ಬೇಡ ಜಂಗಮ ಹೆಸರಿನಲ್ಲಿ ಇಡೀ ದಲಿತ ಸಮುದಾಯವನ್ನು ವಂಚಿಸುತ್ತಿದ್ದಾರೆ:
ಸಿ.ಎಸ್. ದ್ವಾರಕಾನಾಥ್
ಬೆಂಗಳೂರು
ಬೇಡುವ ಜಂಗಮ ಮತ್ತು ಬೇಡ ಜಂಗಮ ಒಂದೇ ಅಲ್ಲ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ ಶನಿವಾರ ಹೇಳಿದರು.
ಅಲೆಮಾರಿ ಬುಡಕಟ್ಟು ಮಹಾಸಭಾ ಶನಿವಾರ ಹಮ್ಮಿಕೊಂಡಿದ್ದ ‘ಬುಡ್ಗಜಂಗಮ, ಬೇಡ ಜಂಗಮ, ಬೇಡುವ ಜಂಗಮ’ ದುಂಡು ಮೇಜಿನ ಸಭೆಯಲ್ಲಿ ಮಾತನಾಡುತ್ತ ಬೇಡ ಜಂಗಮ, ಬುಡ್ಗ ಜಂಗಮರು ಮಾಂಸಾಹಾರಿಗಳು, ವೀರಶೈವ ಜಂಗಮರು ಸಸ್ಯಾಹಾರಿಗಳು, ಎಂದು ಹೇಳಿದರು.
ವೀರಶೈವ ಜಂಗಮರು ಭಕ್ತರ ಮನೆಯಲ್ಲಷ್ಟೇ ಬೇಡುತ್ತಾರೆ. ಅದೂ ಸ್ವಯಂ ಪಾಕ ಭಿಕ್ಷೆ (ಅಡುಗೆಗೆ ಬೇಕಾದ ವಸ್ತುಗಳನ್ನು ನೀಡುವುದು) ಮತ್ತು ಕಜ್ಜಾಯದಲ್ಲಿ ಭಿಕ್ಷೆ (ಅಡುಗೆ ಮಾಡಿ ನೀಡುವುದು) ಈ ಎರಡೇ ಭಿಕ್ಷೆಗಳು ಅವರಲ್ಲಿರುವುದು.
1906ರಲ್ಲಿ ಮೈಸೂರು ಮಹಾರಾಜರಿಗೆ ಲಿಂಗಾಯತರಲ್ಲಿಯೂ ಚಾತುರ್ವರ್ಣ ಪದ್ಧತಿ ಇದೆ ಎಂದು ಅರ್ಜಿ ಸಲ್ಲಿಸಿದವರೇ ಇಂದು ಬೇಡುವ ಜಂಗಮ ಹೆಸರಲ್ಲಿ ಪರಿಶಿಷ್ಟ ಜಾತಿ ಮೀಸಲಾತಿ ಪಡೆಯಲು ಹೊರಟಿದ್ದಾರೆ.
ಅರ್ಜಿಯಲ್ಲಿ ಅವರು ಆರಾಧ್ಯರು, ಐನೋರು, ಜಂಗಮರೆಲ್ಲ ವೀರಶೈವರ ಬ್ರಾಹ್ಮಣರು, ಕೆಳದಿ, ಇಕ್ಕೇರಿಗಳಂತಹ ರಾಜರ ಮನೆತನಗಳು ಕ್ಷತ್ರಿಯರು, ಬಣಜಿಗರಂತಹ ಕೆಲವು ಪಂಗಡಗಳು ವೈಶ್ಯರು, ಉಳಿದವರು ಶೂದ್ರರು ಎಂದು ಪ್ರತಿಪಾದಿಸಿದ್ದರು, ಎಂದು ಜಾಮದಾರ್ ವಿವರಿಸಿದರು.

