ಬಸವಕಲ್ಯಾಣ
ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ ಬಸವಕಲ್ಯಾಣದಲ್ಲಿ ರಂಭಾಪುರಿ ಶ್ರೀಗಳ ದಸರಾ ದರ್ಬಾರ್ ನಡೆಯಲಿದೆ. ಕಾರ್ಯಕ್ರಮಕ್ಕೆ ಸಚಿವ ಈಶ್ವರ ಖಂಡ್ರೆ, ಶರಣು ಸಲಗರ ಶಾಸಕರ ನೇತೃತ್ವದಲ್ಲಿ ಪೂರ್ವಸಿದ್ಧತೆ ಭರದಿಂದ ಸಾಗುತ್ತಿದೆ.
ಬಸವಕಲ್ಯಾಣ ರಾಷ್ಟ್ರೀಯ ಬಸವದಳದ ತಾಲೂಕ ಅಧ್ಯಕ್ಷ ರವೀಂದ್ರ ಕೋಳಕೂರ ಪ್ರತಿಕ್ರಿಯೆ ನೀಡಿದ್ದಾರೆ.
1) ರಂಭಾಪುರಿ ಶ್ರೀಗಳ ದಸರಾ ದರ್ಬಾರ್ ಬಸವಕಲ್ಯಾಣದಲ್ಲಿ ಈ ಮುಂಚೆ ನಡೆದಿದಿಯೇ?
ಬಸವಕಲ್ಯಾಣ ನಗರದಲ್ಲಿ ಐದು ವರ್ಷಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ನಡೆದಿದೆ, ಮತ್ತು ಇತ್ತೀಚೆಗೆಗೆ ಮೇಕರ ಮತ್ತು ಬೇಲೂರ ಗ್ರಾಮಿಣ ಪ್ರದೇಶದಲ್ಲಿ ಅವರು ಕಾರ್ಯಕ್ರಮ ಮಾಡಿದ್ದಾರೆ. ಅದರಲ್ಲಿ ಸ್ವಾಮಿ(ಐನೋರ)ಗಳು ಸಮುದಾಯ ಹೆಚ್ಚಿನ ಪ್ರಮಾಣದಲ್ಲಿ ಇದ್ದರು.
ಮೂವತ್ತು ವರ್ಷಗಳ ಹಿಂದೆ ಥೇರ ಮೈದಾನದಲ್ಲಿ ಬಹಳ ದೊಡ್ಡ ಪಂಚಾಚಾರ್ಯರ ಕಾರ್ಯಕ್ರಮ ನಡೆದು ವಿವಾದವಾಗಿತ್ತು.
2) ಈ ವರ್ಷದ ದಸರಾ ದರ್ಬಾರಿಗೆ ಸಿದ್ಧತೆ ಹೇಗೆ ನಡೆದಿದೆ? ಯಾವ ಪ್ರಮಾಣದಲ್ಲಿ ಕಾರ್ಯಕ್ರಮ ನಡೆಯುತ್ತಿದೆ?
ಸ್ಥಳಿಯ ಶಾಸಕರು ಆಸಕ್ತಿ ತೋರಿಸುತ್ತಿರುವುದರಿಂದ ಮೊದಲ ಪೂರ್ವಭಾವಿ ಸಭೆ ಹಾರಕೂಡದಲ್ಲಿ ನಡೆದು, ಸಾಕಷ್ಟು ಹಣ ಸಂಗ್ರಹವಾಗಿದೆ. ಕಾರ್ಯಕ್ರಮ ದೊಡ್ಡ ಪ್ರಮಾಣದಲ್ಲಿ ಯಶಸ್ವಿ ಮಾಡಲಿಕ್ಕೆ ಸ್ವಾಗತ ಸಮಿತಿ ಅಧ್ಯಕ್ಷರನ್ನಾಗಿ ಸಚಿವ ಈಶ್ವರ ಖಂಡ್ರೆ ಅವರನ್ನು ಆಯ್ಕೆ ಮಾಡಿದ್ದಾರೆ.
