“ಅದು ತಿನ್ನಬಾರದು ಎಂದು ಹೇಳಲು ನಾವು ಯಾರು? ಅದು ಅವರ ಇಷ್ಟ, ಅವರ ಆಯ್ಕೆ.”
ಬೆಂಗಳೂರು
ಇತ್ತೀಚೆಗೆ ನಟ ಧನಂಜಯ ಅವರು ಮಾಂಸಾಹಾರ ಸೇವಿಸುವ ವಿಡಿಯೋ ವೈರಲ್ ಆಗಿ ದೊಡ್ಡ ಚರ್ಚೆ ಹುಟ್ಟು ಹಾಕಿದೆ.
ಈ ವಿವಾದದ ಬಗ್ಗೆ ಧನಂಜಯ ಅವರನ್ನು ಹತ್ತಿರದಿಂದ ಬಲ್ಲ ಹಿರಿಯ ನಟಿ ಉಮಾಶ್ರೀ ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
“ಧನಂಜಯ ಅವರಿಗೆ ಬೇಕಾಗಿದ್ದು ಅವರು ತಿಂತಾರೆ. ಇದು ತಿನ್ನಬೇಕು, ಅದು ತಿನ್ನಬಾರದು ಎಂದು ಹೇಳಲು ನಾವು ಯಾರು? ಅದು ಅವರ ಇಷ್ಟ, ಅವರ ಆಯ್ಕೆ. ಮಾಂಸಾಹಾರ ತಿನ್ನದವರು ಧನಂಜಯ ಅವರನ್ನು ಇಷ್ಟ ಪಡುವುದಿಲ್ಲ ಅಂದ್ರೆ ಓಕೆ, ಹೋಗೋದೇನಿದೆ” ಎಂದು ಉಮಾಶ್ರೀ ಕೇಳಿದರು.
ಲಿಂಗಾಯತ ಸಮುದಾಯದವರಾಗಿ ಧನಂಜಯ ಮಾಂಸಾಹಾರ ತಿನ್ನಬಹುದೇ ಎಂದು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆಯಾಗುತ್ತಿದೆ.
“ಧನಂಜಯ ಜಾತಿ ವಿಚಾರಕ್ಕೆ ಅಂಟಿಕೊಂಡಿರುವವನಲ್ಲ. ಯಾರೊಟ್ಟಿಗೂ ಆತ ಆ ರೀತಿ ನಡೆದುಕೊಂಡಿದ್ದು ನಾವು ನೋಡಿಲ್ಲ. ಅದರ ವಾಸನೆ ಕೂಡ ಕಂಡಿಲ್ಲ. ಅವರು ಜಾತಿವಾದಿ ಅಂತ, ಆಹಾರಧರ್ಮದ ಬಗ್ಗೆ ವಿಶಿಷ್ಟವಾದ ಭಾವನೆ ಇಟ್ಟುಕೊಂಡಿದ್ದಾರೆ ಎಂದು ನಮಗೆ ಎಂದೂ ಅನಿಸಿಲ್ಲ,” ಎಂದು ಉಮಾಶ್ರೀ ಹೇಳಿದರು.
ಬಸವತತ್ವದ ಬಗ್ಗೆ ಮಾತನಾಡುವ ಧನಂಜಯ ಮಾಂಸಾಹಾರ ಸೇವಿಸಿದ್ದು ಸರಿಯಾ ಎಂದು ಕೆಲವರು ಕೇಳುತ್ತಿದ್ದಾರೆ.
ಇದಕ್ಕೆ ಉಮಾಶ್ರೀ ಅವರ ಪ್ರತಿಕ್ರಿಯೆ: “ಸಿದ್ದರಾಮಯ್ಯ ಬಸವಣ್ಣನವರ ಬಗ್ಗೆ ಮಾತಾಡ್ತಾರೆ, ಅವರು ನಾನ್ ವೆಜ್ ತಿನ್ನಲ್ವಾ? ನಾನು ಬಸವಣ್ಣನವರ ಬಗ್ಗೆ ಮಾತನಾಡ್ತೀನಿ, ನಾನು ತಿನ್ನಲ್ವಾ? ಬಸವಣ್ಣನವರು ನೀವು ಅದು ತಿನ್ನಿ, ಇದು ತಿನ್ನಿ ಎಂದು ಹೇಳಿಲ್ಲ. ನಿಮ್ಮ ಮನಸ್ಸು, ನಾಲಿಗೆ, ಕೈ ಶುದ್ಧಿ ಆಗಿರಲಿ ಎಂದು ಹೇಳಿದ್ದಾರೆ. ಬಸವಣ್ಣನವರ ತತ್ವಗಳ ಸಾರವನ್ನು ಅಳವಡಿಸಿಕೊಳ್ಳಿ.”
