ಅತ್ತಿವೇರಿಯ ಪೂಜ್ಯ ಬಸವೇಶ್ವರಿ ಮಾತಾಜಿಯವರು ನೀಡುತ್ತಿರುವ ‘ಬಸವಣ್ಣನವರ ಜೀವನ ದರ್ಶನ ಪ್ರವಚನ’ದ ತುಣುಕು.
ನಂಜನಗೂಡು
ಪುರುಷರಿಗಿಂತ ಮಹಿಳೆಯರು ನೂರು ಪಟ್ಟು ಬಸವಣ್ಣನವರನ್ನು ಗೌರವಿಸಬೇಕು. ಏಕೆಂದರೆ ಇಡೀ ವಿಶ್ವದಲ್ಲಿಯೇ ಮಹಿಳೆಯರ ಪರವಾಗಿ ಪ್ರಶ್ನೆ ಎತ್ತಿದ್ದ ಮೊಟ್ಟ ಮೊದಲ ವ್ಯಕ್ತಿಯೆಂದರೆ ಬಸವಣ್ಣ.
ಮಹಿಳೆಯರು ಶೂದ್ರರಾದ್ದರಿಂದ ಅವರಿಗೆ ಉಪನಯನವಿಲ್ಲ ಎಂದು ಪುರೋಹಿತರು ಹೇಳಿದಾಗ, ನಾನು ಶೂದ್ರಳ ಹೊಟ್ಟೆಯಿಂದ ಹುಟ್ಟಿದ್ದರೆ, ನಾನು ಹೇಗೆ ಶ್ರೇಷ್ಠ? ಎಂದು ಕೇಳಿದರು.
ನಿನ್ನ ಶೂದ್ರತ್ವ ಕಳೆಯಲೆಂದೇ ಶ್ರೇಷ್ಠಗೊಳಿಸಲೆಂದೇ ದ್ವಿಜ ಸಂಸ್ಕಾರ ನಡೆಯುತ್ತಿದೆ ಎಂದು ಪುರೋಹಿತರು ಹೇಳಿದಾಗ, ಅಕ್ಕನಿಗೆ ಇಲ್ಲದ್ದು ನನಗೆ ಬೇಡ ಎಂದು ಬಸವಣ್ಣ ಹೇಳಿದರು.
ವಿಶ್ವ ಬಸವಸೇನೆಯ ವತಿಯಿಂದ ಬಸವ ಮಾಸ ಕಾರ್ಯಕ್ರಮದ ಅಂಗವಾಗಿ ಪ್ರವಚನ ನಡೆಯುತ್ತಿದೆ.