ದೊಡ್ಡ ಪ್ರಮಾಣದಲ್ಲಿ ಹಣ ಸಂಗ್ರಹಣೆ ಆಗಿರುವುದರಿಂದ ಹೆಚ್ಚಿನ ಪ್ರಚಾರ ಕೊಟ್ಟು ಸಾವಿರಾರು ಜನರ ಸೇರಿಸುವ ನಿರೀಕ್ಷೆ ಇದೆ.

4) ಬಸವಕಲ್ಯಾಣದಲ್ಲಿ ದಸರಾ ದರ್ಬಾರನ್ನು ನಡೆಸುವ ಉದ್ಧೇಶವೇನು?
ಇತ್ತೀಚಿಗೆ ಬಸವ ತತ್ವದ ನಿರಂತರ ಕಾರ್ಯಕ್ರಮಗಳಿಂದ ಪಂಚಾಚಾರ್ಯರ ಕಡೆ ಜನರ ಒಲವು, ಸೆಳೆತ ಕಡಿಮೆ ಆಗಿದೆ.
5) ಬಸವಕಲ್ಯಾಣದಲ್ಲಿ ಪಂಚಪೀಠಗಳ ಪ್ರಭಾವ ಹೇಗಿದೆ? ಯಾವ ಪ್ರಮಾಣದಲ್ಲಿ ಅವರ ಸಂಘಟನೆಗಳು, ಭಕ್ತರಿದ್ದಾರೆ?
ಇಲ್ಲಿ ಪಂಚಪೀಠಗಳ ಪ್ರಭಾವವಿಲ್ಲ, ಹಾರಕೂಡ ಶಿವಾಚಾರ್ಯರ ನೇತೃತ್ವದಲ್ಲಿ ಮತ್ತು ಈಶ್ವರ ಖಂಡ್ರೆ ಅವರು ಅದಕ್ಕೆ ಬೆನ್ನೆಲುಬಾಗಿ ಇದ್ದುದ್ದರಿಂದ ಪ್ರಭಾವ ಬೀರಲಿದೆ.
6) ಕಳೆದ ಕೆಲವು ತಿಂಗಳುಗಳಿಂದ ಪಂಚಪೀಠದ ಶ್ರೀಗಳು ಬಸವಣ್ಣ, ಪಂಚಾಚಾರ್ಯರು, ವೀರಶೈವರು ಲಿಂಗಾಯತರು ಒಂದೇ ಎಂದು ಹೇಳುತ್ತಿದ್ದಾರೆ…
ಲಿಂಗಾಯತರು ಮತ್ತು ಪಂಚಾಚಾರ್ಯರು ಒಂದೇ ಎಂದು ಒತ್ತು ಕೊಟ್ಟರೂ, ಸಮಾಜದ ಮೇಲೆ ಪ್ರಭಾವ ಆಗದೆ ಇರುವದರಿಂದ, ಇಂತಹ ಕಾರ್ಯಕ್ರಮಗಳನ್ನು ಮೇಲಿಂದ ಮೇಲೆ ಮಾಡುತ್ತ ಜನರನ್ನು ಒಪ್ಪಿಸಲು ಪ್ರಯತ್ನಿಸುತ್ತಿದ್ದಾರೆ.
