ಬೃಹತ್ ಬೀದರ್ ಅಭಿಯಾನ: ಸ್ವತಂತ್ರ ಧರ್ಮದ ಬೇಡಿಕೆ ಮತ್ತೆ ಮುನ್ನೆಲೆಗೆ

ಬಸವ ಮೀಡಿಯಾ
ಬಸವ ಮೀಡಿಯಾ
26Posts
Auto Updates

ಅಭಿಯಾನದ ಮೂರನೇ ದಿನದ ಮುಖ್ಯ ಬೆಳವಣಿಗೆಗಳು.

Contents
ಬಸವ ಭೂಮಿಯಲ್ಲಿ ಮತ್ತೆ ಮಾರ್ದನಿಸಿದ ಸ್ವತಂತ್ರ ಧರ್ಮದ ಕೂಗುಬಸವ ಸಂಸ್ಕೃತಿ ವಿಶ್ವದಲ್ಲೇ ಶ್ರೇಷ್ಠ ಸಂಸ್ಕೃತಿ : ಈಶ್ವರ ಖಂಡ್ರೆಬಸವರಾಜ ಧನ್ನೂರಗೆ ಸಮಾರೋಪ ಸಮಾರಂಭದ ಜವಾಬ್ದಾರಿಧರ್ಮದ ಹೆಸರಿನ ಶೋಷಣೆ ವಿರುದ್ಧ ಎಚ್ಚರಿಸಿದ ವಚನಗಳು: ಗದಗ ಶ್ರೀಮೂರನೇ ದಿನದ ವೇದಿಕೆ ಕಾರ್ಯಕ್ರಮ ಲೈವ್ಬೀದರಿನಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ವಿಜೃಂಭಣೆಯ ಚಾಲನೆವೇದಿಕೆ ಕಾರ್ಯಕ್ರಮದಲ್ಲಿ ಸಾವಿರಾರು ಜನಸಮಾರಂಭ ವೇದಿಕೆ ತಲುಪಿದ ಮೆರವಣಿಗೆಸಾರ್ವಜನಿಕರಿಂದ ಜಯಘೋಷ, ಮೆರವಣಿಗೆಗೆ ಸ್ವಾಗತಅಲಂಕೃತ ಲಿಂಗಾಯತ ವಾಹನಗಳುವಚನ ಹೊತ್ತು ಸಾಗಿದ ಶರಣೆಯರುಮೆರವಣಿಗೆಯ ಸಂಭ್ರಮದ ದೃಶ್ಯಗಳುಇಳಕಲ್ ಸೀರೆ, ಬಿಳಿ ಧೋತಿ, ಬಿಳಿ ಪೇಟಮೆರವಣಿಗೆಗೆ ಬಲೂನ್ ಹಾರಿಸಿ ಚಾಲನೆಬಸವರಥ ಮೆರವಣಿಗೆಯ ಮುಖ್ಯ ಆಕರ್ಷಣೆಬೃಹತ್ ಮೆರವಣಿಗೆಗೆ ಭರದಿಂದ ನಡೆಯುತ್ತಿರುವ ತಯಾರಿಸಂವಾದ ಕಾರ್ಯಕ್ರಮ ಮುಕ್ತಾಯಬಸವಣ್ಣ ಸಾಂಸ್ಕೃತಿಕ ನಾಯಕ ಹೇಗೆ?75 ವರ್ಷವಾದರೂ ಭಾಲ್ಕಿ ಶ್ರೀಗಳು ದಣಿವಿಲ್ಲದೆ ದುಡಿಯುತ್ತಿರುವುದು ಹೇಗೆ?ಯುದ್ದಗಳನ್ನು ತಡೆಗಟ್ಟಲು ಶರಣರ ಸಂದೇಶವೇನುಬಸವಣ್ಣನವರ ಭಾವಚಿತ್ರ ಯಾಕಿಡುತ್ತಿಲ್ಲ?ದೂರದ ಊರುಗಳಿಂದ ಬಂದ ಶರಣರು ಕನ್ನಡದಲ್ಲಿ ವಚನ ಬರೆದದ್ದು ಏಕೆ?ಸಂವಾದ ಶುರುವಾಗಿದೆಪೂಜ್ಯ ನಿಜಗುಣ ಶ್ರೀಗಳಿಂದ ಸ್ವಾಗತತುಂಬಿ ತುಳುಕುತ್ತಿರುವ ಸಭಾಂಗಣಬೀದರಿನಲ್ಲಿ ಬಸವ ಸಂಸ್ಕೃತಿ ಅಭಿಯಾನ ಚಾಲನೆಯಾಗಿದೆ.

