ಲದಿರುವುದು ದುರಂತ. ನಾವೆಲ್ಲರೂ ಬಸವಾದಿ ಶರಣರ ತತ್ವ ವಿಚಾರಗಳನ್ನು ಜನರಿಗೆ ಮುಟ್ಟಿಸಲು ವಿಫಲರಾಗಿರುವುದು ಇದಕ್ಕೆ ಮುಖ್ಯ ಕಾರಣ. ಎಲ್ಲಾ ರೀತಿಯ ಮಾಧ್ಯಮಗಳನ್ನು, ತಂತ್ರಜ್ಞಾನವನ್ನು ಬಳಸಿಕೊಂಡು ಜನರಿಗೆ ಪರಿಣಾಮಕಾರಿಯಾಗಿ ಬಸವಾದಿ ಶರಣರ ತತ್ವ ಮುಟ್ಟಿಸುವುದು, ಸಮಾಜದಲ್ಲಿ ಬಸವಾದಿ ಶರಣರ ಮನಸ್ಥಿತಿಯನ್ನು ಬಿತ್ತುವುದು ನಮ್ಮ ಮೊದಲ ಉದ್ಧೇಶ.

ಇಂದು ಶರಣ ಸಮಾಜದಲ್ಲಿ ನಮ್ಮ ಪರಂಪರೆಯ ಬಗ್ಗೆ
ಸಾಕಷ್ಟು ಅರಿವು, ಜಾಗ್ರತಿ ಇಲ್ಲದಿರುವುದು ದುರಂತ.

ಶರಣ ಸಮಾಜದಲ್ಲಿ ಜಾಗೃತಿ ಮೂಡಿದಂತೆ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಗುವುದನ್ನು ತಪ್ಪಿಸಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ. ಈ ಮಹತ್ ಚಳುವಳಿಯ ಧ್ವನಿಯಾಗುವುದು ಬಸವ ಮೀಡಿಯಾದ ಮತ್ತೊಂದು ಮುಖ್ಯ ಉದ್ಧೇಶ.

ಎಲ್ಲಾ ರೀತಿಯ ಮಾಧ್ಯಮಗಳನ್ನು, ತಂತ್ರಜ್ಞಾನ ಬಳಸಿಕೊಂಡು ಜನರಿಗೆ ಬಸವಾದಿ ಶರಣರ ತತ್ವ ಮುಟ್ಟಿಸುವುದು ನಮ್ಮ ಉದ್ಧೇಶ.

4) ಬಸವ ಮೀಡಿಯಾದ ಮುಂದಿನ ಯೋಜನೆಗಳೇನು?

ಲಭ್ಯವಿರುವ ಎಲ್ಲಾ ರೀತಿಯ ಮಾಧ್ಯಮ, ತಂತ್ರಜ್ಞಾನ ಬಳಸಿಕೊಂಡು ಬಸವ ತತ್ವವನ್ನು ಜನರಿಗೆ ಮುಟ್ಟಿಸುವುದು ಬಸವ ಮೀಡಿಯಾದ ಉದ್ಧೇಶ.

ಈಗಾಗಲೇ ಎರಡು ವೇದಿಕೆಗಳು ಸಿದ್ದವಾಗಿ ಕಾರ್ಯ ನಿರ್ವಹಿಸುತ್ತಿವೆ (www.basavaradio.com, www.basavamedia.com)

ಮುಂದಿನ ದಿನಗಳಲ್ಲಿ ಜನರನ್ನು ಮುಟ್ಟಲು ಲಭ್ಯವಿರುವ ಎಲ್ಲಾ ಅವಕಾಶ, ಮಾಧ್ಯಮ, ವೇದಿಕೆಗಳನ್ನು, ತಂತ್ರಜ್ಞಾನ ಬಳಸಿಕೊಂಡು ಪ್ರತ್ಯೇಕ ವೇದಿಕೆಗಳನ್ನು, ತಂಡಗಳನ್ನು ನಿರ್ಮಿಸುತ್ತೇವೆ.

ಪತ್ರಿಕೆ, ಪುಸ್ತಕ, ಮಕ್ಕಳ ಪುಸ್ತಕ, ಅನಿಮೇಷನ್, ವಿಡಿಯೋ, ಆಡಿಯೋ, ಸಾಮಾಜಿಕ ಜಾಲತಾಣ, ಆಪ್, ಶಿಬಿರ, ಕಾರ್ಯಕ್ರಮ, ಸಂಗೀತ, ಚಿತ್ರಕಲೆ ಯಾವುದನ್ನೂ ಬಿಡದೇ ಪರಿಣಾಮಕಾರಿಯಾಗಿ ಬಳಸಿಕೊಳ್ಳುತೇವೆ.

ನಮ್ಮ ಸಮುದಾಯ ಬಹಳ ದೊಡ್ಡ ಸಮುದಾಯ. ಲಕ್ಷಾಂತರ ಜನರನ್ನು ಮುಟ್ಟಬೇಕಾದರೆ ನಮ್ಮ ವೇದಿಕೆಗಳೂ ಬೃಹತ್ ಪ್ರಮಾಣದಲ್ಲಿರಬೇಕಾಗುತ್ತದೆ.

ಲಕ್ಷಾಂತರ ಜನರನ್ನು ಮುಟ್ಟಬೇಕಾದರೆ ನಮ್ಮ ಮಾಧ್ಯಮಗಳೂ ಬೃಹತ್ ಪ್ರಮಾಣದಲ್ಲಿರಬೇಕಾಗುತ್ತದೆ.