ಅಲೆಮಾರಿ ಬುಡಕಟ್ಟು ಮಹಾಸಭಾ ಗೌರವಾಧ್ಯಕ್ಷ ಸಿ.ಎಸ್. ದ್ವಾರಕಾನಾಥ್ ಮಾತನಾಡಿ ಬೇಡ ಜಂಗಮ ಹೆಸರಿನಲ್ಲಿ ಇಡೀ ದಲಿತ ಸಮುದಾಯವನ್ನು ವಂಚಿಸುತ್ತಿದ್ದಾರೆ ಎಂದು ಹೇಳಿದರು.
ಅತ್ಯಂತ ನಿಕೃಷ್ಟವಾದ ಅಲೆಮಾರಿ ಸಮುದಾಯದ ಸವಲತ್ತುಗಳನ್ನು ಅತ್ಯಂತ ಶ್ರೀಮಂತವಾದ ಬೇಡುವ ಜಂಗಮರು ತೆಗೆದುಕೊಳ್ಳುತ್ತಿರುವುದು ಅಕ್ಷಮ್ಯ ಇದರ ವಿರುದ್ಧ 30 ವರ್ಷಗಳಿಂದ ಹೋರಾಟ ನಡೆಯುತ್ತಿದ್ದರೂ ಅದು ನಿಂತಿಲ್ಲ. ಸುಳ್ಳು ಜಾತಿ ಪತ್ರ ಪಡೆದಿರುವವರು ಎಲ್ಲಾ ಇಲಾಖೆಗಳಲ್ಲಿಯೂ ಉನ್ನತ ಸ್ಥಾನದಲ್ಲಿ ಬಂದು ಕುಳಿತ್ತಿದ್ದಾರೆ.
ಜಿಲ್ಲಾಧಿಕಾರಿಗಳು ಎಲ್ಲ ಜಾತಿ ಪ್ರಮಾಣಪತ್ರಗಳನ್ನು ಮರುಪರಿಶೀಲನೆ ಮಾಡಬೇಕು. ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರಿ ಹುದ್ದೆಗಳನ್ನು ಪಡೆದವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಅವರಿಗೆ ಶಿಕ್ಷೆಯಾದರೆ ಮುಂದೆ ಸುಳ್ಳು ಜಾತಿ ಪ್ರಮಾಣಪತ್ರ ಪಡೆಯುವುದು ಕಡಿಮೆಯಾಗಲಿದೆ.

ಇಪ್ಪತ್ತು-ಇಪ್ಪತ್ತೈದು ಸಾವಿರ ಇರಬಹುದಾದ ಬೇಡ ಜಂಗಮರ ಸಂಖ್ಯೆ ಕಳೆದ ಕೆಲವು ವರ್ಷಗಳಲ್ಲಿ ನಾಲ್ಕೂವರೆ ಲಕ್ಷಕ್ಕೂ ಹೆಚ್ಚಿಗೆ ಆಗಿರುವುದು ಅನ್ಯಾಯ, ಎಂದು ಹೇಳಿದರು.
ಶರಣ ತತ್ವ ಚಿಂತಕ ಶಿವಶರಣಪ್ಪ ಮಾತನಾಡಿ, ‘ಲಿಂಗಾಯತ ಧರ್ಮ ಸ್ವತಂತ್ರ ಧರ್ಮ. ಅದಕ್ಕೆ ಮಾನ್ಯತೆ ಪಡೆಯಲು ಹೊರಟರೆ ಅಡ್ಡಗಾಲು ಇಡುವವರೇ ಇಲ್ಲಿ ನಾವು ಬೇಡುವ ಜಂಗಮರು ಪರಿಶಿಷ್ಟ ಜಾತಿಯವರು ಎಂದು ಹೇಳಿಕೊಂಡು ದಲಿತರ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದ್ದಾರೆ’ ಎಂದರು.
ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾದ ಅಧ್ಯಕ್ಷರಾದ ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ನಾಗರಾಜ ಮತ್ತಿತರರು ಉಪಸ್ಥಿತರಿದ್ದರು.