7 hr 34 min agoSeptember 4, 2025 8:46 am

ಬಸವ ಭೂಮಿಯಲ್ಲಿ ಮತ್ತೆ ಮಾರ್ದನಿಸಿದ ಸ್ವತಂತ್ರ ಧರ್ಮದ ಕೂಗು

7 hr 32 min agoSeptember 4, 2025 8:47 am

ಬಸವ ಸಂಸ್ಕೃತಿ ವಿಶ್ವದಲ್ಲೇ ಶ್ರೇಷ್ಠ ಸಂಸ್ಕೃತಿ : ಈಶ್ವರ ಖಂಡ್ರೆ

7 hr 33 min agoSeptember 4, 2025 8:47 am

ಬಸವರಾಜ ಧನ್ನೂರಗೆ ಸಮಾರೋಪ ಸಮಾರಂಭದ ಜವಾಬ್ದಾರಿ

7 hr 34 min agoSeptember 4, 2025 8:45 am

ಧರ್ಮದ ಹೆಸರಿನ ಶೋಷಣೆ ವಿರುದ್ಧ ಎಚ್ಚರಿಸಿದ ವಚನಗಳು: ಗದಗ ಶ್ರೀ

19 hr 19 min agoSeptember 3, 2025 8:01 pm

ಮೂರನೇ ದಿನದ ವೇದಿಕೆ ಕಾರ್ಯಕ್ರಮ ಲೈವ್

20 hr 3 min agoSeptember 3, 2025 7:16 pm

ಬೀದರಿನಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ವಿಜೃಂಭಣೆಯ ಚಾಲನೆ

21 hr 31 min agoSeptember 3, 2025 6:49 pm

ವೇದಿಕೆ ಕಾರ್ಯಕ್ರಮದಲ್ಲಿ ಸಾವಿರಾರು ಜನ

21 hr 6 min agoSeptember 3, 2025 6:14 pm

ಸಮಾರಂಭ ವೇದಿಕೆ ತಲುಪಿದ ಮೆರವಣಿಗೆ

ಬಿ.ವಿ. ಭೂಮರಡ್ಡಿ ಕಾಲೇಜು ಆವರಣದಲ್ಲಿರುವ ಸಾರ್ವಜನಿಕ ಸಮಾರಂಭ ವೇದಿಕೆಯನ್ನು ಮೆರವಣಿಗೆ ತಲುಪಿದೆ.

21 hr 7 min agoSeptember 3, 2025 6:12 pm

ಸಾರ್ವಜನಿಕರಿಂದ ಜಯಘೋಷ, ಮೆರವಣಿಗೆಗೆ ಸ್ವಾಗತ

ಬೊಮ್ಮಗೊಂಡೇಶ್ವರ ವೃತ್ತ, ರಾಣಿ ಚೆನ್ನಮ್ಮ ವೃತ್ತ, ಮತ್ತಿತರ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕರು ಹೂವು ಹಾಕಿ, ಜಯಘೋಷ ಹಾಕಿ ಬಸವ ಸಂಸ್ಕೃತಿ ಮೆರವಣಿಗೆಗೆ ಸ್ವಾಗತ ಕೋರುತ್ತಿದ್ದಾರೆ.

21 hr 58 min agoSeptember 3, 2025 6:22 pm

ಅಲಂಕೃತ ಲಿಂಗಾಯತ ವಾಹನಗಳು

ವಚನಗ್ರಂಥ, ಇಷ್ಟಲಿಂಗ, ವಿಭೂತಿ, ರುದ್ರಾಕ್ಷಿ ಹೊತ್ತ ಅಲಂಕೃತ ವಾಹನಗಳು.

21 hr 27 min agoSeptember 3, 2025 5:53 pm

ವಚನ ಹೊತ್ತು ಸಾಗಿದ ಶರಣೆಯರು

22 hr 33 min agoSeptember 3, 2025 5:46 pm

ಮೆರವಣಿಗೆಯ ಸಂಭ್ರಮದ ದೃಶ್ಯಗಳು

22 hr 21 min agoSeptember 3, 2025 4:58 pm

ಇಳಕಲ್ ಸೀರೆ, ಬಿಳಿ ಧೋತಿ, ಬಿಳಿ ಪೇಟ

ಶರಣೆಯರು ಸಾಂಪ್ರದಾಯಿಕ ಇಳಕಲ್ ಸೀರೆ, ಕೋರಳಲ್ಲಿ ರುದ್ರಾಕ್ಷಿ, ತಲೆ ಮೇಲೆ ವಚನ ಗ್ರಂಥ ಹೊತ್ತು ಭಾಗಿಯಾಗಿದ್ದಾರೆ.