5) ಬಸವ ಮೀಡಿಯಾ ನಡೆಸಲು ಹಣ ಎಲ್ಲಿಂದ ಬರುತ್ತಿದೆ?

ಸದ್ಯಕ್ಕೆ ಬಸವ ಮೀಡಿಯಾ ಟ್ರಸ್ಟಿಗಳ ಹಣದಿಂದ ನಡೆಯುತ್ತಿದೆ. ಟ್ರಸ್ಟಿಗಳಿಂದ ಆಚೆ ಯಾವುದೇ ಸಂಘಟನೆ ಅಥವಾ ವ್ಯಕ್ತಿಯಿಂದ ಒಂದು ರೂಪಾಯಿ ಕೂಡ ಪಡೆದಿಲ್ಲ.

6) ಮುಂದೆ ಬಸವ ಮೀಡಿಯಾ ಸಮಾಜದಿಂದ ಹಣ ಕೇಳಲಿದೆಯೇ? ಪಾರದರ್ಶಕತೆ, ಪ್ರಾಮಾಣಿಕತೆ ಹೇಗೆ ಕಾಯ್ದುಕೊಳ್ಳುತೀರಾ?

ಬಸವ ಮೀಡಿಯಾವನ್ನು ಒಂದು ವೃತ್ತಿಪರ ಮಾಧ್ಯಮ ಸಂಸ್ಥೆಯಾಗಿ ಬೆಳೆಸುವುದು ನಮ್ಮ ಉದ್ಧೇಶ. ಪೂರ್ಣಾವಧಿ ದುಡಿಯುವವರಿಗೆ ಜೀವನೋಪಾಯಕ್ಕೆ ಸಹಾಯ ಮಾಡಬೇಕಾಗುತ್ತದೆ. ತಂತ್ರಜ್ಞಾನಕ್ಕೆ ಸಂಬಂಧಿಸಿದ ಖರ್ಚುಗಳಿರುತ್ತವೆ, ಉದಾ ವೆಬ್ಸೈಟ್, ಆಪ್ ರಚಿಸಲು, ನಿರ್ವಹಿಸಲು.

ನಾವು ಮುದ್ರಣ ಮಾಧ್ಯಮವನ್ನು ಬಳಸಲು ನಿರ್ಧರಿಸಿದರೆ ಪತ್ರಿಕೆ, ಪುಸ್ತಕಗಳನ್ನು ಮುದ್ರಿಸಲು, ಹಂಚಲು ಖರ್ಚಾಗುತ್ತದೆ. ಮುಂದೆ ನಾವು ವಿಡಿಯೋಗಳನ್ನು ಮಾಡಲು ಸ್ಟುಡಿಯೋ, ಉಪಕರಣಗಳು ಬೇಕಾಗುತ್ತವೆ, ಸಾಮಾಜಿಕ ಜಾಲತಾಣಗಳಲ್ಲಿ ಬೆಳೆಯಲು, ಕಾರ್ಯಕ್ರಮಗಳನ್ನು ನಡೆಸಲು, ತರಬೇತಿ, ಸಂಶೋಧನೆ ಮುಂತಾದ ಖರ್ಚುಗಳು ಇರುತ್ತವೆ.

ನಮ್ಮದು ಲಾಭಕ್ಕೆ ನಡೆಯುವ ಸಂಸ್ಥೆಯಲ್ಲ. ಆರಂಭದ ದಿನಗಳಲ್ಲಿ ಶರಣ ಸಮುದಾಯವೇ ಬಸವ ಮೀಡಿಯಾದ ಕೈ ಹಿಡಿದು ನಡೆಸಬಹುದೆಂಬ ನಿರೀಕ್ಷೆಯಿದೆ.

ಬಸವ ಮೀಡಿಯಾ ಟ್ರಸ್ಟಿಗಳ ಹಣದಿಂದ ನಡೆಯುತ್ತಿದೆ. ಮುಂದಿನ ಬೆಳವಣಿಗೆಗೆ ಸಮಾಜದ ನೆರವು ಅವಶ್ಯವಿದೆ.

ಇನ್ನೊಂದು ತಿಂಗಳ ಒಳಗೆ ಬಸವ ಮಿಡಿಯಾವನ್ನು ವಿಸ್ತರಿಸಲು, ಮುಂದಿನ ಯೋಜನೆಗಳನ್ನು ಶುರು ಮಾಡಲು ಹಣದ, ಶ್ರಮದ ಸಹಾಯ ಕೋರಿ ನಿಮ್ಮ ಬಳಿ ಬರಲಿದ್ದೇವೆ.

ಅ) ಹಣ ಕೇಳುವ ಮೊದಲು ಯಾವ ಕಾರಣಕ್ಕಾಗಿ ಕೇಳುತ್ತಿದ್ದೇವೆ ಎಂದು ಸ್ಪಷ್ಟವಾಗಿ ತಿಳಿಸುತ್ತೇವೆ. ಆ ಹಣ ಅದೇ ಕಾರ್ಯಕ್ಕೆ ವಿನಿಯೋಗವಾಗುವಂತೆ ನೋಡಿಕೊಳ್ಳುವುದು ಟ್ರಸ್ಟಿನ ಜವಾಬ್ದಾರಿ.

ಆ) ಹಣ ಅಧಿಕೃತ ವ್ಯಕ್ತಿಗಳಿಂದ, ಅಧಿಕೃತ ಬ್ಯಾಂಕ್ ಖಾತೆ ಮೂಲಕ ಮಾತ್ರ ಸಂಗ್ರಹವಾಗುತ್ತದೆ.

