ಬಸವಣ್ಣನವರನ್ನು ದೇವರು ಮಾಡುವುದು ಬಸವ ತತ್ವಕ್ಕೆ ಅಪಾಯಕಾರಿ

ದಾವಣಗೆರೆ

ಹನ್ನೆರಡನೆಯ ಶತಮಾನದಲ್ಲಿ ಸರ್ವತೋಮುಖ ಕ್ರಾಂತಿ ಮಾಡಿದ ವಿಶ್ವಚೇತನ ಬಸವಣ್ಣನವರು ಇಂದು ಜಗತ್ತಿನ ವಿದ್ವಾಂಸರ ಗಮನ ಸೆಳೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಇದು ಕೆಲವು ಪಟ್ಟಭದ್ರರಿಗೆ ನುಂಗಲಾರದ ತುಪ್ಪ. ಇವರಲ್ಲಿ ಅನೇಕರು ಶರಣರ ಅನುಯಾಯಿಗಳಂತೆ ನಟಿಸಿ ಆಪೋಶನ ಮಾಡಿಕೊಳ್ಳಲು ಹೊಂಚು ಹಾಕಿಕೊಂಡಿರುವುದು ಕಾಣಿಸುತ್ತಿದೆ.

ಬಸವಣ್ಣನವರನ್ನು ಮೂರು ವಿಧದಲ್ಲಿ ಗುರುತಿಸುವವರು ಇದ್ದಾರೆ:

ಬಸವಣ್ಣ ಅಂದರೆ ಎತ್ತು ಎಂಬುದಾಗಿ ಕೆಲವರು ಗುರುತಿಸಿದರೆ,
ಬಸವಣ್ಣನವರು ದೇವರು ಅಂತ ಗುರುತಿಸುವವರೂ ಇದ್ದಾರೆ,
ಬಸವಣ್ಣನವರನ್ನು ಆದರ್ಶ ವ್ಯಕ್ತಿ ಆಗಿ ಸಮಾಜ ಸುಧಾರಕನಾಗಿ ಕ್ರಾಂತಿಕಾರಿ ಆಗಿ ಗುರುತಿಸುವವರೂ ಇದ್ದಾರೆ.

ಬಸವಣ್ಣನವರನ್ನು ಎತ್ತು ಎಂದು ಗುರುತಿಸುವವರಿಂದ ಸಮಾಜಕ್ಕೆ ಅಲ್ಪ ಪ್ರಮಾಣದ ಹಾನಿ ಆದರೂ ದೂಡ್ಡ ಅಪಾಯ ಇಲ್ಲ.

ಬಸವಣ್ಣನವರನ್ನು ದೇವರು ಎಂದು ಗುರುತಿಸುವುದು ಬಹಳ ಅಪಾಯಕಾರಿ. ಇದು ಬಸವಣ್ಣನವರು ಪ್ರತಿಪಾದಿಸಿದ ವಿಚಾರಗಳನ್ನು ನಾಶಮಾಡುವ ಸಾಧ್ಯತೆ ದಟ್ಟವಾಗಿರುತ್ತದೆ.

ಬಸವಣ್ಣನವರನ್ನು ದೇವರು ಮಾಡಿದರೆ ಆತನ ಹೆಸರಿನಲ್ಲಿ ಗುಡಿಗಳು, ಪುರೋಹಿತರ ಅಭಿಷೇಕ ಪೂಜೆ ಹೀಗೆ ಶೋಷಣೆಯ ಆಗರವೇ ಆಗಿ ಬಸವಣ್ಣನವರು ಪ್ರತಿಪಾದಿಸಿದ ತತ್ವಗಳು ಸಂಪೂರ್ಣವಾಗಿ ನಾಶ ಆಗುತ್ತವೆ.

ಬಸವಣ್ಣನವರನ್ನು ಆದರ್ಶ ವ್ಯಕ್ತಿ ಆಗಿ ಗುರುತಿಸುವುದು ಅತ್ಯಂತ ಯೊಗ್ಯವಾದುದು.
ಜಗತ್ತಿನ ಮೊಟ್ಟ ಮೊದಲ ಪ್ರಜಾಪ್ರಭುತ್ವ ವ್ಯವಸ್ಥೆಯ ಪರಿಕಲ್ಪನೆ ಕೊಟ್ಟಿದ್ದು ಬಸವಣ್ಣ ಎಂದು ಗೊತ್ತಾಗಿದೆ.

ಬಸವಣ್ಣನವರು ಆದರ್ಶ ವ್ಯಕ್ತಿ ಆಗಿದ್ದರಿಂದ ಬ್ರಿಟಿಷ್ ಸಂಸತ್ತಿನ ಮುಂದೆ ಬಸವಣ್ಣನವರ ಪ್ರತಿಮೆ ಸ್ಥಾಪನೆ ಮಾಡಲಾಗಿದೆ.

ಬಸವಣ್ಣನವರು ಆದರ್ಶ ವ್ಯಕ್ತಿ ಆಗಿದ್ದರಿಂದ ಲೆನಿನ್, ಕಾರ್ಲ್ ಮಾರ್ಕ್ಸ್, ಸಾಕ್ರೆಟೀಸ್, ಮಾರ್ಟಿನ್ ಲೂಥರ್ ಕಿಂಗ್ ಅವರಂಥ ವಿಚಾರವಾದಿಗಳಿಗೆ ಅವರ ಅನುಯಾಯಿಗಳು ಹೋಲಿಕೆ ಮಾಡಿಕೊಳ್ಳುತ್ತಿದ್ದಾರೆ.

ನಮ್ಮ ದೇಶದ ಅಂಬೇಡ್ಕರ್ ಅವರ ವಿಚಾರಗಳು ಬಸವಣ್ಣನವರ ವಿಚಾರಗಳು ಸಾಮ್ಯತೆ ಹೊಂದಿವೆ ಎಂಬುದನ್ನು ಗುರುತಿಸಲು ಸಾಧ್ಯ ಆಗಿದ್ದು ಬಸವಣ್ಣ ಆದರ್ಶ ವ್ಯಕ್ತಿ ಆಗಿದ್ದರಿಂದ.

ಇಂಥಹ ಮಹಾಮಹಿಮಾ ಪುರುಷ, ವಿಶ್ವಗುರು, ಸಾಂಸ್ಕೃತಿಕ ನಾಯಕ ಬಸವಣ್ಣನವರ ವಿಚಾರಗಳು ಜಗತ್ತನ್ನೇ ಬೆಳಗುವ ದಿನ ಹತ್ತಿರದಲ್ಲೇ ಇದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FYCnBXoFfiK0GH4dAJvoia/

Share This Article
Leave a comment

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ, ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ತಾಲ್ಲೂಕು