‘ಒದಿತೀನಿ ಅಂದ ಮ್ಯಾಲೆ ಲಿಂಗಾಯತ ಧರ್ಮದವರು ಠುಸ್ ಆಗ್ಯಾರ’
ರಬಕವಿ-ಬನಹಟ್ಟಿ:
“ಇನ್ನು ಮೇಲೆ ನಮ್ಮ ಧರ್ಮದ ಬಗ್ಗೆ ಯಾರದ್ರೂ ಮಾತನಾಡಿದ್ರೆ ಸುಮ್ಮನಿರಲ್ಲ. ಇವರಿಗೆ ಸುಮ್ಮನೆ ಹೇಳಿದ್ರೆ ಕೇಳಲ್ಲ, ಒದಿತೀನಿ ಅಂದ್ರೆ ಮಾತ್ರ ಅಂಜುತ್ತಾರೆ,” ಎಂದು ವಿಜಯಪುರ ಶಾಸಕ ಬಸನ ಗೌಡ ಯತ್ನಾಳ್ ಶನಿವಾರ ಹೇಳಿದರು.
ಬನಹಟ್ಟಿಯಲ್ಲಿ ನಡೆದ ಬೃಹತ್ ಹಿಂದೂ ಸಮಾವೇಶದಲ್ಲಿ ಮಾತನಾಡಿದ ಅವರು ಲಿಂಗಾಯತ ಸ್ವಾಮೀಜಿಗಳ ಮೇಲೆ ಏಕ ವಚನದಲ್ಲಿಯೇ ಕಿಡಿ ಕಾರಿದರು.
“ಲಕ್ಷ್ಮಿ ಪೂಜೆ, ಗಣಪತಿ ಪೂಜೆ ಏಕೆ ಮಾಡಬೇಕು ಎಂದು ಒಬ್ಬ ಸ್ವಾಮೀಜಿ ಹೇಳುತ್ತಾನೆ, ಇನ್ನೊಬ್ಬ ಸ್ವಾಮೀಜಿ ಮುಸ್ಲಿಂ ಧರ್ಮ ಶ್ರೇಷ್ಠ ಎನ್ನುತ್ತಾನೆ. ಇವರಿಗೆ ಉತ್ತರವಾಗಿ ಕನ್ನೇರಿ ಸ್ವಾಮಿ ಹೇಳಿದ್ದರಲ್ಲಿ ಏನು ತಪ್ಪಿದೆ. ಸ್ವಾಮೀಜಿಗಳಿಗೆ ಮೆಟ್ಟಿನಲ್ಲಿ ಹೊಡೆಯಿರಿ ಎಂದಿದ್ದಕ್ಕೆ ನನ್ನ ಸಮರ್ಥನೆಯಿದೆ,” ಎಂದು ಹೇಳಿದರು.
“ಕನ್ನೇರಿ ಸ್ವಾಮಿಗಳು ಮಾತಾಡಲು ಶುರುಮಾಡಿದ ಮೇಲೆ ಇವರೆಲ್ಲ ಸುಮ್ಮನಾಗಿದ್ದಾರೆ. ಇವತ್ತು ಕರ್ನಾಟಕದಲ್ಲಿ ಯಾರೂ ಲಿಂಗಾಯತ ಧರ್ಮದ ಬಗ್ಗೆ ಮಾತಾಡುತ್ತಿಲ್ಲ. ವೀರಶೈವರು, ಲಿಂಗಾಯತರು ಒಂದೇ, ಎಲ್ಲಾ ಸನಾತನಿ ಹಿಂದುಗಳೇ,” ಎಂದು ಹೇಳಿದರು.
ಬಸವ ಸಂಸ್ಕೃತಿ ಅಭಿಯಾನಕ್ಕೆ ವಿರುದ್ಧವಾಗಿ ಸಂಘ ಪರಿವಾರದ ಸಂಘಟನೆಗಳು ವಿವಿಧ ನಗರಗಳಲ್ಲಿ ಬಸವ ಬಸವಾದಿ ಶರಣರ ಹಿಂದೂ ಸಮಾವೇಶ ಆಯೋಜಿಸುತ್ತಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಸಿದ್ದು ಸವದಿ ನನಗೆ ಬಸವಾದಿ ಶರಣರ ಹಿಂದೂ ಸಮಾವೇಶದಿಂದ ಲಾಭ ಬೇಕಿಲ್ಲ. ಬೇಕಾದರೆ ಈಗಲೇ ಶಾಸಕ ರಾಜೀನಾಮೆಗೆ ಸಿದ್ದ. ನಮ್ಮ ದೇಶ, ಧರ್ಮ ಉಳಿದರೆ ಸಾಕು. ನಾನು ಮಿಲಿಟರಿಯಲ್ಲಿ ಕೆಲಸ ಮಾಡಿ ಬಂದಿದ್ದೇನೆ, ಎಂದು ಹೇಳಿದರು.
ದೇವಲೋಕದಲ್ಲಿ ದೇವರ ನೋಡಲು ಯಾರೂ ಹೋಗಲಾಗಲ್ಲ. ಇಷ್ಟೊಂದು ಜನ ಸ್ವಾಮೀಜಿಗಳನ್ನು ಒಟ್ಟಿಗೆ ನೋಡಲು ಅವಕಾಶ ಬಂದಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ರಬಕವಿ-ಬನಹಟ್ಟಿಯ ಅವಳಿ ನಗರದಲ್ಲಿ ಮಧ್ಯಾಹ್ನ 3 ಗಂಟೆಗೆ ಶೋಭಾ ಯಾತ್ರೆ ಕನ್ನೇರಿ ಸ್ವಾಮಿಯ ‘ಪುರ ಪ್ರವೇಶ’ ಕಾರ್ಯಕ್ರಮದೊಂದಿಗೆ ಶುರುವಾಯಿತು.
ಮೆರವಣಿಗೆ ರಬಕವಿಯ ಹಳೇ ಬಸ್ ನಿಲ್ದಾಣ ಹಾಗೂ ಬನಹಟ್ಟಿಯ ವೈಭವ ಚಿತ್ರಮಂದಿರದಿಂದ ಎರಡೂ ಕಡೆಗಳಿಂದ ಆರಂಭವಾಗಿ ಅವಳಿ ನಗರಗಳ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.
ಕಾರ್ಯಕ್ರಮದಲ್ಲಿ ಕನ್ನೇರಿ ಸ್ವಾಮಿ, ಶಿರೋಳದ ಶಂಕರಾರೂಢ ಶ್ರೀಗಳು, ಹಳೇ ಹುಬ್ಬಳ್ಳಿಯ ಜಗದ್ಗುರು ಯೋಗಾಚಾರ್ಯ ಶ್ರೀ, ಶಿವಶಂಕರ ಶಿವಾಚಾರ್ಯರು, ಮೈಗೂರಿನ ಗುರುಪ್ರಸಾದ ಶ್ರೀಗಳು, ಹುಲ್ಯಾಳದ ಹರ್ಷಾನಂದ ಶ್ರೀಗಳು, ಹಿ೦ದೂ ಮುಖಂಡರಾದನಂದು ಗಾಯಕವಾಡ, ವಿದ್ಯಾಧರ ಸವದಿ, ಲಕ್ಕಪ್ಪ ಪಾಟೀಲ, ಬಾಬುಗೌಡ ಪಾಟೀಲ, ಗೌರಿ ಮಿಳ್ಳಿ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.

ಕುಡಿದುಕೊಂಡು ಬಂದು ಮಾತಾಡ್ತಾ ಇರೋದು