ಇ) ಪ್ರತಿ ಮೂರು ತಿಂಗಳಿಗೆ ನಮ್ಮ ಸಂಪೂರ್ಣ ಲೆಕ್ಕವನ್ನು ಬಸವ ಮೀಡಿಯಾ ವೆಬ್ಸೈಟಿನಲ್ಲಿ ಪ್ರಕಟಿಸುತ್ತೇವೆ. (ಏಪ್ರಿಲ್ 7, ಜುಲೈ 7, ಅಕ್ಟೋಬರ್ 7, ಜನವರಿ 7). ಒಳಹರಿವು, ಹೊರ ಹರಿವು ಎರಡನ್ನೂ ಸ್ಪಷ್ಟವಾಗಿ ಗುರುತಿಸುತ್ತೇವೆ.

ಈ) ಸಲಹಾ ಮಂಡಳಿಗೆ ಲೆಕ್ಕ ಪರಿಶೀಲಿಸುವ, ಪ್ರಶ್ನಿಸುವ ಪಾತ್ರವಿರುತ್ತದೆ.

ಉ) ವರ್ಷಕೊಮ್ಮೆ ಆಡಿಟ್ ವರದಿ ಬಸವ ಮೀಡಿಯಾ ವೆಬ್ಸೈಟಿನಲ್ಲಿ ಹಾಕುತ್ತೇವೆ.

ಪ್ರತಿ ಮೂರು ತಿಂಗಳಿಗೆ ನಮ್ಮ ಸಂಪೂರ್ಣ ಲೆಕ್ಕವನ್ನು ಬಸವ ಮೀಡಿಯಾ ವೆಬ್ಸೈಟಿನಲ್ಲಿ ಪ್ರಕಟಿಸುತ್ತೇವೆ

7) ಬಸವ ಮೀಡಿಯಾ ಯಾವುದಾದರೂ ಸಂಘಟನೆ, ಮಠದ ಭಾಗವಾಗಿದೆಯೇ?

ಸಮಾನ ಮನಸ್ಕ ಸಂಘಟನೆಗಳ, ಸ್ವಾಮೀಜಿ, ಪ್ರಮುಖರೊಂದಿಗೆ ದುಡಿಯುತ್ತಿದ್ದೇವೆ. ಬಹಳಷ್ಟು ಸಂದರ್ಭಗಳಲ್ಲಿ ಅವರ ಮಾರ್ಗದರ್ಶನ, ನೆರವು ಕೇಳಿದ್ದೇವೆ. ಮುಂದೆಯೂ ಕೇಳುತ್ತೇವೆ.

ಆದರೆ ಬಸವ ಮೀಡಿಯಾ ಸ್ವತಂತ್ರ ಮಾಧ್ಯಮ. ಯಾವ ಸಂಘಟನೆ, ಯಾವ ಮಠದ ಭಾಗವೂ ಅಲ್ಲ. ಪ್ರಶ್ನಿಸುವುದೇ ನಮ್ಮ ಕಾಯಕ.

ಬಸವ ಮೀಡಿಯಾ ಸ್ವತಂತ್ರ ಮಾಧ್ಯಮ. ಯಾವ ಸಂಘಟನೆ, ಯಾವ ಮಠದ ಭಾಗವೂ ಅಲ್ಲ.

8) ಟ್ರಸ್ಟ್, ಸಲಹಾ ಮಂಡಳಿ ಮತ್ತು ಸಂಪಾದಕರ ಪಾತ್ರವೇನು?

ಟ್ರಸ್ಟ್, ಸಲಹಾ ಮಂಡಳಿಗೆ ಸಂಪಾದಕೀಯ ತಂಡದ ಕಾರ್ಯವನ್ನು ವಿಮರ್ಶಿಸುವ, ಸಲಹೆ ನೀಡುವ ಅವಕಾಶವಿರುತ್ತದೆ. ಸಂಪಾದಕರನ್ನು ನೇಮಕ ಮಾಡುವ, ತೆಗೆಯುವ ಅಧಿಕಾರವೂ ಇರುತ್ತದೆ.

ಸಂಪಾದಕರು ಐದು ವರ್ಷಕ್ಕೆ ಮಾತ್ರ ನೇಮಕವಾಗುತ್ತಾರೆ. ಅವಶ್ಯಬಿದ್ದರೆ ಅವರ ಸೇವೆಯನ್ನು ಮುಂದುವರೆಸಬಹುದು. ಬಸವ ಮೀಡಿಯಾ ಸಂಪಾದಕರು ಟ್ರಸ್ಟಿನ ex officio ಸದಸ್ಯರಾಗಿರುತ್ತಾರೆ.

ಟ್ರಸ್ಟಿಗೆ ಹಣ ಸಂಗ್ರಹಿಸುವ, ಅದು ಸರಿಯಾಗಿ ನಿರ್ವಹಣೆಯಾಗುತ್ತಿದೆ ಎಂದು ನೋಡಿಕೊಳ್ಳುವ ಜವಾಬ್ದಾರಿಯೂ ಇರುತ್ತದೆ. ಇನ್ನೂ ಹಲವಾರು ವಿಷಯಗಳಲ್ಲಿ ಸಂಪಾದಕೀಯ ತಂಡಕ್ಕೆ ಬೆಂಬಲವಾಗಿ ನಿಲ್ಲುವ ಅವಶ್ಯಕತೆಯೂ ಇರುತ್ತದೆ.

