ನಿಜಾಚರಣೆ: ಬೆಂಗಳೂರಿನಲ್ಲಿ ನೂತನ ಮನೆಯ ನಿರ್ಮಾಣ ಬಸವ ತತ್ವದಿಂದ ಶುರು

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ಮಹಾನಗರದ ಗೊಲ್ಲರಹಟ್ಟಿ ನಿವಾಸಿ ರಮೇಶ ಚಿಕ್ಕವಡ್ಡಟ್ಟಿ ಅವರು ತಮ್ಮ ನಿವೇಶನದಲ್ಲಿ ಮನೆಯ ನೂತನ ಕಟ್ಟಡ ಪ್ರಾರಂಭವನ್ನು ಬಸವ ತತ್ವ ಆಚರಣೆ ಪ್ರಕಾರ ಮಾಡಿದರು.

ಮೂಲತಃ ಗದಗ ಜಿಲ್ಲೆ, ಮುಂಡರಗಿ ತಾಲೂಕಿನಿಂದ ಬಂದು, ಕಳೆದ 25 ವರ್ಷಗಳಿಂದ ಚಿತ್ರ ಕಲಾವಿದರಾಗಿ, ಇದೀಗ ಮೂರ್ತಿ ಕಲಾವಿದರಾಗಿ ಕಾಯಕ ಮಾಡುತ್ತಿದ್ದಾರೆ. ಗಳಿಸಿದ ಹಣದಿಂದ ನಿವೇಶನವೊಂದನ್ನು ಖರೀದಿಸಿದ್ದರು.

ರಮೇಶ ಮತ್ತು ಅವರ ಕುಟುಂಬ ಸದಸ್ಯರು ಬಸವಾದಿ ಶರಣರ ಮಾರ್ಗದಲ್ಲಿ ಬದುಕುತ್ತಿರುವ ಲಿಂಗಾಯತ ಕುರುಬ ಸಮುದಾಯದವರಾಗಿದ್ದಾರೆ.

ವಚನಮೂರ್ತಿ ಶ್ರೀಶೈಲ ಮಸೂತೆ ಅವರು ಕುಟುಂಬ ಸದಸ್ಯರಿಂದ ಬಸವಣ್ಣನವರ ಭಾವಚಿತ್ರಕ್ಕೆ ಗೌರವದ ಪೂಜೆ ಮಾಡಿಸಿ, ತಾವು ಇಷ್ಟಲಿಂಗ ಪೂಜೆ ಮಾಡಿಕೊಂಡು, ಶರಣರ ವಚನಗಳನ್ನು ಪಠಣ ಮಾಡಿದರು. ಕುಟುಂಬ ಸದಸ್ಯರು ಬಸವ ಭಾವಚಿತ್ರದೊಂದಿಗೆ ನಿವೇಶನದಲ್ಲಿ ಪ್ರದಕ್ಷಿಣೆ ಹಾಕಿದರು.

ಕುಟುಂಬ ಸದಸ್ಯರಾದ ನಿರ್ಮಲಾ ಚಿಕ್ಕವಡ್ಡಟ್ಟಿ, ಪ್ರೊ. ಬಸವರಾಜ ಪೂಜಾರ, ಹೇಮಾ ಪೂಜಾರ, ದೇವೇಂದ್ರ ಚಿಕ್ಕವಡ್ಡಟ್ಟಿ, ಹೇಮಾವತಿ, ಮಕ್ಕಳು, ಬಂಧು-ಮಿತ್ರರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/EeBeeIO5TisIVCASg0Dpbn

Share This Article
Leave a comment

Leave a Reply

Your email address will not be published. Required fields are marked *