ಬಸವ ಕಲ್ಯಾಣದಲ್ಲಿ ರಂಭಾಪುರಿ ಸ್ವಾಮೀಜಿಯವರ ದಸರಾ ದರ್ಬಾರನ್ನು ಅವರ ಮತ್ತು ಪರಿವಾರದ ಪ್ರಮುಖ ಕಾರ್ಯಕ್ರಮವಾದ ಬಸವಣ್ಣನನ್ನು ಸ್ವಾಹಾ ಮಾಡುವ ಭಾಗದ ಒಂದು ಕಾರ್ಯಕ್ರಮವಾಗಿ ತುಂಬಾ ಮುಂದಾಲೋಚನೆ ಇಟ್ಟುಕೊಂಡು ಮಾಡುತ್ತಿದ್ದಾರೆ. ಅವರು ಅಪಪ್ರಚಾರ ಮತ್ತು ಸುಳ್ಳುಗಳನ್ನು ಹೇಳದೆ ಅವರ ಧರ್ಮ ಪ್ರಚಾರ ಮಾಡಿಕೊಳ್ಳಲಿ. ಆದರೆ, ಬಸವಪ್ರಣೀತ ಲಿಂಗಾಯತ ಮಠಾಧೀಷರುಗಳು ರಾಜ್ಯದಾದ್ಯಂತ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಲಿಂಗಾಯತರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ. ರಾಜ್ಯಾದ್ಯಂತ ಇರುವ ಎಲ್ಲಾ ವಿರಕ್ತ ಪರಂಪರೆಯ ಮತ್ತು ಬಸವತತ್ವ ಆಧಾರಿತ ಮಠಾಧೀಶರು ಮತ್ತು ಸ್ವಾಮೀಜಿಗಳು ಈಗಲೇ ಎಚ್ಚೆತ್ತುಕೊಂಡು ಬಸವತತ್ವದ ಜಾಗೃತಿ ಮೂಡಿಸುವ ಕೆಲಸ ಮಾಡಲಿ.
ನಿಮ್ಮ ತರ, ಬಸವ ತತ್ವ ಅಂಥ , ಸುಳ್ಳು ಪ್ರಚಾರ ಅಂತೂ ಮಾಡಿಲ್ಲ, ಮಾಡೊದು ಇಲ್ಲ
ಪಂಚಾಚಾರ್ಯರೇ ಸುಳ್ಳು ಇದ್ದಾಗ, ನೀವೆನು ಸುಳ್ಳನ್ನೇ ಸತ್ಯ ಹೇಳೋದು ಬಸವಣ್ಣ ವಾಸ್ತವ ಜಗತ್ತಿನಲ್ಲಿ ಇದ್ದು ಬಾಳಿ ಬದುಕಿದ್ದರು.ನಿಮ್ಮ ಪಂಚಾಚಾರ್ಯರಲ್ಲಿ ರೇಣುಕಾಚಾರ್ಯರ ಹುಟ್ಟು ಹೇಗೆ ಆಯಿತು ಎಂಬುದನ್ನ ಪ್ರಸ್ತುತಪಡಿಸಿ ಆಮೇಲೆ ನಾಲ್ಕು ಪೀಠಗಳು ಮೊದಲಾಗಿ ಐದನೆಯ ಪೀಠ ಇತ್ತಿತ್ತಲಾಗಿ ಹೊರಹಾಕಿದಿರಿ ಇದು ಎಲ್ಲಾ ಗೊತ್ತಿದ್ದು ನೀವು ಏನು ಬಸವಣ್ಣ ಮತ್ತು ಬಸವ ತತ್ವ ಬಗ್ಗೆ ಮಾತಾಡುವುದು?
ಅವರು ರ ಏನೇ ಮಾಡಲಿ, ಬಸವರ ವೇಷ ಹಾಕಿಸಿ ಅವಮಾನ ಮಾಡುವದನ್ನು ತಡೆಯಬೇಕು.
ಅವರ ಅಸ್ತಿತ್ವ ಉಳಿಸಿಕೊಳ್ಳಲು ಹೇನಗಾಡುವ ಪರಿಸ್ಥಿತಿ ಬಂದಿದೆ. ಇಲ್ಲದಿದ್ದರೆ ಬಸವಣ್ಣನವರನ್ನು ಆದಿಯಾಗಿ ಮಾಡಿಕೊಂಡುಯಾಕೆ ಈ ಕಾರ್ಯಕ್ರಮ
ಮಾಡಬೇಕು? ಅವರಿಗೆ ಶಕ್ತಿ ಇದ್ದರೆ ಶರಣರನ್ನ ಹೊರ ಮಾಡಿ ಕಾರ್ಯಕ್ರಮವನ್ನ ಯಶಸ್ವಿ ಮಾಡಿ ತೋರಿಸಲಿ
ರಾಜಕೀಯ ಮುಖಂಡರು ಧಾರ್ಮಿಕ ಸಭೆಗಳಿಂದ ತಮ್ಮ ಅಸ್ಥಿತ್ವ ಸದಾ ಇರಲು ಹಾಗೂ ಪಂಚಪೀಠಗಳ ಪೂಜ್ಯರು ಸಹ ತಮ್ಮ ಅಸ್ಥಿತ್ವ ಉಳಿಯಲು ಇಂತಹ ಕಾರ್ಯಕ್ರಮಗಳು ಹಮ್ಮಿಕೊಳ್ಳುತ್ತಾರೆ.