ಬಸವ ಮೀಡಿಯಾದ ದೈನಂದಿನ ಚಟುವಟಿಕೆಗಳ ಜವಾಬ್ದಾರಿ ಸಂಪಾದಕರ ನೇತೃತ್ವದ ತಂಡಕ್ಕೆ ಕೊಡಲಾಗಿದೆ. ಬಸವ ಮೀಡಿಯಾದಲ್ಲಿ ಪ್ರಕಟವಾಗುವ ಮಾಹಿತಿ ಸಂಪೂರ್ಣವಾಗಿ ಸಂಪಾದಕರ ವಿವೇಚನೆಗೆ ಬಿಟ್ಟಿದ್ದು. ಇದರಲ್ಲಿ ಟ್ರಸ್ಟ್ ಮತ್ತು ಸಲಹಾ ಮಂಡಳಿ ಸದಸ್ಯರ ಯಾವುದೇ ಪಾತ್ರವಿಲ್ಲ.

ಬಸವ ಮೀಡಿಯಾದ ದೈನಂದಿನ ಚಟುವಟಿಕೆಗಳ ಸಂಪೂರ್ಣ ಜವಾಬ್ದಾರಿ ಸಂಪಾದಕರ ನೇತೃತ್ವದ ತಂಡಕ್ಕೆ ಕೊಡಲಾಗಿದೆ.

ಪತ್ರಿಕಾ ಸ್ವಾತಂತ್ರ್ಯದ ದೃಷ್ಟಿಯಿಂದ ಇದು ಬಹಳ ಮುಖ್ಯವಾದ ಅಂಶ.

(ಟ್ರಸ್ಟಿನ ಸದಸ್ಯರು ಏಪ್ರಿಲ್ 8 ರಂದು ನಡೆಸಿದ ಮೊದಲ ಸಭೆಯಲ್ಲಿ ಐದು ವರ್ಷದ ಅವಧಿಗೆ ಎಂ ಎ ಅರುಣ್ ಅವರನ್ನು ಸಂಪಾದಕರಾಗಿ ನೇಮಕ ಮಾಡಿದ್ದಾರೆ.)

9) ಟ್ರಸ್ಟ್, ಸಲಹಾ ಮಂಡಳಿ ಸದಸ್ಯರು ಆರು ವರ್ಷದ ನಂತರ ಒಮ್ಮೆಲೇ ನಿವೃತ್ತರಾಗುತ್ತಾರೆಯೇ?

ಈ ರೀತಿಯಾಗಿ ಆರು ವರ್ಷದ ನಂತರ ಸಂಪೂರ್ಣವಾಗಿ ಹೊಸ ತಂಡ ಬಂದರೆ ಕೆಲಸದಲ್ಲಿ ಗೊಂದಲವಾಗುತ್ತದೆ. ಅದಕ್ಕೆ ಟ್ರಸ್ಟಿನಲ್ಲಿ ಮೊದಲ ಸದಸ್ಯರ ಆರು ವರ್ಷದ ಅವಧಿ ಮುಗಿದ ನಂತರ ವರ್ಷಕ್ಕೆ ಒಬ್ಬರು ನಿವೃತ್ತರಾಗುತ್ತಾರೆ, ಹೊಸಬರು ಸೇರಿಕೊಳ್ಳುತ್ತಾರೆ.

ಇದೇ ರೀತಿ ಸಲಹಾ ಮಂಡಳಿಯಲ್ಲಿ ವರ್ಷಕ್ಕೆ ಇಬ್ಬರು ನಿವೃತ್ತರಾಗಿ, ಇಬ್ಬರು ಹೊಸದಾಗಿ ಒಳ ಬರುತ್ತಾರೆ. ಇದರಿಂದ ಆರಂಭದ ಸದಸ್ಯರಲ್ಲಿ ಕೆಲವರ ಅವಧಿ ಆರು ವರ್ಷಕ್ಕಿಂತ ಸ್ವಲ್ಪ ವಿಸ್ತರಣೆಯಾಗುತ್ತದೆ. ಆದರೆ ಅವರ ನಂತರ ಬರುವ ಸದಸ್ಯರು ಕಡ್ಡಾಯವಾಗಿ ಆರು ವರ್ಷದ ನಂತರ ನಿವೃತ್ತಿಯಾಗುತ್ತಾರೆ.

ನಿವೃತ್ತಿಯಾಗುವವರು ತಮ್ಮ ಪಾತ್ರದಿಂದ ಮಾತ್ರ ನಿರ್ಗಮಿಸುತ್ತಾರೆ. ಅವರ ಸೇವೆ ಮುಂದುವರೆಯುತ್ತದೆ ಎನ್ನುವ ಆಶಯ ನಮ್ಮದು. ಹುದ್ದೆಗಿಂತ ಸೇವೆ ಮುಖ್ಯವಾಗಿರಬೇಕು.

10) ನಾನು ಬಸವ ಮೀಡಿಯಾ, ಸಲಹಾ ಮಂಡಳಿ, ಟ್ರಸ್ಟ್ ಸೇರಬಹುದೇ?

ಮುಂದಿನ ಟ್ರಸ್ಟ್, ಸಲಹಾ ಮಂಡಳಿಗಳಲ್ಲಿ ಬಸವ ಮೀಡಿಯಾದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ವ್ಯಕ್ತಿಗಳನ್ನು ಗುರುತಿಸಿ ಆಹ್ವಾನಿಸಲಾಗುವುದು.

