ಧರ್ಮದ ಕಾಲಂ ನಲ್ಲಿ ‘ಲಿಂಗಾಯತ’ ಸೇರಿಸಲು ಮನವಿ

ದಾವಣಗೆರೆ

ರಾಜ್ಯ ಸರ್ಕಾರದ ವತಿಯಿಂದ ರಾಜ್ಯಾದ್ಯಂತ ಸೆಪ್ಟೆಂಬರ್ ತಿಂಗಳಲ್ಲಿ ಆರಂಭಗೊಳ್ಳಲಿರುವ ಜಾತಿಗಣತಿ ಹಾಗೂ ಕೇಂದ್ರ ಸರ್ಕಾರ ವತಿಯಿಂದ 2027 ರಲ್ಲಿ ನಡೆಯಲಿರುವ ಜನಗಣತಿ ಪಟ್ಟಿಯಲ್ಲಿ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಕೋಡ್ ಕೊಡಬೇಕೇಂದು ರಾಜ್ಯದ ಮುಖ್ಯಮಂತ್ರಿಗಳಿಗೆ ಹಾಗೂ ಕೇಂದ್ರ ಸರ್ಕಾರದ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಸದಸ್ಯರು ದಾವಣಗೆರೆ ಜಿಲ್ಲೆಯ ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರುದ್ರೇಗೌಡ ಗೋಪನಾಳ, ವಿಶ್ವೇಶ್ವರಯ್ಯ ಬಿ.ಎಂ. ಹೆಮ್ಮನಬೇತೂರು, ಟಿ.ಎಂ. ಶಿವಮೂರ್ತಯ್ಯ ಹಿರೆಮೆಗಳಗೆರೆ, ಅತ್ತಿಗೆರೆ ನಾಗರಾಜ, ಕಕ್ಕರಗೊಳ್ಳದ ನಾಗರಾಜ, ಪೂರ್ಣಿಮಾ ಪ್ರಸನ್ನ, ಕುಸುಮಾ ಲೋಕೇಶ, ಶಿವಬಸಮ್ಮ, ಸುವರ್ಣಮ್ಮ ಮಂಜುನಾಥ್, ‌ಭರಮಣ್ಣ ಮೈಸೂರು, ಸಿದ್ಧೇಶಪ್ಪ ಕರೂರು, ಹನುಮಂತಪ್ಪ ಮಲ್ಲಿಕಾರ್ಜುನ, ಮಲ್ಲೇಶಪ್ಪ ಹಳೆಬಾತಿ
ಸೇರಿದಂತೆ ಅನೇಕ ಬಸವಾನುಯಾಯಿಗಳು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/BC3ULQcPxmhAhKS4XV9R1G

Share This Article
Leave a comment

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ, ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ತಾಲ್ಲೂಕು