‘ರತ್ನನ್ ಪ್ರಪಂಚ’ ಚಿತ್ರದಲ್ಲಿ ತಾಯಿ ಮಗನಾಗಿ ಉಮಾಶ್ರೀ ಹಾಗೂ ಧನಂಜಯ ನಟಿಸಿದ್ದರು. ಉಮಾಶ್ರೀ ಅವರ ಸಂದರ್ಶನ ಕನ್ನಡ ಫಿಲ್ಮಿ ಬೀಟ್ ನಲ್ಲಿ ಪ್ರಕಟವಾಗಿದೆ.

ಸರಿಯಾದ ಅಭಿಪ್ರಾಯ. ಆಹಾರ ಕ್ರಮದ ಬಗ್ಗೆ ದೊಡ್ಡ ವಿವಾದ ಮಾಡುವ ಅವಶ್ಯಕತೆಯಿಲ್ಲ. ಸಸ್ಯಾಹಾರವೂ ಹಿಂಸೆಯೇ. ಸಸ್ಯಾಗಳನ್ನೂ ಕೊಂದೇ ತಿನ್ನುವುದು. ಸಸ್ಯಾಗಳು ಹಣ್ಣು, ದವಸ, ಧಾನ್ಯ ಉತ್ಪತ್ತಿ ಮಾಡುವುದು ಮನುಷ್ಯರಿಗಾಗಿ ಅಲ್ಲ, ಬದಲಾಗಿ ಅವುಗಳ ವಂಶದ ಮುಂದುವರಿಕೆಗಾಗಿ. ಹಾಗಾಗಿ ನಮ್ಮ ಈ ತಪ್ಪನ್ನು ಮನ್ನಿಸು, ಕ್ಷಮಿಸು ಎನ್ನುವ ಅರ್ಥದಲ್ಲ್ಲಿ ಅದನ್ನು ನಾವು ಕಟ್ಟಿಕೊಂಡಿರುವ ಇಷ್ಟಲಿಂಗಕ್ಕೆ /ದೇವರಿಗೆ ಅರ್ಪಿಸಿ ಕೊಂದು ತಯಾರು ಮಾಡಿರುವ ಆಹಾರವನ್ನು ಪ್ರಸಾದ ರೂಪವಾಗಿ ನಾವು ಆಹಾರವನ್ನು ಸೇವಿಸುತ್ತೇವೆ. ಆದುದರಿಂದ ಆಹಾರದ ವಿಷಯದಲ್ಲಿ ಪ್ರಾಣಿಹಿಂಸೆಯನ್ನು ದೊಡ್ಡ ವಿಷಯವನ್ನಾಗಿ ಮಾಡದೆ ಇರುವುದು ಸೂಕ್ತ.
ನಾನು ಮಾಂಸ ಹಾರಿ. ಮನುಷ್ಯ ನಿಗೆ ಮಾಂಸ ಹಾರ ಅನಿವಾರ್ಯ ಅಲ್ಲ. ಆದರೆ ಸಸ್ಯಾಹಾರ ಅನಿವಾರ್ಯ. ದೇವರು ಮನುಷ್ಯ ನಿಗೆ ಭತ್ತದ ಕೃಷಿ. ನೀರು. ಹಣ್ಣು ಗಳನ್ನು ಕೊಟ್ಟಿದ್ದಾನೆ. ಕೆಲವು ಪ್ರಾಣಿ ಗಳಿಗೂ ಕೊಟ್ಟಿದ್ದಾನೆ. ಕೆಲವು ಆಹಾರ ವಸ್ತು ಗಳು ಬೆಂಕಿ ಯಿಂದ ಲೇ ಬೇಯಿಸಲ್ಪ ಡುತ್ತದೆ. ನಾವು ದೇವರಿಗೆ ಮಾಂಸ ಕೊಟ್ಟು. ನಾವೇ ಅದನ್ನು ತಿಂದು. ದೇವರು ತಿನ್ನಲು ಅವಕಾಶ ಕೊಟ್ಟಿದ್ದಾನೆ ಅಂತ ಹೇಳುತ್ತೇವೆ. ನಾಯಿ. ಬೆಕ್ಕು. ಚಿಕ್ಕ ಚಿಕ್ಕ ಪ್ರಾಣಿ ಗಳನ್ನು ತಿನ್ನುವ ಪ್ರಾಣಿಗಳು. ಮನುಷ್ಯ ನಿಗೆ ಕೆಲಸ ಕಡಿಮೆ ಇದೆ ಎಂದಾಗ. ಬೇಯಿಸಿ ತಿನ್ನುವ ಕೆಲವೊಂದು ಆಹಾರ. ಉಪ ಸಾಮಗ್ರಿ ಗಳನ್ನು ನಮಗೆ ಕೊಟ್ಟ. 1ವರ್ಷದ ಮಗುವಿಗೆ ಹಾಲು. ಮೊಟ್ಟೆ. ಇನ್ನು ಕೆಲವು ಆಹಾರ ಗಳನ್ನು ಕೊಡಬಹುದು. ಆದರೆ 1ವರ್ಷದ ಮಗುವಿಗೆ ಪ್ರಾಣಿಗಳ ಮಾಂಸ ದಿಂದ ತಯಾರಿಸಿದ ಯಾವುದೇ ಆಹಾರ ವನ್ನು ಅನುಕೂಲ ವಾಗುವಂತೆ ಯಾವುದಾದರು ಒಂದು ರೂಪದಲ್ಲಿ ಕೊಡಿ. ಮನುಷ್ಯನ ಭವಿಷ್ಯದ ಯೋಜನೆಗಳು. ಅರೋಗ್ಯ ಮತ್ತು ಆಯುಷ್ಯ ವನ್ನು. ಈ ಪ್ರಕೃತಿ ನಿರ್ಣಯಿಸುತ್ತದೆ 🙏