ಶರಣರು ಬಿಳಿ ಧೋತಿ, ಬಿಳಿ ಪೇಟ, ಬಿಳಿ ಕಮೀಜ್ ತೊಟ್ಟು, ಕೊರಳಲ್ಲಿ ರುದ್ರಾಕ್ಷಿ ಧರಿಸಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ.

22 hr 25 min agoSeptember 3, 2025 4:55 pm

ಮೆರವಣಿಗೆಗೆ ಬಲೂನ್ ಹಾರಿಸಿ ಚಾಲನೆ

ಬಸವ ಸಂಸ್ಕೃತಿ ಮೆರವಣಿಗೆಗೆ ಬಲೂನ್ ಹಾರಿಸುವ ಮೂಲಕ ಸಚಿವ ಈಶ್ವರ ಖಂಡ್ರೆ ಚಾಲನೆ. ವೇದಿಕೆ ಮೇಲೆ ಪೂಜ್ಯರು, ಗಣ್ಯರ ಉಪಸ್ಥಿತಿ.

23 hr agoSeptember 3, 2025 4:19 pm

ಬಸವರಥ ಮೆರವಣಿಗೆಯ ಮುಖ್ಯ ಆಕರ್ಷಣೆ

23 hr 9 min agoSeptember 3, 2025 4:10 pm

ಬೃಹತ್ ಮೆರವಣಿಗೆಗೆ ಭರದಿಂದ ನಡೆಯುತ್ತಿರುವ ತಯಾರಿ

ಬಸವೇಶ್ವರ ವೃತ್ತದಲ್ಲಿ ಬಸವ ಸಂಸ್ಕೃತಿ ಮೆರವಣಿಗೆಯ ಉದ್ಘಾಟನೆಗೆ ವೇದಿಕೆ ಸಜ್ಜಾಗಿದೆ.

ಬಸವೇಶ್ವರ ವೃತ್ತವು ವಿದ್ಯುತ್ ದೀಪ, ಬಸವಧ್ವಜ ಹಾಗೂ ಹೂವಿನಿಂದ ಅಲಂಕಾರಗೊಂಡಿದೆ.

ಬಸವೇಶ್ವರ ವ್ರತ್ತದಿಂದ ಬಿ.ವಿ. ಭೂಮರೆಡ್ಡಿ ಕಾಲೇಜು ಆವರಣದವರೆಗೆ ಮೆರವಣಿಗೆ ಸಾಗಲಿದೆ. 2 ಕಿಮೀ ದೂರ.

1 day 2 hr agoSeptember 3, 2025 1:17 pm

ಸಂವಾದ ಕಾರ್ಯಕ್ರಮ ಮುಕ್ತಾಯ

ಸಾಣೇಹಳ್ಳಿ ಶಿವಸಂಚಾರ ಕಲಾ ತಂಡದ ‘ಜಯ ಕಲ್ಯಾಣಕೆ’ ಶರಣ ಗೀತೆಯೊಂದಿಗೆ ಸಂವಾದ ಕಾರ್ಯಕ್ರಮ ಕೊನೆಗೊಂಡಿತು.

ಸಂವಾದದ ನಂತರ ಪ್ರಸಾದ ಮಾಡುತ್ತಿರುವ ವಿದ್ಯಾರ್ಥಿ ವೃಂದ.

1 day 2 hr agoSeptember 3, 2025 1:06 pm

ಬಸವಣ್ಣ ಸಾಂಸ್ಕೃತಿಕ ನಾಯಕ ಹೇಗೆ?

ಸಾಣೇಹಳ್ಳಿ ಶ್ರೀಗಳಿಂದ ಉತ್ತರ.