ಆದರೆ ಅದರ ಖರ್ಚಿನ ಬಾಬ್ತು ನಮ್ಮ ಅಮಾಯಕ ಸದ್ಭಕ್ತರಿಗೆ ಹೇರುವುದು ಸರಿಯಲ್ಲ.
ಈ ಈಶ್ವರ ಖಂಡ್ರೆ ಅವರಿಗೆ ಯಾವ ಸಿಧ್ದಾಂತವೂ ಇಲ್ಲ , ಇವರು ಬಸವ ತತ್ವದ ವಿರುದ್ದವಾಗಿಯೇ ಈ ವೀರಶೈವ ಪಂಚಾಚಚಾರ್ಯರ ದರ್ಬಾರ್ ಮತ್ತು ಅಡ್ಡಪಲ್ಲಕ್ಜಿ ಮಾಡೋದು , ಹಾಗಾಗಿ ಈಶ್ವರ್ ಖಂಡ್ರೆ ಹಾಗೂ ಸ್ಥಳೀಯ ಶಾಸಕ ಶರಣು ಸಲಗರ್ ಇಬ್ಬರಿಗೂ ಸ್ವಲ್ಪ ಬಿಸಿ ಮುಟ್ಟಿಸಬೇಕು , ಲಿಂಗಾಯತ ಅಸ್ಮಿತೆ ವಿರೋಧಿಸುವ ಈ ಈರಸೈವರಿಗೆ ಈ ಪರಿ ಪ್ರಚಾರ ಸಲ್ಲದು ಎಂದು ಬಹಿರಂಗ ವಿರೋಧ ವ್ಯಕ್ತಪಡುಸಬೇಕು , ನೀವು ಕಾಂಗ್ರೆಸ್ ನಲ್ಲಿ ಇರಿ ಇಲ್ಲ ಬಿಜೆಪಿಯಲ್ಲಿ ಇರಿ ನಮ್ಮ ಅಸ್ಮಿತೆ ವಿರೋಧಿಸುವವರಿಗೆ ಪ್ರತಿರೋಧದ ಬಿಸಿ ಮುಟ್ಟಿಸಲೇಬೇಕು.
ರಾಜ್ಯದಲ್ಲಿ ಪಂಚಪೀಠಗಳ ಪ್ರಭಾವ ಕುಸಿಯುತ್ತಿರುವ ಈ ಸಮಯದಲ್ಲಿ ಅವರು ತಮ್ಮ ಜಿಡ್ಡು ಗಟ್ಟಿದ ಸಂಪ್ರದಾಯವನ್ನು ಉಳಿಸಿಕೊಳ್ಳುವ ಪ್ರಯತ್ನ ಅಷ್ಟೆ.
4 ಮಹನೀಯರು ತಮ್ಮ ಮನದ ಮಾತು, ಮತ್ತು ವಿಚಾರ ಸೂಕ್ತ. ಸಂಗೀತ ಒಂದು ಕಲೆ. ಕೇವಲ ಸಾಹಿತ್ಯ ಪರಿಷತ್ ಅಡಿಯಲ್ಲಿ ಮಾಡಿದರೆ, ಪಂಚಪೀಠ್ ದವರ ಪ್ರಭಾವ ಕುಗ್ಗಬಹುದು. ಕೇವಲ ಪ್ರಸಕ್ತ ಸರಕಾರ ಬಳಸಿ, ಹಣ ವಸೂಲಿ ಮಾಡುವ ವಿಧಾನ ವಾಸ್ತವ. ಗುಲಾಮಗಿರಿಯನ್ನು ಮತ್ತು ಜಾತಿ ವ್ಯವಸ್ಥೆ ಆಧಾರಿತ ಕಾರ್ಯಕ್ರಮ ವಾಗಲಿದೆ.
