ಶತಮಾನಗಳಿಂದ ಹೇಳಿಕೊಂಡು ಬಂದಿರುವ ಪಂಚಪೀಠಗಳ ಸುಳ್ಳುಗಳಿಗೆ ಬೆಲ್ದಾಳ ಶರಣರು ತಮ್ಮ ಹೊಸ ಪುಸ್ತಕದಲ್ಲಿ ದಾಖಲೆ ಸಮೇತ ಉತ್ತರಿಸಿದ್ದಾರೆ.
ಬೆಂಗಳೂರು

ವೀರಶೈವ ಪ್ರಾಚೀನ, ಲಿಂಗಾಯತ ಧರ್ಮವಲ್ಲ, ನಾವೆಲ್ಲಾ ಹಿಂದೂಗಳು, ಬಸವಣ್ಣ ನಮ್ಮ ಶಿಷ್ಯರು ಎಂದು ಮಾರ್ಚ್ 9 ಪಂಚಪೀಠಗಳು ಜಂಟಿ ಹೇಳಿಕೆ ನೀಡಿದವು.
ಕಾಕತಾಳೀಯವಾಗಿ ಅದೇ ದಿನ ಬಸವ ಮಹಾಮನೆಯ ಬೆಲ್ದಾಳ ಸಿದ್ದರಾಮ ಶರಣರು
ಬರೆದಿರುವ 1,400 ಪುಟಗಳ ಬ್ರಹತ್ ಗ್ರಂಥ ‘ಸತ್ಯ ಶರಣರು-ಸತ್ಯ ಶೋಧ’ ಬಿಡುಗಡೆಯಾಯಿತು.
ಶತಮಾನಗಳಿಂದ ಹೇಳಿಕೊಂಡು ಬಂದಿರುವ ಪಂಚಪೀಠಗಳ ಸುಳ್ಳುಗಳಿಗೆ ಬೆಲ್ದಾಳ ಶರಣರು ತಮ್ಮ ಹೊಸ ಪುಸ್ತಕದಲ್ಲಿ ದಾಖಲೆ ಸಮೇತ ಉತ್ತರಿಸಿದ್ದಾರೆ.
ಇಂದು ರಾತ್ರಿ ಬಸವ ರೇಡಿಯೋ ಕಾರ್ಯಕ್ರಮದಲ್ಲಿ ಬೆಲ್ದಾಳ ಶರಣರು ಪಂಚಪೀಠಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡಲಿದ್ದಾರೆ.
ನಾಳೆ ರಾತ್ರಿ ಶರಣರ ಮೇಲೆ ಸವಾರಿ ಮಾಡಲು ಶತಮಾನಗಳಿಂದ ಸೃಷ್ಟಿಯಾಗಿರುವ ಸುಳ್ಳುಗಳಿಗೆ ಬೆಲ್ದಾಳ ಶರಣರು ಉತ್ತರ ನೀಡಲಿದ್ದಾರೆ.
ಇಂದಿನ ಕಾರ್ಯಕ್ರಮದ ವಿವರ
ದಿನಾಂಕ: 12-03-2025
ಸಮಯ: ರಾತ್ರಿ 8:30-9:30
ಚರ್ಚೆಯಲ್ಲಿ ಪಾಲ್ಗೊಳ್ಳುವವರು
ಬೆಲ್ದಾಳ ಸಿದ್ದರಾಮ ಶರಣರು, ಬಸವ ಮಹಾಮನೆ
ಲೇಖಕರು, ‘ಸತ್ಯ ಶರಣರು-ಸತ್ಯ ಶೋಧ’
ಪ್ರಾಸ್ತಾವಿಕ, ಸಮಾರೋಪ ನುಡಿ,
ಹೆಚ್ ಎಂ ಸೋಮಶೇಖರಪ್ಪ
ಪರಿಚಯ
ಶರಣ ಶ್ರೀಕಾಂತ್ ಸ್ವಾಮಿ
ಕರ್ನಾಟಕ ರಾಜ್ಯ ಸಂಚಾಲಕರು
ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ.
ದಯವಿಟ್ಟು ಗಮನಿಸಿ:
1) ಬೆಲ್ದಾಳ ಶರಣರು 40 ನಿಮಿಷ ಮಾತನಾಡಲಿದ್ದಾರೆ. ನಂತರ 15 ನಿಮಿಷ ಮುಕ್ತ ವೇದಿಕೆ.
2) ಯಾವುದೇ ವ್ಯಕ್ತಿಯ ಅಥವಾ ಸಂಘಟನೆಯ ಟೀಕೆ, ನಿಂದನೆಗೆ ಅವಕಾಶವಿರುವುದಿಲ್ಲ.
3) ಚರ್ಚೆಯಲ್ಲಿ ಭಾಗವಹಿಸಲು ಗೂಗಲ್ ಮೀಟ್ ಲಿಂಕ್
https://meet.google.com/tzd-ixvm-vbv
ಎಲ್ಲರಿಗೂ ಸ್ವಾಗತ, ಶರಣು