ಬೆಳಗಾವಿ
ವಚನಗಳ ಸಂಶೋಧನಾ ಪಿತಾಮಹ ಡಾ. ಫ.ಗು. ಹಳಕಟ್ಟಿಯವರ ಜಯಂತಿಯ (ಜುಲೈ ೨) ನಿಮಿತ್ತ ಪೂಜ್ಯ ವಾಗ್ದೇವಿ ತಾಯಿ ಹಾಗೂ ಕುಮುದಿನಿ ತಾಯಿಯವರ ಆಶಯದಂತೆ ಈ ಕೆಳಕಂಡ ಬಸವಾದಿ ಶರಣರ ವಚನ ಕಂಠಪಾಠ ಸ್ಪರ್ಧೆಯನ್ನು ಜೂನ್ 29 ಮುಂಜಾನೆ 10ಗಂಟೆಗೆ ನಗರದ ಮಹಾಂತೇಶ ನಗರದ ಫ.ಗು. ಹಳಕಟ್ಟಿ ಭವನದಲ್ಲಿ ಏರ್ಪಡಿಸಲಾಗಿದೆ.
ಗುರು ಬಸವಣ್ಣನವರು, ಅಲ್ಲಮಪ್ರಭು, ಚನ್ನಬಸವಣ್ಣ, ಮಡಿವಾಳ ಮಾಚಿದೇವ, ಅಕ್ಕಮಹಾದೇವಿ, ಶಿವಯೋಗಿ ಸಿದ್ಧರಾಮೇಶ್ವರ, ಅಂಬಿಗರ ಚೌಡಯ್ಯ, ಜೇಡರ ದಾಸಿಮಯ್ಯ, ನೀಲಮ್ಮ, ಅಕ್ಕಮ್ಮ, ಅಮುಗೆ ರಾಯಮ್ಮ, ಸತ್ಯಕ್ಕ, ಮೋಳಿಗೆ ಮಾರಯ್ಯ, ಹಡಪದ ಅಪ್ಪಣ್ಣ, ಉರಿಲಿಂಗಪೆದ್ದಿ ಈ ಎಲ್ಲ ಶರಣರ ಕನಿಷ್ಠ ಐದು ವಚನಗಳನ್ನು ಹೇಳಬೇಕು.
ನಂತರದಲ್ಲಿ ಇದೇ ಶರಣರ ಹೆಚ್ಚಿನ ವಚನಗಳನ್ನು ಹೇಳಬಹುದು ಅಥವಾ ನಿಮಗೆ ಇಷ್ಟವಾದ 12ನೇ ಶತಮಾನದ ಬೇರೆ ಶರಣರ ಹೆಚ್ಚಿನ ವಚನಗಳನ್ನು ಹೇಳಬಹುದು. ವಚನಗಳನ್ನು ಹೇಳಲು ಒಂದು ಗಂಟೆ ಅವಧಿ ನಿಗದಿಪಡಿಸಿರುತ್ತದೆ. ಹೇಳುವ ವಚನಗಳ ಲಿಖಿತ ಪ್ರತಿಯನ್ನು ಕಡ್ಡಾಯವಾಗಿ ತರುವುದು. ವಚನಗಳನ್ನು ಹೇಳಲು ಯಾವುದೇ ವಯಸ್ಸಿನ ನಿರ್ಬಂಧ ಇಲ್ಲ.
ಅತೀ ಹೆಚ್ಚು ವಚನಗಳನ್ನು ಹೇಳಿದವರಿಗೆ ಕ್ರಮವಾಗಿ ಪ್ರಥಮ ಬಹುಮಾನ 5000 ರೂ. ದ್ವಿತೀಯ ಬಹುಮಾನ 3000 ರೂ. ತೃತೀಯ ಬಹುಮಾನ 2000 ರೂ ಮತ್ತು ಸಮಾಧಾನಕರ ಬಹುಮಾನ 1000 ರೂ. ಕೊಡಲಾಗುವುದು.
ನೋಂದಣಿ ಹಾಗೂ ಮಾಹಿತಿಗಾಗಿ ಶರಣ ಮಹಾಂತೇಶ ತೋರಣಗಟ್ಟಿ ಸಂಚಾಲಕರು, ಗುರು ಬಸವ ಬಳಗ ಬೆಳಗಾವಿ ಮೊ. ಸಂ : 99642 01977, 99009 70119 ಇವರನ್ನು ಸಂಪರ್ಕಿಸಲು ಕೋರಲಾಗಿದೆ.