ಉಪ್ಪು ಉಳಿ ಕಾರ ಇದ್ರೆ ಟೇಬಲ್ ತಿನ್ನಬಹುದು. ನಾಲಿಗೆ ನೆಟ್ಟಗೆ ಇದ್ರೆ ಬಾಳಲಿ ನಿಲ್ಲಬಹುದು…ಜೀವನದಲ್ಲಿ ಎಲ್ಲಾನು ಟೆಸ್ಟ್ ಮಾಡಿ ವೆಸ್ಟ್ ಮಾಡಬೇಡಿ… 🙏🙏
ಅರ್ಥಗರ್ಭಿತ ವಿಶ್ಲೇಷಣೆ
ಸರಿಯಾದ ಮಾತು ಹೇಳಿದಿರಿ ಮೇಡಂ ಆಹಾರ ಸೇವನೆ ಅವರ ಹಕ್ಕು ,ಕಚ್ಚಿ ಬಾಯಿ ನಾವು ಶುದ್ಧವಾಗಿ ಇಟ್ಟುಕೊಳ್ಳಬೇಕು ಮತ್ತು ನಮ್ಮ ನಡೆ ನುಡಿ ಶುದ್ಧ ಇರಬೇಕು .ಅದು ಬಿಟ್ಟು ಅವರು ಆ ಆಹಾರ ತಿನ್ನುತ್ತಾರೆ ಇವರು ಆಹಾರ ತಿನ್ನುತ್ತಾರೆ ಎಂದು ಸುಮ್ಮನೆ ಮಾತನಾಡಬಾರದು ಆಹಾರ ಅವರ ವೈಯಕ್ತಿಕ ಪದ್ಧತಿ ನಾವು ಜಾತಿ ಮೀರಿ ಬೆಳೆಯಬೇಕು ವಿಶ್ವದಲ್ಲಿ ಭಾರತವನ್ನು ಭಾವೈಕ್ಯತೆಯ ನಾಡೆಂದು ಜಗತ್ಜಾತಿಗೆ ಸಂದೇಶವನ್ನು ಸಾರಬೇಕು . ಅಂದಾಗ ಮಾತ್ರ ಭಾರತಯೊಂದು ವಿಶ್ವ ಗುರುವಾಗಿ ಬೆಳೆಯುವುದಕ್ಕೆ ಸಾಧ್ಯವಾಗುತ್ತದೆ.
ಬಸವ ತತ್ವ ಮೂಲ ಉದ್ದೇಶವೇ ಸಕಲ ಪ್ರಾಣಿಗಳಿಗೆ ಲೇಸು ಬಯಸುವುದು.
ಇದು ನಿಜವಾದ ಮಾತು.
ಅಲ್ಲಪ್ಪ ನೀವು ತಿನ್ನಿರಿ ಯಾರದು ಅಭ್ಯಂತರವಿಲ್ಲ ಆದರೆ ಬಂದು ಸಮಾಜದ ಮುಂದೆ ಹಿತವಚನ ಹೇಳಬೇಡಿ ಮಾತಾಡಲು ಅರ್ಹತೆ ಬೇಕಾಲ್ಲವೇ ????
ಬಸವಣ್ಣನವರು ಪ್ರಾಣಿಹಿಂಸೆಯ ಬಗ್ಗೆ ಹೇಳಿದ್ದು. ಪ್ರಾಣಿಗಳನ್ನು ಕೊಂದು ತಿನ್ನುವುದು ಧರ್ಮ ವಲ್ಲ .
ದಯವಿಲ್ಲದ ಧರ್ಮ ಯಾವುದಯ್ಯ ಎಂದಿದ್ದಾರೆ.
ಬಸವ ತತ್ವದ ಬಗ್ಗೆ ಮಾತಾಡೋಕೆ ಮಚ್ಚೆ ಬಸವಣ್ಣನವರ ತತ್ವ ತಿಳಿದು ಮಾತಾಡೋದು ಲೇಸು
ಈರೀತಿಯಾಗಿ ಬಹಿರಂಗವಾಗಿ ತಮ್ಮ ಆಹಾರ ವನ್ನು ಸೇವನೆಮಾಡುವ ವಿಷಯವನ್ನು ಬಹಿರಂಗವಾಗಿ ತೋರಿಸುವುದು ಸಮಂಜಸ ಎನಿಸದು. ಅದು ಏನಿದ್ದರೂ ವಿವಾದ ವಾಗಬಾರದು.