1906ರಲ್ಲಿ ಮೈಸೂರು ಮಹಾರಾಜರಿಗೆ ಲಿಂಗಾಯತರಲ್ಲಿಯೂ ಚಾತುರ್ವರ್ಣ ಪದ್ಧತಿ ಇದೆ ಎಂದು ಅರ್ಜಿ ಸಲ್ಲಿಸಿದವರೇ ಇಂದು ಬೇಡುವ ಜಂಗಮ ಹೆಸರಲ್ಲಿ ಪರಿಶಿಷ್ಟ ಜಾತಿ ಮೀಸಲಾತಿ ಪಡೆಯಲು ಹೊರಟಿದ್ದಾರೆ.
ಅರ್ಜಿಯಲ್ಲಿ ಅವರು ಆರಾಧ್ಯರು, ಐನೋರು, ಜಂಗಮರೆಲ್ಲ ವೀರಶೈವರ ಬ್ರಾಹ್ಮಣರು, ಕೆಳದಿ, ಇಕ್ಕೇರಿಗಳಂತಹ ರಾಜರ ಮನೆತನಗಳು ಕ್ಷತ್ರಿಯರು, ಬಣಜಿಗರಂತಹ ಕೆಲವು ಪಂಗಡಗಳು ವೈಶ್ಯರು, ಉಳಿದವರು ಶೂದ್ರರು ಎಂದು ಪ್ರತಿಪಾದಿಸಿದ್ದರು, ಎಂದು ಜಾಮದಾರ್ ವಿವರಿಸಿದರು. ಈ ನಿಮ್ಮ ಹೇಳಿಕೆ ಶತ ಪ್ರತಿಶತ ಸತ್ಯವಾಗಿದೆ. ಅದಕ್ಕೆ ವೀರಶೈವರೂ,ಧರ್ಮದ ಹೆಸರಿನಲ್ಲಿ ಲಿಂಗಾಯತ ಪದ ಬಳಕೆ ಮಾಡುವ ಮೂಲಕ ಬಸವಣ್ಣನವರನ್ನು ಗುರು ಎಂದು ಹೇಳಲು ಆಗುವುದಿಲ್ಲ. ಅದಕ್ಕೆ ವೀರಶೈವ ಉಳಿಸಿ ಅವರೇ ಬೇರೆ, ನಾವೇ ಲಿಂಗಾಯತೆರೆ ಬೇರೆ . ಅದಕ್ಕೆ ಜಾಗತಿಕ ಮಟ್ಟದಲ್ಲಿ ಪ್ರಥಮ J L M ರಚನೆ ಮಾಡಿದ್ದಾರೆ. ತಮ್ಮ ಮನದ ಮಾತು ಕೇಳಿ ಎಲ್ಲರಿಗೂ ಸಮಬಾಳು ಸಮಪಾಲು. ಶರಣು ಶಣಾರ್ಥಿ
ಎಸ್ ಎಂ . ಜಾಮದಾರ ಲಿಂಗಾಯತ ಧರ್ಮದ ಬಗ್ಗೆ ಹೇಳಿಕೆ ವಾದ ಸತ್ಯವಾಗಿದೆ
ಬಸವಣ್ಣನವರ ಮತ್ತು ಶರಣರ ಸಂಸ್ಕಾರಗಳನ್ನು ರೂಢಿಸಿಕೊಂಡು ಮೂಢ ನಂಬಿಕೆಗಳನ್ನು ಆಚರಣೆ ಮಾಡುವುದಿಲ್ಲ.. ಅವರೇ ನಿಜವಾದ ಲಿಂಗಾಯತರು
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ಗೌತಮಮುನಿಗೆ ಗೋವಧೆಯಾಯಿತ್ತು.
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ಬಲಿಗೆ ಬಂಧನವಾಯಿತ್ತು.
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ಕರ್ಣನ ಕವಚ ಹೋಯಿತ್ತು.
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ದಕ್ಷಂಗೆ ಕುರಿದಲೆಯಾಯಿತ್ತು.
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ಪರಶುರಾಮನು ಸಮುದ್ರಕ್ಕೆ ಗುರಿಯಾದನು.