ಬಸವಣ್ಣನವರು ಆಧ್ಯಾತ್ಮಿಕ, ಶೈಕ್ಷಣಿಕ, ನೈತಿಕ, ಸಾಮಾಜಿಕ, ಆರ್ಥಿಕ ಸಮಾನತೆ ಸಾರುವಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಅಧ್ಬುತ ಬದಲಾವಣೆ ತಂದವರು. ಬಸವಣ್ಣನವರಂತ ವ್ಯಕ್ತಿತ್ವ ಬೇರೆ ಮತ್ತೊಂದಿಲ್ಲ, ಬರಿ ಬಸವಣ್ಣನವರಷ್ಟೇ ಅಲ್ಲದೆ ಅವರಂತೆ ಅವರ ತತ್ವ ಆದರ್ಶ ಪಾಲಿಸುವರು ಎಲ್ಲರೂ ಸಾಂಸ್ಕೃತಿಕ ನಾಯಕ ಎನಿಸಿಕೊಳ್ಳಲು ಸಾಧ್ಯ.

1 day 3 hr agoSeptember 3, 2025 12:48 pm

75 ವರ್ಷವಾದರೂ ಭಾಲ್ಕಿ ಶ್ರೀಗಳು ದಣಿವಿಲ್ಲದೆ ದುಡಿಯುತ್ತಿರುವುದು ಹೇಗೆ?

ವಿಜಯಲಕ್ಷ್ಮಿ, ಚನ್ನಬಸವೇಶ್ವರ ಗುರುಕುಲ ಪದವಿಪೂರ್ವ ಕಾಲೇಜು, ಬೀದರ

ಪ್ರಶ್ನೆ : ತಮ್ಮ 75 ರ ವಯಸ್ಸಿನಲ್ಲೂ ದಣಿವಿಲ್ಲದೆ ಭಾಲ್ಕಿ ಶ್ರೀಗಳು ಕಲ್ಯಾಣ ಕರ್ನಾಟಕದಲ್ಲಿ ಸಾಮಾಜಿಕ, ಶೈಕ್ಷಣಿಕವಾಗಿ, ಧಾರ್ಮಿಕ ಕ್ಷೇತ್ರದಲ್ಲಿ ನಿಸ್ವಾರ್ಥ ಮನೋಭಾವದಿಂದ ಕೆಲಸ ಮಾಡಲು, ಮುಖ್ಯವಾಗಿ ಬಸವ ತತ್ವ ಸಾರಲು ಕಾರಣವೇನು??

ಭಾಲ್ಕಿ ಬಸವಲಿಂಗ ಪಟ್ಟದೇವರ ಉತ್ತರ : ನನ್ನ ಹೃದಯ ತುಂಬ ಬಸವನಿಷ್ಠೆ , ಬಸವಪ್ರಜ್ಞೆ ತುಂಬಿಕೊಂಡ ಕಾರಣ ,ಬಸವತತ್ವ ಜಾಗತಿಕ ಮಟ್ಟದಲ್ಲಿ ಬೆಳೆಯಬೇಕು ಎನ್ನುವ ಮಹದಾಸೆ ಇದೆ. ನನ್ನ ಕೊನೆ ಉಸಿರು ಇರುವವರೆಗೂ ಶೈಕ್ಷಣಿಕ, ಧಾರ್ಮಿಕ, ಸಾರ್ವಜನಿಕ ಅಭಿವೃದ್ಧಿಗೆ ಶ್ರಮಿಸುತ್ತೇನೆ.

1 day 3 hr agoSeptember 3, 2025 12:36 pm

ಯುದ್ದಗಳನ್ನು ತಡೆಗಟ್ಟಲು ಶರಣರ ಸಂದೇಶವೇನು

ಭಾಲ್ಕಿ ಶ್ರೀಗಳಿಂದ ಉತ್ತರ

1 day 3 hr agoSeptember 3, 2025 12:33 pm

ಬಸವಣ್ಣನವರ ಭಾವಚಿತ್ರ ಯಾಕಿಡುತ್ತಿಲ್ಲ?

ಕರ್ನಾಟಕದ ಸಾಂಸ್ಕೃತಿಕ ನಾಯಕರಾದ ಬಸವಣ್ಣನವರ ಫೋಟೋಗಳನ್ನು ಎಲ್ಲಾ ಕಾರ್ಯಕ್ರಮಗಳಲ್ಲಿ ಯಾಕಿಡುತ್ತಿಲ್ಲ. ನೀವೇನು ಕ್ರಮ ತೆಗೆದುಕೊಳ್ಳುತ್ತಿದೀರ.

ಗದಗಿನ ಶ್ರೀಗಳಿಂದ ಉತ್ತರ

1 day 3 hr agoSeptember 3, 2025 12:26 pm

ದೂರದ ಊರುಗಳಿಂದ ಬಂದ ಶರಣರು ಕನ್ನಡದಲ್ಲಿ ವಚನ ಬರೆದದ್ದು ಏಕೆ?

