ವಿಜಯಪುರ
ಸ್ವರ್ಗ ನರಕ, ವರ, ಶಾಪ ಅಂತ ಭೀತಿ ಹುಟ್ಟಿಸೋ ಕಾಲ್ಪನಿಕ ದೇವರುಗಳು ಬೇಡ, ಗಣಪತಿ ಬದಲು ಅಂಬೇಡ್ಕರ್ ಪೂಜಿಸಿ ಎಂದು ಹೇಳಿರುವ ಮನಗೂಳಿ ವಿರಕ್ತ ಮಠದ ಶ್ರೀ ವಿರತೀಶಾನಂದ ಸ್ವಾಮೀಜಿ ಅವರ ಭಾಷಣದ ವಿಡಿಯೋ ತುಣುಕುಗಳು ವೈರಲ್ ಆಗಿವೆ.
ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ನಗರದಲ್ಲಿ ಡಿಸೆಂಬರ್ 29ರಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಭಾರತದಲ್ಲಿ ಶೇಕಡಾ 80ರಷ್ಟು ಜನ ಬುದ್ಧ, ಬಸವ, ಅಂಬೇಡ್ಕರ್ ಪೂಜಿಸುವ ಅಹಿಂದುಗಳು. ನಾವು ಯಾರು ಹಿಂದೂಗಳಲ್ಲ, ಆದರೆ ವೈದಿಕತೆ ಮತ್ತು ಕಾಲ್ಪನಿಕ ದೇವರುಗಳ ಮೂಲಕ ಜನರಲ್ಲಿ ಕಂದಾಚಾರ, ಮೂಢನಂಬಿಕೆ ತಾರತಮ್ಯತೆ ತುಂಬಲಾಗುತ್ತಿದೆ. ನಮಗೆ ತಾರತಮ್ಯತೆ ಮಾಡುವ ಕಾಲ್ಪನಿಕ ದೇವರು ಬೇಡ, ಎಂದು ಹೇಳಿದರು.
ಎರಡು ವರ್ಷದ ಹಿಂದೆ ದಲಿತ ಹುಡುಗರು ಗಣಪತಿ ಕೂರಿಸಲು ಕೋರಿಸಲು ಹೊರಟ್ಟಿದ್ದರು. ಅವರಿಗೆ ನಾನು ಗಣಪತಿ ಬದಲು ಅಂಬೇಡ್ಕರ್ ಪುತ್ತಳಿ ಕೂರಿಸಿ, ಒಂದು ತಿಂಗಳು ಅವರ ಜೀವನ ಪರಿಚಯ ಮಾಡಿಕೊಡಿ ಎಂದು ಹೇಳಿದ್ದೆ ಎಂದು ಸ್ಮರಿಸಿಕೊಂಡರು.