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ನಾಗಾರ್ಜುನನ ತಲೆ ಹೋಯಿತ್ತು.
ದೇವಾ ಭಕ್ತನೆಂದು ನಂಬಿದ ಕಾರಣ
ನಮ್ಮ ಕೂಡಲಸಂಗನ ಶರಣರು ಕೈಲಾಸವಾಸಿಗಳಾದರು. ಈ ಕಾರಣಕ್ಕಾಗಿ ಬ್ರಾಹ್ಮಣರು beda jangamaragi ಬಸವ ಬಳಗದ ಹೆಸರಿನಲ್ಲಿ ಜಂಗಮರಿಗೆ ದೊರಕುವಯೆಲ್ಲ ಸೌಲಭ್ಯ ಪಡೆದಿದ್ದರು. ಆದರೆ ಮೂಢ ಜನರಿಗೆ ಯಾಮಾರಿಸಿ, ಲಿಂಗಾಯತರ ಹೆಸರಿನಲ್ಲಿ ಗಿರಾಕಿಗಳಿಂದ ಬೀಕ್ಷ ಬೇಡಿ, ಜೀವನ ಸಾಗಿಸುತ್ತಿದ್ದಾರೆ. ಬಹಳ ವಿಷಾದಕರ ಸಂಗತಿ. ದೇವರು ಅವರಿಗೆ ಒಳ್ಳೆಯದು ಮಾಡಲಿ.
ಜಮಾದಾರ ಸಾಹೇಬರ ವಿಚಾರ ತಾವುಗಳು ನಿಷ್ಠಾವಂತರಾಗಿದ್ದರೆ ತಾವುಗಳು ಸರಕಾರದಿಂದ ಪಡೆಯುವ ಸೌಲಭ್ಯಗಳೆಲ್ಲವನ್ನು ಎಷ್ಟು ದಿನದಿಂದ ತ್ಯಾಗ ಮಾಡಿದ್ದೀರಿ ಎಂಬುದು ಬಹಿರಂಗ ಪಡಿಸಿರಿ. ಊಟಮಾಡುವವರ ಮುಂದೆ ವಾಂತಿ ಮಾಡುವುದನ್ನು ಬಿಡಿರಿ. ಜಂಗಮರ ಕುರಿತು ಮಾತನಾಡುವ ನೈತಿಕ ಹಕ್ಕು ನಿಮಗಿಲ್ಲ.
ಬಿಡ್ರಿ ಹಿರೇಮಠ್. ನಾಚಿಕೆ ಆಗ್ಬೇಕು ಬೇಡ ಬುಡುಗ ಜಂಗಮರ ಹೆಸರಿನಲ್ಲಿ ಅವರ ಸವಲತ್ತು ಕಸಿದುಕೊಳ್ಳಲು. ಎಲ್ಲರಿಗೂ ಗೊತ್ತು ನಿಮ್ಮ ಅಸಲೀಯತ್ತು.