ಅಫಘಾನಿಸ್ತಾನ, ಸೌರಾಷ್ಟ್ರ, ಕಾಶ್ಮೀರಗಳಂತಹ ದೂರದ ಊರುಗಳಿಂದ ಬಂದ ಶರಣರು ಕನ್ನಡದಲ್ಲಿ ವಚನ ಬರೆದದ್ದು ಏಕೆ?

ಸಾಣೇಹಳ್ಳಿ ಶ್ರೀಗಳು ಉತ್ತರಿಸಿದರು.

1 day 3 hr agoSeptember 3, 2025 11:56 am

ಸಂವಾದ ಶುರುವಾಗಿದೆ

ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಜೊತೆ ಲಿಂಗಾಯತ ಮಠಾಧೀಶರ ಸಂವಾದ ಶುರುವಾಗಿದೆ. ಪೂಜ್ಯ ತೋಂಟದ ಸಿದ್ದರಾಮ ಶ್ರೀಗಳಿಂದ ಆಶಯ ನುಡಿ.

1 day 3 hr agoSeptember 3, 2025 12:13 pm

ಪೂಜ್ಯ ನಿಜಗುಣ ಶ್ರೀಗಳಿಂದ ಸ್ವಾಗತ

1 day 3 hr agoSeptember 3, 2025 12:05 pm

ತುಂಬಿ ತುಳುಕುತ್ತಿರುವ ಸಭಾಂಗಣ

ಡಾ. ಚನ್ನಬಸವ ಪಟ್ಟದ್ದೇವರ ಜಿಲ್ಲಾ ರಂಗಮಂದಿರದಲ್ಲಿ ಕೂರಲು
ಸ್ಥಳವಿಲ್ಲ.

ನಿಂತು ಚಡಪಡಿಸುತ್ತಿರುವ ಮಕ್ಕಳನ್ನು ರುದ್ರಾಕ್ಷಿ ಮಠದ ಅಲ್ಲಮಪ್ರಭು ಶ್ರೀಗಳು ಶಾಂತಿ, ಸಮಾಧಾನದಿಂದ ಇರುವಂತೆ ಕೇಳಿ ಕೊಳ್ಳುತ್ತಿದ್ದಾರೆ.

1 day 3 hr agoSeptember 3, 2025 12:03 pm

ಬೀದರಿನಲ್ಲಿ ಬಸವ ಸಂಸ್ಕೃತಿ ಅಭಿಯಾನ ಚಾಲನೆಯಾಗಿದೆ.

ಬೀದರಿನ ನೃತ್ಯಂಗನಾ ನಾಟ್ಯ ಕಲಾ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ.

Share This Article
2 Comments
  • ಈ ಅಭಿಯಾನದಲ್ಲಿ ಮುಂದೆ ಬರುವ ಜನಗಣತಿಯ ಬಗ್ಗೆ ಅರಿವು ಮೂಡಿಸುವುದು ಅನಿವಾರ್ಯವಾಗಿದೆ. ಲಿಂಗಾಯತ ಎಂದು ಬರೆಸುವ ಮೂಲಕ ಜನಜಾಗೃತಿ ಆಗಬೇಕಾಗಿದೆ. ದಯಮಾಡಿ ಗುರುವರ್ಯರಲ್ಲಿ ಮನವಿ ಈ ವಿಷಯವನ್ನು ನಿಮ್ಮ ಆಶೀರ್ವಚನದಲ್ಲಿ ಮತ್ತೆ ಮತ್ತೆ ತಿಳಿಸಬೇಕಾಗಿ ತಿಳಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ಭಕ್ತಿ ಪೂರ್ವಕ ಶರಣು ಶರಣಾರ್ಥಿಗಳು.
    ಓಂ ಶ್ರೀ ಗುರು ಬಸವ ಲಿಂಗಾಯ ನಮಃ. ಜೈ ಬಸವಣ್ಣ.

  • ದಾವಣಗೆರೆಯಲ್ಲಿ ನಡೆದ ಪಂಚಾಚ್ಯರ್ಯರ ಸಮಾವೇಶದಲ್ಲಿ ಅವರು ವೀರಶೈವ ಲಿಂಗಾಯತ ಎಂದು ಹೇಳಿದ್ದಕ್ಕೆ ಯಾರೂ ಪ್ರತಿಭಾತಿಸಲಿಲ್ಲ. ಎಂಥಹ ತಿಳುವಳ್ಳಿಕೆ.!

Leave a Reply

Your email address will not be published. Required fields are marked *