ಬಸವಾದಿ ಶರಣರ ಚಿಂತಕರು ವಿರಕ್ತ ಮಠಗಳು ಈ ಕಾರ್ಯಕ್ರಮವನ್ನು ಅಸಪಾಲಗೊಳಿಸಲು ಸಿದ್ಧರಾಗಬೇಕು
ಪಂಚ ಪೀಠಗಳು ಲಿಂಗಾಯತರನ್ನು ಆಕರ್ಷಿಸಿ, ಬಿಕ್ಷೆ ಬೇಡಿ, ದಾನ ಪಡೆದು ಲಿಂಗಾಯತ ಧರ್ಮವನ್ನು ತುಳಿಯುವ ಕಾರ್ಯವನ್ನು ಕಳೆದ 135 ವರುಷದಿಂದ ಮಾಡುತ್ತಾ ಬಂದಿದ್ದಾರೆ. ಭಯವೇ ಧರ್ಮದ ಮೂಲ ಅಂತ, ಜನರಲ್ಲಿ ಭಯ ಬಿತ್ತಿ ಬಿಕ್ಷೆ ಪಡೆಯುತ್ತಾರೆ. ಮೂರ್ಖ, ಮೂಢ ಜನತೆ ಪುಣ್ಯ ಬರುತ್ತದೆ ಅಂತ ಅಪಾರ್ಥ ದಾನ ಆಯೋಗ್ಯರಿಗೆ ಕೊಡುತ್ತಾರೆ.
ಅವರ ಕಾರ್ಯಕ್ರಮಕ್ಕೆ ಯಾವುದೇ ಅಡಚಣೆ ಮಾಡಬಾರದು.
ಯಾವ ಊರಲ್ಲಿ ಅಡ್ಡ ಪಲ್ಲಕ್ಕಿ ಇಟ್ಟು ಕೊಳ್ಳಬಹುದೋ ಆ ಊರಲ್ಲಿ ದೊಡ್ಡ ದೊಡ್ಡ ಶಾಶ್ವತ/ ತಾತ್ಕಾಲಿಕ ಕಮಾನು ಮಾಡಿ ಆದರ ಮೇಲೆ ಹಡಪದ ಅಪ್ಪಣ್ಣ, ಮಾಚಿದೇವ, ಹರಳಯ್ಯ, ಕಕ್ಕಯ್ಯ, ಮುಂತಾದ ಹಿಂದೂ ಧರ್ಮದ ದಲಿತ ವರ್ಗದಿಂದ ಬಂದು ಲಿಂಗಾಯತ ಧರ್ಮ ಕಟ್ಟಿದ ಪೂಜ್ಯ ಶರಣರ ಮೂರ್ತಿ ನಿರ್ಮಾಣ ಮಾಡಬೇಕು.
ಆದರ ಕೆಳಗೆ ಇವರ ಅಡ್ಡ ಪಲ್ಲಕ್ಕಿ ಉತ್ಸವ ದಾಟಲಿ.
ಆಗ ಲಿಂಗಾಯತರಿಗೆ ಇವರು ಶಿವಶರಣರಿಗೆ ಕೊಡುವ ಗೌರವ ಗೊತ್ತಾಗುತ್ತದೆ. ಇವರ ಬಣ್ಣ ಹೊರಬೀಳುತ್ತದೆ. ಒಂದು ರಸ್ತೆ ಉಳಿಯದಂತೆ ಸ್ಥಳೀಯ ಗ್ರಾಮ ಸಭೆ, ನಗರ ಸಭೇ ಅನುಮತಿ ಪಡೆದು ಶರಣರ ಮೂರ್ತಿ ಸ್ಥಾಪನೆ ಆಗಲಿ.