ಬೇಡ ಜಂಗಮ ಬುಡುಗ ಜಂಗಮ ಇದರಲ್ಲಿ ತಮಗೆಲ್ಲ ಮಾಹಿತಿ ಇರಬೇಕು ಮಾಹಿತಿ ಇಲ್ಲದ ಕಾರಣ ಈ ತರ ಹೇಳಿಕೆಗಳನ್ನು ಬರುತ್ತದೆ ಮತ್ತು ಸಂವಿಧಾನ ಕೂಡ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಲಿಪ್ತ ರೂಪದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ ಬೇಡ ಜಂಗಮರು ಯಾರು ಪ್ರಶ್ನೆಯಾಗಿದೆ ನಾನು ಉತ್ತರ ಕೊಡುತ್ತೇನೆ
ಬೇಡ ಜಂಗಮ ಹುಡುಗ ಜಂಗಮ ಜಾತಿಯವರು ಗುಲ್ಬರ್ಗ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ತಮ್ಮ ಪತ್ರ ಸಂಖ್ಯೆ ಕಂದಾಯ ಸಂಕೀರ್ಣ 36. 88,89 ದಿನಾಂಕ 17 /4 /1989 ಮೂಲಕ ತಿಳಿಸಿರುತ್ತಾರೆ. ರೈಯಚೂರ್ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು ತಮ್ಮ ಪತ್ರ ಸಂಖ್ಯೆ ಬೇಸಿಕಾರ 8 ಪರಿಶಿಷ್ಟ ಜಾತಿ ಸಿ ಆರ್ 26 / 88 89 ಮೂಲಕ ತಮಗೆ ತಾಲೂಕಿನ ಕ್ಷೇತ್ರ ಅಭಿವೃದ್ಧಿ ಅಧಿಕಾರಿಗಳಿಂದ ಬಂದಿರುವ ಮಾಹಿತಿಯನ್ನು ಕರ್ನಾಟಕ ಗೆಜೆಟ್ ವರದಿ ಪ್ರಕಾರ 26/8/ 1989 ರಂದು ಸೂರ್ಯಕಾಂತ್ ಕಾಮತ್ ವರದಿ ಪ್ರಕಾರ ಪಂಚಪೀಠ ಸಂಬಂಧ ಪಟ್ಟವರೇ ಬೇಡ ಜಂಗಮರು ಎಂದು ವರದಿ ಹೇಳುತ್ತದೆ ಮತ್ತು ಹಳ್ಳಿಗಳಲ್ಲಿ ಸ್ವಾಮಿಗಳು ಮಠಪತಿ ಚಿಕ್ಕಮಠ ಹಿರೇಮಠ ಎಂದು ಅನ್ನುತ್ತಾರೆ ಈ ಪ್ರಕಾರ ನಾವು ಬೇಡ ಜಂಗಮರೆಂದು ದಾಖಲತೆ ಸಾತ ಹೇಳುತ್ತೇವೆ ನಾವು ಬೇಡ ಜಂಗಮರು ಅಲ್ಲ ಅಂತ ನೀವು ಪ್ರೂ ಮಾಡಿ ಸುಮ್ಮನೆ ಬಾಯಿಮಾತಿಲ್ಲಿ ಹೇಳುವುದಲ್ಲ ದಾಖಲೆ ತೆಗೆದುಕೊಂಡು ಬನ್ನಿ ನಾವು ಹೇಳುತ್ತೇವೆ ಬೇಡ ಜಂಗಮರು ಎಂದು ಮತ್ತು ಲಿಂಗಾಯತ ಸಮುದಾಯದಲ್ಲಿ ಹಸಿ ಭಿಕ್ಷೆಯನ್ನು ಬಿಡುತ್ತೇವೆ ಹೆಚ್ಚು ಎಂ ಇವರಲ್ಲಿ ಧಾನ್ಯ ಭಿಕ್ಷೆ ಬೇಡುತ್ತೇವೆ ಮತ್ತು ಇವರ ಮದುವೆ ಕೂಡ ಮಾಡುತ್ತೇವೆ ಅಂದಮೇಲೆ ನೀವು ತಿಳಿದುಕೊಳ್ಳಬೇಕು ನಿಮ್ಮ ಹತ್ತಿರ ಬಂದು ನಾವು ಭಿಕ್ಷೆ ಬೇಡುತ್ತೇವೆ. ಧನ್ಯವಾದಗಳು
*ಜಾಮದಾರರ ವಾಲ್ ಗೆ ನೇರವಾಗಿ ಪ್ರತಿಕ್ರಿಯಿಸಿದ್ದು…*
ಸಂವಿಧಾನ ವಿರೋಧಿಯಾಗಿ ಅಹಂಕಾರದಿಂದ ಮಾತನಾಡುವ ಚಪಲ ಇದ್ದಂತಿದೆ.. ಆತ್ಮಸಾಕ್ಷಿಯಾಗಿ ಮಾತನಾಡಿದರೆ, ಜಾಮದಾರರು ಲಿಂಗಾಯತ ಜoಗಮರೇ ಬೇಡಜಂಗಮರು ಎಂದು ಹೇಳಲೇಬೇಕಾಗುತ್ತದೆ..! ಏಕೆಂದರೆ, ಎಲ್ಲ ಸಂವಿಧಾನಾತ್ಮಕ ದಾಖಲೆಗಳನ್ನು ನೋಡಿಯೂ ಈ ರೀತಿ ಮಾತನಾಡುವುದು ಸಭ್ಯತೆಯಲ್ಲ..