ಬಸವ ಮೀಡಿಯಾ ಬೆಳೆಯುತ್ತಿರುವ ಸಂಸ್ಥೆ, ನಮ್ಮಲ್ಲಿ ಬೇರೆ ಬೇರೆ ಕೆಲಸ ಮಾಡುವವರ, ಪಾತ್ರಗಳ ಅವಶ್ಯಕತೆಯಿದೆ. ವರದಿ ಮಾಡುವವರ, ಕಾಪಿ ತಿದ್ದುವವರ, ಕಂಪ್ಯೂಟರ್ ಮುಂದೆ ಕೆಲಸ ಮಾಡುವವರ, ಗ್ರಾಫಿಕ್ ಡಿಸೈನ್, ಚಿತ್ರಕಲೆ ಕಲಾವಿದರ, ವಿಡಿಯೋ ಮಾಡುವವರ, ಸಾಮಾಜಿಕ ಜಾಲತಾಣದಲ್ಲಿ ಆಸಕ್ತಿಯಿರುವವರ, ಕಾರ್ಯಕ್ರಮ ಆಯೋಜಕರ, ಸಂಪನ್ಮೂಲಗಳ ನಿರ್ವಾಹಕರ – ಹೀಗೆ ಇನ್ನೂ ಅನೇಕ ಪಾತ್ರಗಳ ಅವಶ್ಯವಿದೆ.

ನಿಮಗೆ ನಮ್ಮ ಜೊತೆ ಕೈ ಜೋಡಿಸುವ ಆಸಕ್ತಿಯಿದ್ದರೆ ನಿಮ್ಮ ಪರಿಚಯದ ಜೊತೆ, ನಮಗೆ ವಾರದ ಮಟ್ಟದಲ್ಲಿ ಎಷ್ಟು ಸಮಯ ಕೊಡಲು ಸಿದ್ಧರಾಗಿರುವಿರೀ ಎಂದು ತಿಳಿಸಿ ಇಮೇಲ್ ಕಳಿಸಿ basavamedia1@gmail.com

ಬಸವ ಮೀಡಿಯಾ ಬೆಳೆಯುತ್ತಿರುವ ಸಂಸ್ಥೆ, ನಮ್ಮಲ್ಲಿ ಬೇರೆ ಬೇರೆ ಕೆಲಸ ಮಾಡುವವರ, ಪಾತ್ರಗಳ ಅವಶ್ಯಕತೆಯಿದೆ.

11) ಇಷ್ಟೊಂದು ಮಹತ್ವ ಆಕಾಂಕ್ಷೆಯ ಯೋಜನೆಗಳು ಸಫಲವಾಗುತ್ತವೆಯೇ?

ನಮ್ಮ ಸಮಾಜದಲ್ಲಿ ಸುಪ್ತವಾಗಿರುವ ಬಸವ ಪ್ರಜ್ಞೆಯ ಆಳ, ಅಗಲ ಪ್ರಖರತೆ ನಮಗೆ ಅರಿವಿಲ್ಲ. ಇದು ಹೊರ ಬರಲು ಒಂದು ಸರಿಯಾದ ವೇದಿಕೆ ಬೇಕಷ್ಟೆ. ಸಂಪನ್ಮೂಲ, ಪ್ರತಿಭಾವಂತ, ಬದ್ಧತೆಯ ವ್ಯಕ್ತಿಗಳಿದ್ದರೆ ಇಂತಹ ವೇದಿಕೆಗಳನ್ನು ಸೃಷ್ಟಿಸುವುದು ಕಷ್ಟದ ಕೆಲಸವಲ್ಲ. ಆ ಅನುಭವ ನಮ್ಮ ತಂಡಕ್ಕಿದೆ.

ಬಸವ ಮೀಡಿಯಾ ಬಹಳ ಸಣ್ಣ ಪ್ರಯತ್ನ. ಆದರೆ ಇದನ್ನು ಶರಣ ಸಮಾಜ ಗಟ್ಟಿಯಾಗಿ ಅಪ್ಪಿಕೊಂಡು ಪ್ರವಾಹದಂತೆ ಬೆಳೆಸುತ್ತಿದೆ. ಇದೇ ನಮ್ಮ ವಿಶ್ವಾಸಕ್ಕೆ ಮೂಲ.

ಬಸವ ಮೀಡಿಯಾ ಬಹಳ ಸಣ್ಣ ಪ್ರಯತ್ನ. ಆದರೆ ಇದನ್ನು ಶರಣ ಸಮಾಜ ಗಟ್ಟಿಯಾಗಿ ಅಪ್ಪಿಕೊಂಡು ಪ್ರವಾಹದಂತೆ ಬೆಳೆಸುತ್ತಿದೆ.

12) ಬಸವ ಮೀಡಿಯಾ ಹೆಸರೇಕೆ?

ಬಸವಣ್ಣನವರೇ ನಮ್ಮ ಅಸ್ತಿತ್ವ. ಇದು ನಮ್ಮ ಅಸ್ತಿತ್ವದ ಪ್ರಶ್ನೆ. ಇದು ಬಸವ ತತ್ವಕ್ಕೆ ಯಾವುದೇ ಮುಲಾಜಿಲ್ಲದೆ ಹೋರಾಡಲು ಬಂದಿರುವ ಮಾಧ್ಯಮ.

