ಬೆಳಗಾವಿಯಲ್ಲಿ ವ್ಯಕ್ತಿತ್ವ ವಿಕಸನಕ್ಕಾಗಿ ಬಸವಣ್ಣನವರ ವಚನ ಕಂಠಪಾಠ ಸ್ಪರ್ಧೆ

Basava Media
Basava Media

ಬೆಳಗಾವಿ

ಜಾಗತಿಕ ಲಿಂಗಾಯತ ಮಹಾಸಭಾ ಮಹಾನಗರ ಘಟಕ ಹಾಗೂ ತಾಲೂಕಾ ಘಟಕ ಇವರಿಂದ, ಬೆಳಗಾವಿ ತಾಲೂಕಾ ಮಟ್ಟದಲ್ಲಿ ವ್ಯಕ್ತಿತ್ವ ವಿಕಸನಕ್ಕಾಗಿ, ಗುರು ಬಸವಣ್ಣನವರ ವಚನ ಕಂಠಪಾಠ ಸ್ಪರ್ಧೆಯನ್ನು ದಿನಾಂಕ 02/03/2025ರ ರವಿವಾರದಂದು, ನಗರದ ಶ್ರೀ ಸಿದ್ದರಾಮೇಶ್ವರ ಪ್ರೌಢ ಶಾಲೆ, ಶಿವಬಸವ ನಗರ, ಬೆಳಗಾವಿಯಲ್ಲಿ ಮುಂಜಾನೆ 10 ಗಂಟೆಗೆ ಆಯೋಜಿಸಲಾಗಿದೆ.

ವಿಜೇತರಿಗೆ,

  1. ಪ್ರಥಮ ಬಹುಮಾನ -3001ರೂ.
  2. ದ್ವಿತೀಯ ಬಹುಮಾನ -2001ರೂ.
  3. ತೃತೀಯ ಬಹುಮಾನ -1001ರೂ.
    ನೀಡಲಾಗುವುದು. ಸ್ಪರ್ಧೆಯ ನಿಯಮಗಳು
  4. ಸ್ಪರ್ಧೆಯು ಬೆಳಗಾವಿ ತಾಲೂಕಿಗೆ ಮಾತ್ರ ಸೀಮಿತವಾಗಿರುತ್ತದೆ.
  5. ಗುರು ಬಸವಣ್ಣನವರ ವಚನಗಳನ್ನು ಮಾತ್ರ ಹೇಳುವುದು.
  6. ಸ್ಪರ್ಧಾಳುಗಳಿಗೆ ಉಚಿತ ಪ್ರವೇಶ.
  7. ಭಾಗವಹಿಸುವ ಸ್ಪರ್ದಾಳುಗಳಿಗೆ ಯಾವುದೇ ರೀತಿಯ ಖರ್ಚು ಕೊಡಲಾಗುವುದಿಲ್ಲ.
  8. ತಾವು ಹೇಳುವ ವಚನಗಳ ಒಂದು ಲಿಖಿತ ಅಥವಾ ಮುದ್ರಿತ ಪ್ರತಿಯನ್ನು ಸಂಘಟಕರಲ್ಲಿ ನೀಡುವುದು.
  9. ವಚನಗಳನ್ನು ಹೇಳುವ ಗರಿಷ್ಠ 30 ನಿಮಿಷ ಮತ್ತು ಮಧ್ಯದಲ್ಲಿ ನೆನಪಿಸಿಕೊಳ್ಳಲು 60 ಸೆಕೆಂಡ್ ಮಾತ್ರ ಕಾಲಾವಕಾಶ.
  10. ರಾಜ್ಯಮಟ್ಟದಲ್ಲಿ ಭಾಲ್ಕಿ ಹಿರೇಮಠದ ಮತ್ತು ಜಿಲ್ಲಾಮಟ್ಟದಲ್ಲಿ ಸಂಚಾರಿ ಗುರುಬಸವ ಬಳಗ ಏರ್ಪಡಿಸಿದ ಸ್ಪರ್ಧೆಯಲ್ಲಿ ಭಾಗವಹಿಸಿದ ವಿಜೇತರಿಗೆ ಅವಕಾಶ ಇರುವುದಿಲ್ಲ.
  11. ವಯಸ್ಸಿನ ನಿರ್ಬಂಧವಿಲ್ಲದೆ ಎಲ್ಲ ವಯಸ್ಸಿನ ಆಸಕ್ತರು ಭಾಗವಹಿಸಬಹುದು.
  12. ತೀರ್ಪುಗಾರರ ನಿರ್ಣಯವೇ ಅಂತಿಮ.
  13. ಸ್ಪರ್ಧೆಯಲ್ಲಿ ಭಾಗವಹಿಸುವವರು 25/02/2025 ರೊಳಗಾಗಿ ಹೆಸರು ನೋಂದಾಯಿಸಿಕೊಳ್ಳಬೇಕು.
  14. ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದವರನ್ನು ಸಂಚಾರಿ ಗುರುಬಸವ ಬಳಗ ನಡೆಸುವ ಜಿಲ್ಲಾಮಟ್ಟದ ವಚನ ಕಂಠಪಾಠ ಸ್ಪರ್ಧೆಗೆ ಆಯ್ಕೆ ಮಾಡಲಾಗುವುದು.
  15. ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ಸ್ಪರ್ಧಿಗಳಿಗೆ ನಗದು ಬಹುಮಾನ ಹಾಗೂ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು.

ವಿವರಗಳಿಗೆ ಈ ಕೆಳಗಿನವರನ್ನು ಸಂಪರ್ಕಿಸಬೇಕು.

1) ಶರಣ ಸಿ.ಎಂ. ಬೂದಿಹಾಳ-9980385079
ಪ್ರಧಾನ ಕಾರ್ಯದರ್ಶಿ ಜಾಗತಿಕ ಲಿಂಗಾಯತ ಮಹಾಸಭಾ, ನಗರ ಘಟಕ
2) ಶರಣ ಆನಂದ ಯಲ್ಲಪ್ಪ ಕೊಂಡಗುರಿ-8861872272
ಪ್ರಧಾನ ಕಾರ್ಯದರ್ಶಿ ಜಾಗತಿಕ ಲಿಂಗಾಯತ ಮಹಾಸಭಾ, ತಾಲೂಕ ಘಟಕ ಬೆಳಗಾವಿ.

Share This Article
Leave a comment

Leave a Reply

Your email address will not be published. Required fields are marked *