ಸತ್ಯವನ್ನು ಒಪ್ಪಿಕೊಳ್ಳುವ ಮನಸ್ಥಿತಿ ಇಲ್ಲದಾಗ ಮನುಷ್ಯ ಕುಬ್ಜನಾಗುತ್ತಾನೆ..
ವಾಸ್ತವಿಕ ಮರೆತು, ಜಂಗಮರು ಶ್ರೇಷ್ಠರು ಎಂದು ಹೊನ್ನಶೂಲಕ್ಕೆ ಏರಿಸುವ ಪರಿ ಜಾಮದಾರರ ತಂತ್ರಗಾರಿಕೆ ಅರ್ಥವಾಗುತ್ತದೆ…!
ಸ್ವತಂತ್ರ ಪೂರ್ವ ಎಲ್ಲ ದಾಖಲೆಗಳಲ್ಲಿ ಜಂಗಮರು Depressed Class, Schedule Caste, Inferior Religious Mendicants ಎಂಬುದಾಗಿ ವರ್ಗೀಕರಿಸಿದ ಸತ್ಯದ ಬಗ್ಗೆ ಮಾತನಾಡುವ ಸಾಮರ್ಥ್ಯವಿಲ್ಲ..!
ಜಂಗಮರು, ಬೇಡಜಂಗಮರಲ್ಲವಾದರೆ, ಕರ್ನಾಟಕ ಸರ್ಕಾರ, ಜಾತಿ ಪಟ್ಟಿಯಲ್ಲಿ ಜಂಗಮ ಜಾತಿಯನ್ನು ಏಕೆ ಸೇರಿಸಿಲ್ಲ..!? ಈ ಹಿಂದೆ 2-3 ಸಲ ಸೇರಿಸಿ ಹಿಂದೆ ಪಡೆದದ್ದೇಕೆ ಎಂಬುದನ್ನು ವಿಚಾರಿಸಿ..!
ಸರ್ವಕಾಲದಲ್ಲೂ ಜನರನ್ನು ದಿಕ್ಕುತಪ್ಪಿಸಲಾಗದು…!
ಆರ್ಟಿಕಲ್ 341, 147 ಬಗ್ಗೆ ಸರಿಯಾದ ಚಿಂತನೆ ವಿವರಿಸಿ..
ಅಸ್ಪೃಶ್ಯತೆ, ಆಹಾರ ಪದ್ಧತಿ ಪರಿಶಿಷ್ಟ ಜಾತಿಗೆ ಮಾನದಂಡವಲ್ಲ..! ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿರುವಿಕೆ ಮಾತ್ರ SC ಗೆ ಮಾನದಂಡ.. ಎಷ್ಟು ಅಂತಾ ಸುಳ್ಳು ಹೇಳುವುದು..!?
ನೀವು ಹೇಳುವುದೆಲ್ಲ, ಸತ್ಯವನ್ನು ಮರೆಮಾಚಿದ ‘ ಹರಿಕಥೆ ‘ ಮಾತ್ರ ಆಗಿರಲು ಸಾಧ್ಯ..!
ಘನತೆಯ ಉತ್ತರ ಮಾತ್ರ ನಿಮ್ಮದಾಗಲಿ ಎಂದು ಆಶಿಸುವಾ..!
ನಿಮ್ಮ ಈ ಕುತಂತ್ರ ಫಲಿಸದು…
ಇದಕ್ಕೆಲ್ಲ ಉತ್ತರ ಸಂವಿಧಾನ..
ಆದಷ್ಟು ಬೇಗ ನ್ಯಾಯ ಸಿಗಲಿದೆ…