ಬಸವಣ್ಣನವರೇ ನಮ್ಮ ಅಸ್ತಿತ್ವ. ಇದು ಬಸವ ತತ್ವಕ್ಕೆ ಯಾವುದೇ ಮುಲಾಜಿಲ್ಲದೆ ಹೋರಾಡಲು ಬಂದಿರುವ ಮಾಧ್ಯಮ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/CMDnqQbFJjwCptS1HUXnEd

Share This Article
21 Comments
  • ಎಲ್ಲ ಶರಣರಿಗೂ ಅಭಿನಂದನೆಗಳು
    ನಿಮ್ಮ ಎಲ್ಲ ಕಾರ್ಯಗಳು ಯಶಸ್ವಿಯಾಗಲಿ‌
    🙏🙏🙏

    • Congratulations to the entire team of Basava Media. May you gain strength and support as you March in this noble endeavours. Upholding Basavanna’s tenets, philosophy must be made aware to everyone who identify themselves as Lingayats and anyone else. We are living in a very sensitive times and polarised society, hence it becomes even more significant to endorse harmony, peace, equality in the society.

  • ಗುಡ್ ಲಕ್ ಬಸವ ಮೀಡಿಯಾ. ನಾನು ಈಗ ತಾನೇ ಕೆಲಸಕ್ಕೆ ಸೇರಿದ್ದೇನೆ. ಆದರೂ ಸಾಧ್ಯವಾದಾಗಲೆಲ್ಲ ಹಣ ಕಳಿಸಲು ಸಿದ್ದ. ಹಣ ಎಲ್ಲಿಗೆ ಹಾಕಬೇಕೆಂದು ಹೇಳಿ.

  • ಸುದೀರ್ಘ ವಾದ ವಿವರಣೆ ಯನ್ನು ಗಮನಿಸಿರುವೆ.ಬಸವ ಚಿಂತನೆ ಹಾಗೂ ಬಸವ ತತ್ವ ಹೆಚ್ಚಿನ ಮಟ್ಟದಲ್ಲಿ ಬೆಳೆಯಬೇಕು.ನನ್ನ ವಿದ್ಯಾಗುರುಗಳಾದ ಶ್ರೀ. ಟಿ.ಆರ್.ಚಂದ್ರಶೇಖರ್ ಸರ್ ರವರು ಅದ್ಯಕ್ಷತೆಯಲ್ಲಿ ಬಸವ ಮೀಡಿಯಾ ಬಸವ ಅನುಯಾಯಿಗಳೆಲ್ಲರಿಗೂ ತಲುಪಲು ವ್ಯವಸ್ಥೆ ಯಾಗಬೇಕು.ಬೆಂಗಳೂರಿಗೆ ಸೀಮಿತ ವಾಗಬಾರದು.ಟ್ರಸ್ಟಿಗಳು ಹಾಗೂ ಸಲಹೆ ಸಮಿತಿ ಸದಸ್ಯರು ಸೇವೆ ಎಂದು ಭಾವಿಸಿ ಕಾರ್ಯ ಮಾಡಲು ಸಿದ್ದರಾಗಬೇಕು

  • ಅಶ್ಚರ್ಯ, ಅದ್ಬುತ ಪ್ರಯತ್ನ,ಸಹಾಸ. ನಂಬಲು ಅಸಾದ್ಯ. ನಿಮ್ಮ ಟ್ರಸ್ಟಿಗಳ ಈ ಪ್ರಯತ್ನ ಮತ್ತು ನಿಲುವುಗಳು ಮೆಚ್ಚುವಂತಾದ್ದು. ಖಂಡಿತ ನಿಮಗೆ ಎಲ್ಲಾತರಹ ನೆರವು ಹಾಗು ಸಹಕಾರ ಖಂಡಿತ ದೊರೆಯುತ್ತದೆ. ನಿಮ್ಮ ಬಸವ ಮೀಡಿಯಾ ನಮ್ಮ ಮಿಡಿಯಾ ಎಂಬ ಭಾವನೆ ನನ್ನೊಳಗೊಂಡು ಎಲ್ಲಾ ಲಿಂಗಾಯತ ಮಿತ್ರರಿಗೂ ಬಂದಿದೆ. ಕಾರಣ ಸಮುದಾಯದ ಬಗ್ಗೆ ನಿಮಗಿರುವ ಕಾಳಜಿ ಮತ್ತು ನಿಮ್ಮ ಕಾರ್ಯದಕ್ಷತೆ. ದಯಮಾಡಿ ಮಾಸ ಪತ್ರಿಕೆ ಸಹ ಹೊರತಂದು ವಿವರವಾಗಿ ಮುಖ್ಸ ಘಟನಾವಳಿಯ ಸುದ್ಮಿ ಹಾಗು ಮಹಿತಿ ಒದಗಿಸಿ ಸಮುದಾಯದ ಜ್ಞಾನ ಹೆಚ್ಚಿಸಿ. ಶರಣಾರ್ಥಿಗಳು

