ಪೂಜ್ಯ ವೀರತಿಶಾನಂದ ಸ್ವಾಮೀಜಿ, ಪೂಜ್ಯ ಬಸವ ಪ್ರಭು ಸ್ವಾಮೀಜಿ, ಶರಣ ಸಿ. ಜಿ. ಪಾಟೀಲ್ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಬೆಂಗಳೂರು
ಈ ವರ್ಷ ನಡೆಯಲಿರುವ ಲಿಂಗಾಯತ ಧರ್ಮ ಜಾಗೃತಿ ಅಭಿಯಾನದ ಮೇಲೆ ನಾಡಿನ ಬಸವ ತತ್ವದ ಸ್ವಾಮೀಜಿಗಳ, ಹೋರಾಟಗಾರರ, ಚಿಂತಕರ ಮತ್ತು ಸಂಘಟನೆಗಳ ಕಾರ್ಯಕರ್ತರ ಅಭಿಪ್ರಾಯವನ್ನು ಬಸವ ಮೀಡಿಯಾ ತಂಡ ಸಂಗ್ರಹಿಸಲಿದೆ.
ಈ ಸಂವಾದದಲ್ಲಿ ಬರುವ ಮುಖ್ಯವಾದ ಸಲಹೆಗಳನ್ನು ಕ್ರೋಡೀಕರಿಸಿ ಲಿಂಗಾಯತ ಜಾಗೃತಿ ಅಭಿಯಾನದ ರೂಪರೇಷೆಯನ್ನು ಸಿದ್ಧಪಡಿಸುತ್ತಿರುವ ಜಂಟಿ ಸಮಿತಿಗೆ ತಲುಪಿಸುವ ಪ್ರಯತ್ನ ಮಾಡುತ್ತೇವೆ.
ಈ ನಿಟ್ಟಿನಲ್ಲಿ ಬೆಂಗಳೂರಿನ ಲಿಂಗಾಯತ ಧರ್ಮ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಬಸವಾ ಮಿಡಿಯಾ ಸರಣಿ ಗೂಗಲ್ ಮೀಟ್ ಗಳನ್ನು ನಡೆಸಲಿದೆ. ಇದರಲ್ಲಿ ಅಭಿಯಾನದಲ್ಲಿ ನಡೆಸಬೇಕಾಗಿರುವ ಚಟುವಟಿಕೆಗಳನ್ನು ಮತ್ತು ಅವುಗಳಿಗೆ ಬೇಕಾದ ಪೂರ್ವಸಿದ್ಧತೆಗಳನ್ನು ಚರ್ಚಿಸಲಿದ್ದೇವೆ.
ಇಂದಿನ ಕಾರ್ಯಕ್ರಮದ ವಿವರ
ದಿನಾಂಕ: 11-02-2025
ಸಮಯ: ರಾತ್ರಿ 8:30ಗಂಟೆಗೆ
ಚರ್ಚೆಯಲ್ಲಿ ಪಾಲ್ಗೊಳ್ಳುವವರು
1) ಪೂಜ್ಯ ವೀರತಿಶಾನಂದ ಸ್ವಾಮೀಜಿ
ವಿರಕ್ತ ಮಠ ಮನೂಗೂಳಿ ವಿಜಯಪುರ ಜಿಲ್ಲೆ.
2) ಪೂಜ್ಯ ಬಸವ ಪ್ರಭು ಸ್ವಾಮೀಜಿ
ಕಲ್ಯಾಣ ಮಹಾಮನೆ ಗುಣತಿರ್ಥ ವಾಡಿ
3) ಶರಣ ಸಿ. ಜಿ. ಪಾಟೀಲ್
ಅಧ್ಯಕ್ಷರು, ಜಾಗತಿಕ ಲಿಂಗಾಯತ ಮಹಾಸಭಾ, ಧಾರವಾಡ ಯುವ ಘಟಕ
ವಚನ ಪ್ರಾರ್ಥನೆ ಮತ್ತು ಸ್ವಾಗತ:
ಶರಣ ಶ್ರೀಶೈಲ ಜಿ ಮಸೂತೆ
ಪ್ರಾಸ್ತಾವಿಕ ನುಡಿ, ಕಾರ್ಯಕ್ರಮ ನಿರ್ವಹಣೆ:
ಶರಣ ಕುಮಾರಣ್ಣ ಪಾಟೀಲ್
ದಯವಿಟ್ಟು ಗಮನಿಸಿ:
1) ಪೂಜ್ಯ ವೀರತಿಶಾನಂದ ಶ್ರೀಗಳು, ಪೂಜ್ಯ ಬಸವ ಪ್ರಭು ಶ್ರೀಗಳು ಮತ್ತು ಶರಣ ಸಿ. ಜಿ. ಪಾಟೀಲ್ 10 ನಿಮಿಷ ಮಾತನಾಡಲಿದ್ದಾರೆ. (ಒಟ್ಟು ಅವಧಿ – 30 ನಿಮಿಷ)
2) ನಂತರ 25 ನಿಮಿಷ ಮುಕ್ತ ವೇದಿಕೆ (ಆಸಕ್ತರಿಗೆ ಮಾತನಾಡಲು ಅವಕಾಶ)
3) ಯಾವುದೇ ವ್ಯಕ್ತಿಯ ಅಥವಾ ಸಂಘಟನೆಯ ಟೀಕೆ, ನಿಂದನೆಗೆ ಅವಕಾಶವಿರುವುದಿಲ್ಲ.
4) ಚರ್ಚೆಯಲ್ಲಿ ಭಾಗವಹಿಸಲು ಗೂಗಲ್ ಮೀಟ್ ಲಿಂಕ್
meet.google.com/tmn-iafd-fyx
ಎಲ್ಲರಿಗೂ ಆದರದ ಸ್ವಾಗತ, ಶರಣು ಶರಣಾರ್ಥಿಗಳು
ಲಿಂಗಾಯತ ಧರ್ಮ ಅಧ್ಯಯನ ಕೇಂದ್ರ
ಬಸವ ಮೀಡಿಯಾ