  • ಇಂಥದೊಂದು ಮೀಡಿಯಾ ಕೇವಲ ಕೇವಲ ಬಸವಾದಿ ಶರಣರಿಗೆ ಮುಡಿಪಾಗಿಟ್ಟದ್ದು,ಲಿಂಗಾಯತರ ಅಭಿಮಾನ,ಲಿಂಗಾಯತರ ಅಸ್ತಿತ್ವ,ಲಿಂಗಾಯತರ ಬಲ.ಅದಕ್ಕಾಗಿ ಲಿಂಗಾಯತರು ಉಪಕಾರಿಗಳಾಗಿದ್ದಾರೆ. ಋಣಿಯಾಗಿದ್ದಾರೆ. ಋಣಿಯಾಗಿರಬೇಕು. ಆದರೆ ಇದರ ಉದ್ದೇಶ ಮಾತ್ರ,ಎಂದೂ ಬದಲಾಗಬಾರದು.ಇದರ ಸಂರಚನೆ ಮೇಲ್ನೋಟಕ್ಕೇನೇ ಒಳ್ಳೆಯದಾಗಿದೆ. ಒಳ್ಳೆಯದು ಆಗೇ ಆಗುತ್ತದೆ ಎಂಬ ವಿಶ್ವಾಸ ಈಗಾಗಲೇ ತೋರಿ ಬಂದಿದೆ. ಹಣಕಾಸಿನ ತೊಂದರೆ ಎಂದೂ ಆಗದು. ಬಡವರೂ ಕೂಡ ಹೃದಯ ಶ್ರೀಮಂತಿಕೆಯಿಂದ ಕೊಡಬಲ್ಲರು. ಇನ್ನು ಬಸವ ಭಕ್ತರು ಶ್ರೀಮಂತಿಕೆಯಿಂದ ಕೂಡಿದವರಾಗಿದ್ದಾರೆ. ಬಸವ ತತ್ವಕ್ಕೆ ಬದ್ಧರಾದರೆ ಸಾಕು. ಈ ಟ್ರಸ್ಟಿನ ಕಾರ್ಯ ಮೆಚ್ಚಿಕೆಯಿಂದ ಕೂಡಿದೆ. ಈ ಕಾರ್ಯ ಕೈಗೊಂಡ ಮುಖಂಡರಿಗೆ ಕೃತಜ್ಞೆತೆಗಳು,ಧನ್ಯವಾದಗಳು. ಶುಭವಾಗಲಿ.ಶರಣಾರ್ಥಿಗಳು.

  • ನಿಮ್ಮ ಉದ್ದೇಶ ಮತ್ತು ವಿಚಾರಕ್ಕೆ ನನ್ನ ಅಭಿನಂದನೆಗಳು.ನಮ್ಮ ಗುರಿ ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ

  • ತಾವು, ಬಸವ ಮೀಡಿಯಾ ಬಹಳ ಸುಂದರವಾದ ಮತ್ತು ಪವಿತ್ರವಾದ ಆಸೆಯಗಳನ್ನು ಹೊತ್ತು, ವಿವಿಧ ರೀತಿಯ ಬಸವ ಕಾರ್ಯಕ್ರಮ ಹಾಕಿಕೊಂಡಿದ್ದರಿ. ಎಲ್ಲ ಉದ್ದೇಶಗಳನ್ನು ಪೂರ್ತಿ ಮಾಡಲು ಸಾಧ್ಯ, ಆ ಬಸವ ಚೇತನ್ ನಮಗೆ ಶಕ್ತಿ ಕೊಡಲಿ. ಎಂದು ಹಾರೈಸಿ,
    ಶುಭವಾಗಲಿ ಶರಣು ಶರಣಾರ್ಥಿ

  • ನಾನು ವೇತನ ಇಲ್ಲದೆ ಬಸವ ಮಿಡಿಯಾದಿಂದ ಸೇವೆ ಬಯಸುತ್ತೇನೆ ಯಾರನ್ನು ಸಂಪರ್ಕ ಮಾಡಬೇಕು. ಶ್ರೀ ಗುರು ಬಸವ ಇಷ್ಟ ಲಿಂಗಾಯತ ಧರ್ಮ.

    • ಬಹಳ ಧನ್ಯವಾದ ಶರಣರೇ, ದಯವಿಟ್ಟು ನಿಮ್ಮ ಫೋನ್ ನಂಬರ್ ಸಹಿತ ನಿಮ್ಮ ಸಂಕ್ಷಿಪ್ತ ಪರಿಚಯ ಇಮೇಲ್ ಮಾಡಿ basavamedia1@gmail.com. ಮಾತಾಡೋಣ

  • ನನ್ನಂತಹ ಲಕ್ಷಾಂತರ ಬಸವಾಭಿಮಾನಿಗಳ ಮನದಾಳದ ಆಶಯ ಕಾರ್ಯರೂಪಕ್ಕೆ ಬರುತ್ತಿರುವುದು ನಿಜಕ್ಕೂ ಸಮಾಧಾನ ಸಂತೋಷ ತಂದಿದೆ. ಬಸವಾಭಿಮಾನಿಗಳ ಅನಿಸಿಕೆ… ಲೇಖನಗಳ ರೂಪದಲ್ಲಿ ವ್ಯಕ್ತಪಡಿಸಲು… ಲೇಖಕರನ್ನು ರೂಪಿಸಲು… ಬಸವ ಮೀಡಿಯಾ ಚಿಮ್ಮು ಹಲಗೆಯಾಗಲಿ ಎಂದು ಹಾರೈಸುವೆ.

    • ತಮ್ಮ ಆಲೋಚನೆ ,ಆಶಯ ,ಗುರಿ ಉದ್ದೇಶಗಳು ಅತ್ಯಂತ ಸಮಯೋಚಿತವಾಗಿವೆ ಸದ್ಯದ ಪರಿಸ್ಥಿತಿಯಲ್ಲಿ ಸಮಾಜಕ್ಕೆ ದೇಶಕ್ಕೆ ಬಸವಣ್ಣನವರ ತತ್ವ ವಿಚಾರಗಳ ಅವಶ್ಯಕತೆಯಿದ್ದು ಅವುಗಳನ್ನು ಸಮೂಹ ಮಾಧ್ಯಮಗಳ ಮೂಲಕ ಜಾಗೃತಗೊಳಿಸುತ್ತಿರುವ ತಮ್ಮ ಸಂಘಟನೆಗೆ ತಾಲೂಕು ಶರಣ ಸಾಹಿತ್ಯ ಪರಿಷತ್ತು ಚನ್ನಗಿರಿ .(ದಾವಣಗೆರೆ ಜಿಲ್ಲೆ )ವತಿಯಿಂದ ಅಭಿನಂದನೆಗಳು.

  • ತಮ್ಮ ಗೂತ್ತು, ಗುರಿ,ಉದ್ದೇಶಗಳು ಮತ್ತು ಪ್ರಜಾಸತ್ತಾತ್ಮಕ ನಿಲುವು ತಿಳಿದು ತುಂಬಾ ಸಂತೋಷವಾಯಿತು.ತಮ್ಮ ತಂಡಕ್ಕೆ ಹಾರ್ದಿಕ ಅಭಿನಂದನೆಗಳು.
    ಶರಣು ಶರಣಾರ್ಥಿ

  • ಆಯ್ಕೆ ಎಲ್ಲಾ ಶರಣ ಶರಣೆಯರಿಗೂ ಅಭಿನಂದನೆಗಳು 💐💐 ಮುಂದಿನ ದಿನಗಳಲ್ಲಿ ಜೀವಪರ ಮಾಧ್ಯಮವಾಗಿ ಬೆಳೆಯಲಿ….

  • ✅ಬಸವ ಬೆಳಗಿನ ಶರಣು ಶರಣಾರ್ಥಿಗಳು
    **********************************
    🌹🚩#ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವೇಶ್ವರರು ಮನೆ ಮನದ ಅಭಿಯಾನ -2025🚩🌹.
    **********************************
    🚩🌹ಬಸವಾದಿ ಶರಣರ 22000+ ವಚನಗಳನ್ನು ಹೊಂದಿದ ವೆಬ್ ಸೈಟ್. ಇತರೆ ಭಾಷೆಗಳಲ್ಲಿ ಎಲ್ಲಾ ವಚನಗಳನ್ನು ಬಾಷಾಂತರಿಸಲು ಅವಕಾಶವಿದೆ. ನೊಡಲು ಇಲ್ಲಿ ಕ್ಲಿಕ್ ಮಾಡಿ….👇
    http://vachana.taralabalu.in/index2.php 🌹🚩 ********************************** 🌹🚩ಹೊರಗೆಂಟು ತನು, ಒಳಗೆ ನಿರಂಜನ ಜ್ಯೋತಿ,
    ತೆರಹಿಲ್ಲದಿಪ್ಪವನನಾರೂ ಬಲ್ಲವರಿಲ್ಲ ಕೇಳಿರೇ.
    ಶಿವನಲ್ಲದೆ ಬೇರೆ ದೈವವಿಲ್ಲ.
    ಹುಲಿಗೆರೆಯ ವರದ ಸೋಮನಾಥನು ಏಕೋರುದ್ರನದ್ವಿತೀಯನೆಂದುದು ಶ್ರುತಿ🌹🚩.

    🌹🚩ಶರಣ ಅಗ್ಗವಣಿ ಹೊನ್ನಯ್ಯ🌹🚩
    **********************************
    🌹🚩🌹🚩ಆತ್ಮೀಯ ಶರಣಬಂಧುಗಳೇ, ಪ್ರತಿ *ಗುರುವಾರದಂತೆ ದಿನಾಂಕ:, ೦೧-೦೫-೨೦೨೫, ಗುರುವಾರ*
    ಸಮಯ:- *ಸಂಜೆ ೭:೩೦ ರಿಂದ ೦೮:೪೫* ವರೆಗೆ. *ಅಂತರ್ಜಾಲ(ಆನ್ಲೈನ್) ವಚನೋತ್ಸವ* ವನ್ನು ಆಯೋಜಿಸಲಾಗುವುದು. ದಯವಿಟ್ಟು https://meet.google.com/cvi-zeeg-rma
    ಈ ಲಿಂಕ್ ಮೂಲಕ ತಾವು ಪಾಲ್ಗೊಳ್ಳಿರಿ 🌹🚩
    **********************************
    🌹🚩ಎಲ್ಲ ಬಸವ ಭಕ್ತರು ಮರೆಯದೇ ಬನ್ನಿ 🙏
    ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವೇಶ್ವರ ರವರನ್ನು
    ಪೂಜಿಸೋಣ!!!
    ಸ್ಮರಿಸೋಣ!!!
    ನಮಿಸೋಣ!!!

    🌹🚩ದಿನಾಂಕ 30/04/2025
    ಸಮಯ ‌- ಸಂಜೆ 5:00ಕ್ಕೆ
    ಸ್ಥಳ- ಶ್ರೀ ಬಸವೇಶ್ವರ ಪ್ರಚಾರ ಸಮಿತಿ ಆವರಣ
    ಕಮಲಾನಗರ
    ಬೆಂಗಳೂರು-79🌹🚩

    🌹🚩ಶ್ರೀ ಬಸವೇಶ್ವರ ಪ್ರಚಾರ ಸಮಿತಿ.
    8050508761🌹🚩
    **********************************
    🌹🚩 ಶುಭೋದಯ 🚩🌹🌹ಶುಭದಿನ🌹Good Morning🌹Have A Nice day👏🙏🌹🚩

  • ಅಭಿನಂದನೆಗಳು, ಯಾವುದೇ ರಾಜಕೀಯ ಭಾಗವಾಗದೆ, ಧರ್ಮ ಕಾರ್ಯ ನಡೆಯಲಿ, ನಮ್ಮ ಬೆಂಬಲ ಸದಾ ಇರುತ್ತದೆ… ಶರಣು ಶರಣಾರ್ಥಿ

Leave a Reply

Your email address will not be published. Required fields are marked *